ನಾವು ಮರೆತ ಆಟ: ಚಿನ್ನಿ ದಾಂಡು


Team Udayavani, Jun 16, 2020, 5:01 AM IST

chinni dandhu

ಒಂದು ರುಪಾಯಿಯ ಖರ್ಚೂ ಆಗದಿದ್ದ, ಟೈಮ್‌ಪಾಸ್‌ ಮತ್ತು ಮನರಂಜನೆಯ ಆಟವೆಂದರೆ ಬಹುಶಃ ಇದೇ ಇರಬೇಕು…

ಚಿಕ್ಕಂದಿನಲ್ಲಿ ಎಲ್ಲಾ ಗಂಡು ಮಕ್ಕಳೂ ಆಡುತ್ತಿದ್ದ ಆಟಗಳಲ್ಲಿ ಚಿನ್ನಿ ದಾಂಡು ಆಟಕ್ಕೆ ಅಗ್ರಸ್ಥಾನ. ಇದನ್ನು ಗಿಲ್ಲಿ ದಾಂಡು/ ಚಿನ್ನಿ ಕೋಲು ಎಂದೂ ಕರೆಯುವುದುಂಟು. ಗ್ರಾಮೀಣ ಭಾಗದ ಮಕ್ಕಳು ಈ ಆಟ ಆಡದೇ ಇರಲು ಸಾಧ್ಯವೇ  ಇಲ್ಲ ಎನ್ನುವಷ್ಟರಮಟ್ಟಿಗೆ, ಇದು ಹಳ್ಳಿಗಳಲ್ಲಿ ಜನಪ್ರಿಯ ಆಗಿತ್ತು. ಎಷ್ಟೋ ಹಳ್ಳಿಗಳಲ್ಲಿ, ಹುಡುಗಿಯರು ಕೂಡ, ಹುಡುಗರಿಗೆ ಸರಿಸಮನಾಗಿ ಈ ಆಟ ಆಡುತ್ತಿದ್ದರು. ಆದರೀಗ, ಕ್ರಿಕೆಟ್‌ನ ಮೋಹ ಹಳ್ಳಿಗಳನ್ನೂ ಆವರಿಸಿಕೊಂಡಿರುವ ಕಾರಣದಿಂದ, ಹಳ್ಳಿಗಳಲ್ಲಿ ಚಿನ್ನಿ ದಾಂಡು ಆಟ ಮರೆಯಾಗುತ್ತಿದೆ.

ಅರ್ಧ ಅಡಿ ಉದ್ದದ, ಎರಡೂ ತುದಿಗಳು ಚೂಪಾಗಿರುವ ಒಂದು ಗಟ್ಟಿಯಾದ ಕೋಲಿನ ತುಂಡು (ಇದೇ ಚಿನ್ನಿ ಅಥವಾ ಗಿಲ್ಲಿ), ಇದರ ಮೂರು ಪಟ್ಟು ಉದ್ದವಿರುವ  ರೂಲರ್‌ ಆಕಾರದ ಇನ್ನೊಂದು ಗಟ್ಟಿಯಾದ ಕೋಲು (ಇದೇ ದಾಂಡು)- ಈ ಆಟಕ್ಕೆ ಅಗತ್ಯವಿರುವ ಸಲಕರಣೆಗಳು ಇಷ್ಟೇ. ಊರ ಹೊರಗಿನ/ ಶಾಲೆಯ ಮೈದಾನ ಅಥವಾ ಮನೆಯ ಎದುರಿನ ವಿಶಾಲ ಅಂಗಳದಲ್ಲಿ ಈ ಆಟ  ಆಡಲಾಗುತ್ತಿತ್ತು. ಇಬ್ಬರಿದ್ದರೂ ಆಡಬಹುದು. 8-10 ಜನರ ತಂಡವಿದ್ದರೆ, ಆಗ ಎರಡು ಟೀಮ್‌ ಮಾಡಿಕೊಂಡು ಆಡಬಹುದು. ಇದು, ಚಿನ್ನಿ ದಾಂಡು ಆಟದ ವಿಶೇಷ.

