ಬಾಗಿಲು ತೆಗೆದ ಕೃಷಿ ಉಪಕರಣಗಳ ಅಂಗಡಿ
ರೈತರ ಸಮಸ್ಯೆಗೆ ಸರಕಾರದಿಂದ ಪರಿಹಾರ
Team Udayavani, Apr 7, 2020, 5:45 AM IST
ಪುತ್ತೂರು/ಬಂಟ್ವಾಳ: ಲಾಕ್ಡೌನ್ ನಡುವೆಯೂ ಕೃಷಿ ಉಪಕರಣಗಳ ಅಂಗಡಿಗಳನ್ನು ತೆರೆಯಲು ಕೇಂದ್ರ ಸರಕಾರ ಅವಕಾಶ ಕಲ್ಪಿಸಿದ್ದು, ಪುತ್ತೂರು ನಗರದಲ್ಲಿ ಕೆಲವು ಕೃಷಿ ಉಪಕರಣಗಳ ಅಂಗಡಿಗಳು ಸೋಮವಾರದಿಂದಲೇ ಬಾಗಿಲು ತೆರೆದು ಸೇವೆ ಆರಂಭಿಸಿವೆ.
ಲಾಕ್ಡೌನ್ ಕಾರಣಕ್ಕೆ ಕೆಲವು ದಿನಗಳಿಂದ ಎಲ್ಲ ವ್ಯಾಪಾರ ವಹಿವಾಟುಗಳೂ ಬಂದ್ ಆಗಿದ್ದವು. ಇದರಿಂದ ನೀರಾವರಿಗೆ ಅಗತ್ಯವಾದ ಪಂಪ್ಸೆಟ್, ಪೈಪ್ ಇತ್ಯಾದಿ ಸಿಗದೆ ರೈತರು ಸಂಕಷ್ಟಕ್ಕೊಳಗಾಗಿದ್ದರು. ಬಿರುಬೇಸಗೆಯ ಈ ದಿನಗಳಲ್ಲಿ ಕೃಷಿಗೆ ಪ್ರತಿದಿನ ನೀರು ಹಾಯಿಸುವುದು ಅನಿವಾರ್ಯವಾಗಿದ್ದು, ಪಂಪ್ಸೆಟ್ಗಳು ಕೆಟ್ಟುಹೋದರೆ ದುರಸ್ತಿ ಮಾಡುವ ಅಂಗಡಿಗಳೂ ಇಲ್ಲದೆ ಕೃಷಿಕರು ದಾರಿ ಕಾಣದಾಗಿದ್ದರು. ಕೆಲವು ಕಡೆ ತರಕಾರಿ, ತೋಟದ ಬೆಳೆಗಳಿಗೆ ನೀರು ಹಾಯಿಸಲಾಗದೆ ಅವು ಒಣಗುವ ಭೀತಿಯೂ ಕಾಡಿತ್ತು. ಅಷ್ಟರಲ್ಲಿ ಕೃಷಿ ಪೂರಕ ಮಳಿಗೆಗಳನ್ನು ತೆರೆದಿರುವುದು ಕೃಷಿಕರಲ್ಲಿ ಸಂತಸ ಮೂಡಿಸಿದೆ.
ಬಂಟ್ವಾಳ ತಾಲೂಕಿನ ಕೃಷಿ ಯಂತ್ರೋಪಕರಣಗಳ 10 ಮಳಿಗೆಯವರು ಪಾಸ್ಗೆ ಅರ್ಜಿ ಸಲ್ಲಿಸಿದ್ದು, 6 ಮಳಿಗೆಗಳಿಗೆ ಪಾಸ್ ಲಭ್ಯವಾಗಿದೆ. ಉಳಿದವರಿಗೂ ಸದ್ಯದಲ್ಲೇ ಅನುಮತಿ ಲಭಿಸಲಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.
“ಲಾಕ್ಡೌನ್ನಿಂದ ಕೃಷಿ ನೀರಾವರಿಗೂ ಸಂಕಷ್ಟ’ ಎಂಬ ವರದಿಯನ್ನು ಉದಯವಾಣಿ ಎಪ್ರಿಲ್ 5ರ ಸಂಚಿಕೆಯಲ್ಲಿ ಪ್ರಕಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