ಆದಿಲ್‌ಶಾಹಿ ಕಾಲದ ನೀರು ಪೂರೈಕೆಯ ಗಾರೆ ಕೊಳವೆ ಪತ್ತೆ


Team Udayavani, Oct 8, 2020, 6:11 PM IST

ಆದಿಲ್‌ಶಾಹಿ ಕಾಲದ ನೀರು ಪೂರೈಕೆಯ ಗಾರೆ ಕೊಳವೆ ಪತ್ತೆ

ವಿಜಯಪುರ: ಆದಿಲ್‌ಶಾಹಿ ಸುಲ್ತಾನರ ಆಡಳಿತ ಕಾಲದಲ್ಲಿ ರಾಜಧಾನಿಯಾಗಿದ್ದ ವಿಜಯಪುರ ನಗರಕ್ಕೆ ನೀರು ಪೂರೈಸುವುದಕ್ಕಾಗಿ ತಾಂತ್ರಿಕವಾಗಿ ಬಳಕೆಯಲ್ಲಿದ್ದ ಪರ್ಶಿಯನ್‌ ತಂತ್ರಜ್ಞಾನದ ಇಟ್ಟಂಗಿ-ಗಾರೆ ಪೈಪ್‌ಲೈನ್‌ ಪತ್ತೆ ಹಚ್ಚುವಲ್ಲಿ
ನಗರದ ಇತಿಹಾಸ ಸಂಶೋಧಕರರೊಬ್ಬರು ಯಶಸ್ವಿಯಾಗಿದ್ದಾರೆ.

ಸಿಕ್ಯಾಬ್‌ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ| ಮುಸ್ತಾಕ್‌ ಅಹಮ್ಮದ್‌ ಇನಾಮದಾರ ಅವರು ಬಿಲಾಲ ಬಿಲವರ ಮತ್ತು ಅಮಿತ್‌ ಹುದ್ದಾರ ಸಹಾಯದಿಂದ ಐತಿಹಾಸಿಕ ನೀರು ಪೂರೈಕೆಯ ಮಣ್ಣಿನ ಪೈಪ್‌ಲೈನ್‌ ಪತ್ತೆ ಹಚ್ಚಿದ್ದಾರೆ. ನೀರು ಸರಬರಾಜಿಗಾಗಿ ಮಣ್ಣಿನಿಂದ ನಿರ್ಮಿಸಿರುವ ಪರ್ಶಿಯನ್‌ ತಂತ್ರಜ್ಞಾನದ ಐತಿಹಾಸಿಕ ನೀರಿನ ಕೊಳವೆ ನಗರದ ಆಸಾರ
ಮಹಲಿನ ಮುಂಭಾಗದಲ್ಲಿ ಪತ್ತೆಯಾಗಿದೆ. ಪಾನಿ ಮಹಲಿನಿಂದ ಬಂದ ಈ ಪೈಪ್‌ ಒಡೆದಿದ್ದು, ಒಂದು ಟಿಸಿಳು ಎಡ ಬದಿಯಲ್ಲಿನ ಯಾಖುತ್‌ ಧಾಬೋಲಿಯತ್ತ ತೆರಳಿದರೆ, ಇನ್ನೊಂದು ಟಿಸಿಳು ಆಸರ ಮಹಲ್‌ ಹೊರ ಭಾಗದದಲ್ಲಿ ಹಾಯ್ದು ಜುಮ್ಮಾ ಮಸೀದಿ ಕಡೆಗೆ ಸಾಗುತ್ತದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ :ಸ್ಟಾಕ್ ಹೋಮ್: ಅಮೆರಿಕದ ಕವಯತ್ರಿಗೆ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿ

ಆದಿಲ್‌ ಶಾಹಿ ಅರಸದ ವೈಭವಯುತ ನಗರ ಜಲ ಸಂರಕ್ಷಣೆ ಹಾಗೂ ಜಲ ವಿತರಣೆ ವಿಷಯದಲ್ಲಿ ತಾಂತ್ರಿಕವಾಗಾಗಿ ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿತ್ತು. ಹೀಗಾಗಿ ದೇಶ-ವಿದೇಶದಿಂದ ಬಂದ ಅನೇಕರು ಇಲ್ಲೇ ನೆಲೆಸಿದ್ದರು. ಹೀಗಾಗಿ ನಗರದಲ್ಲಿ
10 ಲಕ್ಷ ಜನಸಂಖ್ಯೆಯಿಂದಾಗಿ ಉಪ ನಗರಗಳು ಹುಟ್ಟಿಕೊಂಡವು. ಜನರಿಗೆ ಅಗತ್ಯ ಪ್ರಮಾಣದ ನೀರು ಪೂರೈಸಲು ಆದಿಲ್‌ಶಾಹಿ ಅರಸರು ಅನೇಕ ಬೃಹತ್‌ ಕೆರೆ, ಬಾವಿಗಳನ್ನು ನಿರ್ಮಿಸಿ, ನೀರು ಪೂರೈಕೆಗಾಗಿ ಕಾಲುವೆ ಹಾಗೂ ಮಣ್ಣಿನ ಕೊಳವೆ ಮಾರ್ಗಗಳನ್ನು
ನಿರ್ಮಿಸಿದ್ದನ್ನು ಕಾಣಬಹುದು.