ಮೊದಲು, ಗಿಲ್ಲಿ ಇಡಬೇಕಾದ ಜಾಗವನ್ನು ಮಾರ್ಕ್‌ ಮಾಡುವುದು. ನಂತರ ಯಾರು ಮೊದಲು ಆಡುವುದೆಂದು ನಿರ್ಧರಿಸುವುದು, ಆಮೇಲೆ, ನೆಲದ ಮೇಲೆ ಗಿಲ್ಲಿ ಇಟ್ಟು, ಚೂಪಾಗಿರುವ ಅದರ ತುದಿಗೆ ದಾಂಡಿನಿಂದ ಹೊಡೆಯಬೇಕು. ಗಿಲ್ಲಿ  ಮೇಲೆ ಚಿಮ್ಮಿದ ತಕ್ಷಣ, ಅದನ್ನು ದೂರ ಹೋಗುವಂತೆ ಹೊಡೆಯಬೇಕು. ಮೇಲೆ  ಚಿಮ್ಮಿದಾಗೆಲ್ಲಾ ದಾಂಡಿನ ಹೊಡೆತಕ್ಕೆ ಚಿನ್ನಿ ಸಿಗುವುದಿಲ್ಲ. ಇಲ್ಲಿ ಮೂರು ಬಾರಿ ಮಾತ್ರ ದಾಂಡು ಬೀಸಲು ಅವಕಾಶ ಇರುತ್ತದೆ. ಮೂರು ಬಾರಿಯೂ ಚಿನ್ನಿ ಹೊಡೆತಕ್ಕೆ ಸಿಗಲಿಲ್ಲ ಅಂದರೆ, ಆಟಗಾರನ ಪಾಳಿ  ಮುಗಿದಂತೆ.

ಇದು ಚಿನ್ನಿ ದಾಂಡು ಆಟದ ಸ್ವರೂಪ. ಹೀಗೆ ಹೊಡೆದಾಗ, ಚಿನ್ನಿಯನ್ನು ನೆಲಕ್ಕೆ ಬೀಳುವ ಮೊದಲೇ ಎದುರಾಳಿ  ತಂಡದವರು ಕ್ಯಾಚ್‌ ಹಿಡಿದರೆ,  ದಾಂಡು ಹಿಡಿದಿದ್ದವ ಔಟ್‌ ಎಂದು ಅರ್ಥ. ಒಂದು ವೇಳೆ ಕ್ಯಾಚ್‌ ಹಿಡಿಯಲು ಆಗದಿದ್ದರೆ,  ಚಿನ್ನಿಯನ್ನು ಬಿದ್ದ ಸ್ಥಳದಿಂದ ದಾಂಡು ಹಿಡಿದ ಆಟಗಾರ ಇರುವ ಕಡೆಗೆ ಎಸೆಯಬೇಕು. ಆಗೇನಾದರೂ ಆ ಚಿನ್ನಿ ಮೊದಲೇ ಮಾರ್ಕ್‌ ಮಾಡಿದ್ದ ಸ್ಥಳಕ್ಕೇ ಹೋಗಿ ಬಿದ್ದರೆ, ಆಗಲೂ ಆಟಗಾರ ಔಟ್‌ ಎಂದೇ  ಅರ್ಥ. ಆ ಚಿನ್ನಿ ತನ್ನೆಡೆಗೆ ಹಾರಿ ಬರುವಾಗಲೇ, ಅದನ್ನು ದಾಂಡಿನ   ನೆರವಿನಿಂದ ತಡೆಯಲು ಆಟಗಾರ ಪ್ರಯತ್ನಿಸುತ್ತಾನೆ.

ಹೀಗೆ ಮುಂದುವರಿಯುತ್ತದೆ ಚಿನ್ನಿ ದಾಂಡು ಆಟ. ಅಲರ್ಟ್‌ ಆಗಿ ನಿಲ್ಲುವುದು, ಗುರಿಯಿಟ್ಟು ಹೊಡೆಯುವುದು, ಓಡುವುದು,  ಜೋರಾಗಿ ಕೈ ಬೀಸುವುದು… ಇದೆಲ್ಲವೂ ಚಿನ್ನಿ ದಾಂಡು ಆಟದಿಂದ ಸಾಧ್ಯವಾಗುತ್ತಿತ್ತು. ಮುಖ್ಯವಾಗಿ, ಮನೆಯ ಎದುರಿನ ಯಾವುದಾದರೂ ಮರದಲ್ಲಿನ ರೂಲರ್‌ ಗಾತ್ರದ ರೆಂಬೆ ಸಿಕ್ಕಿದರೆ ಸಾಕು; ಚಿನ್ನಿ ದಾಂಡು ಆಟಕ್ಕೆ ಅಗತ್ಯವಿದ್ದ  ವಸ್ತುಗಳು ಸಿಕ್ಕಿಬಿಡುತ್ತಿದ್ದವು. ಬಹಳ ಕಡಿಮೆ ಖರ್ಚಿನ, ಅಥವಾ ಒಂದು ರುಪಾಯಿ ಯ ಖರ್ಚೂ ಆಗದಿದ್ದ, ಟೈಮ್‌ ಪಾಸ್‌ ಮತ್ತು ಮನ ರಂಜನೆಯ ಆಟವೆಂದರೆ ಬಹುಶಃ ಇದೇ ಇರಬೇಕು.

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.