ಆದಿಲ್‌ಶಾಹಿ ಅರಸರ ಕಾಲದ ಈ ಜಲ ಕೊಳವೆ (ಪೈಪ್‌) ಪತ್ತೆ ಮಾಡಿದ್ದು, ಮಹಮ್ಮದ ಆದಿಲ್‌ ಶಹಾನ ಕಾಲದಲ್ಲಿ ನಿರ್ಮಿಸಿದ್ದಾಗಿ ಹೇಳುತ್ತಾರೆ. ರಾಜಧಾನಿ ನಗರಕ್ಕೆ ನೀರು ಪೂರೈಕೆ ಮಾಡಲು ನಗರದ ಹೊರ ವಲಯದಲ್ಲಿ ಬೇಗಂ ತಲಾಬ (ಕೆರೆ)
ನಿರ್ಮಿಸಿ, ಅಲ್ಲಿಂದ ನಗರಕ್ಕೆ ನೀರನ್ನು ಸರಬರಾಜು ಮಾಡಲಾಯಿತು. ರಾಜರ ಆದೇಶದಂತೆ ನಗರಕ್ಕೆ ನೀರು ಸರಬರಾಜು ಮಾಡಲು ಅಗತ್ಯ ಇದ್ದ ಕೊಳವೆ ನಿರ್ಮಾಣದ ಹೊಣೆಯನ್ನು ಮನಗೂಳಿ ನಾಡಗೌಡರು ನಿಭಾಯಿಸಿದ್ದರು. ಸದರಿ ನೀರಿನ
ಕೊಳವೆ ಬೇಗಂ ತಲಾಬದಿಂದ ನವಬಾಗ, ಅರ್ಕಿಲ್ಲಾ, ಪಾನಿ ಮಹಲ್‌ ಮೂಲಕ ಹಾದು ಆಸರ ಮಹಲ್‌, ಜುಮ್ಮಾ ಮಸೀದಿ ಕೊನೆಗೆ ಗೋಳಗುಮ್ಮಟ ಸೇರುತ್ತದೆ ಎಂದು ಮುಸ್ತಾಕ್‌ ಇನಾಮದಾರ ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ :ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಸಣ್ಣತನ ಪ್ರದರ್ಶನ: ಕೋನರಡ್ಡಿ

ಭೂಮಿಯಿಂದ ಎತ್ತರದಲ್ಲಿ ಕಟ್ಟೆಯನ್ನು ಕಟ್ಟಿ ಅದರ ಮೇಲೆ ಈ ಮಣ್ಣಿನ ಕೊಳವೆ ಇಟ್ಟು ಇಟ್ಟಂಗಿ ಮತ್ತು ಗಾರೆ ಬಳಸಿ ಕೊಳವೆಗೆ ಹಾನಿಯಾಗದಂತೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಲಾಗಿದೆ.

ಸುಮಾರು 5 ಶತಮಾನ ಗತಿಸಿದರೂ ನೀರು ಸರಬರಾಜಿ ಮಣ್ಣಿನ ಪೈಪ್‌ಲೈನ್‌ ಹಾನಿಯಾಗದೆ ಉಳಿದಿದೆ. ಇದು ಆದಿಲ್‌ ಶಾಹಿ ಅರಸರ ಕಾಲದಲ್ಲಿ ಜಲ ಸಂರಕ್ಷಣೆ ಹಾಗೂ ಪೂರೈಕೆಯಲ್ಲಿದ್ದ ಅದ್ಭುತ ತಂತ್ರಜ್ಞಾನಕ್ಕೆ ಸಾಕ್ಷಿ ಎಂದು ಮುಸ್ತಾಕ್‌ ವಿವರಿಸಿದ್ದಾರೆ.
ಜಿಲ್ಲಾಡಳಿತ ಮತ್ತು ಪುರಾತತ್ವ ಇಲಾಖೆ ಗಮನ ಹರಿಸಿ ಈ ಕೊಳವೆಯನ್ನು ಉಳಿಸಿ ಮುಂದಿನ ಜನಾಂಗಕ್ಕೆ ಹಿಂದಿನ ತಂತ್ರಜ್ಞಾನ ತಿಳಿದುಕೊಳ್ಳುವ ಕೆಲಸ ಮಾಡಬೇಕು.

ಟಾಪ್ ನ್ಯೂಸ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.