ಕಪ್ಪು ಮೂಗಿನ ಚಿನ್ನದ ಬುದ್ಧ ಮೂರ್ತಿ


Team Udayavani, Mar 15, 2021, 5:00 AM IST

ಕಪ್ಪು ಮೂಗಿನ ಚಿನ್ನದ ಬುದ್ಧ ಮೂರ್ತಿ

ಬೌದ್ಧ ಗುರುವೊಬ್ಬರ ಬಳಿಕ ಚಿನ್ನದಿಂದ ಮಾಡಲಾದ ಒಂದು ಬುದ್ಧ ಮೂರ್ತಿಯಿತ್ತು. ಆ ಮೂರ್ತಿಯ ಬಗ್ಗೆ ಗುರುವಿಗೆ ಬಹಳ ಅಭಿಮಾನ, ವ್ಯಾಮೋಹ. ಪ್ರತೀ ದಿನವೂ ಅದರ ಪದತಲದಲ್ಲಿ ಉತ್ತಮೋತ್ತಮ ಹೂವು ಗಳನ್ನು ಇರಿಸಿ ಅರ್ಚಿಸುತ್ತಿದ್ದರು.
ಸಾಮಾನ್ಯವಾಗಿ ಬೌದ್ಧ ಗುರುಗಳು, ಬಿಕ್ಕುಗಳು ಒಂದೇ ಕಡೆ ವಾಸ್ತವ್ಯ ಹೂಡುವುದಿಲ್ಲ. ಮಠದಿಂದ ಮಠಕ್ಕೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಯಾತ್ರೆ ಹೋಗುತ್ತಿರುತ್ತಾರೆ. ಅಲ್ಲಿ ಕೆಲವು ದಿನ ಇದ್ದು ಮತ್ತೂಂದೆಡೆಗೆ. ಮಳೆ ಗಾಲದ ನಾಲ್ಕು ತಿಂಗಳು ಮಾತ್ರ ಒಂದೆಡೆ ಇರುತ್ತಾರೆ ಅಷ್ಟೆ.

ಬಂಗಾರದ ಮೂರ್ತಿ ಯನ್ನು ಹೊಂದಿದ್ದ ಗುರು ಒಂದು ಬಾರಿ ಚೀನದ ಒಂದು ಬೌದ್ಧ ದೇವಾಲಯಕ್ಕೆ ಹೋಗಿ ತಂಗಿದರು. ಅದೊಂದು ಅಪರೂಪದ ದೇವಾಲಯ. ಅಲ್ಲಿ ಸಾವಿರಕ್ಕೂ ಹೆಚ್ಚು ಬುದ್ಧನ ಮೂರ್ತಿಗಳಿದ್ದವು. ಇಡೀ ಬೆಟ್ಟವನ್ನು ದೇಗುಲವಾಗಿ ಕೊರೆಯಲಾಗಿತ್ತು – ಬಹಳ ವರ್ಷಗಳು ತಗಲಿರಬೇಕು ಈ ಕಾಯಕಕ್ಕೆ. ನಾಲ್ಕು ಹೆಜ್ಜೆ ನಡೆದರೆ ಅಲ್ಲೊಂದು ಗುಡಿ – ಬುದ್ಧಮೂರ್ತಿ; ಕಣ್ಣು ಹಾಯಿಸಿದಲ್ಲೆಲ್ಲ ಗುಡಿಗಳೇ.

ಚಿನ್ನದ ಬುದ್ಧ ಮೂರ್ತಿ ಹೊಂದಿದ್ದ ಗುರುಗಳು ತಂಗಿದ್ದು ಇಂತಹುದೇ ದೇವಾಲಯದಲ್ಲಿ.
ಅಲ್ಲಿ ಅವರಿಗೆ ಒಂದು ಸಮಸ್ಯೆ ಎದುರಾಯಿತು. ಬೆಟ್ಟದ ಮೇಲಿರುವ ದೇವಾಲಯವಾದ್ದರಿಂದ ಗಾಳಿ ಬೀಸು ತ್ತಿತ್ತು; ಚಿನ್ನದ ಬುದ್ಧನಿಗಾಗಿ ಅವರು ಅಗರಬತ್ತಿ ಉರಿಸಿದರೆ ಅದರ ಸುಗಂಧಮಯ ಧೂಮ ಎಲ್ಲೆಂದರಲ್ಲಿ ಸುಳಿಯುತ್ತಿತ್ತೇ ವಿನಾ ಚಿನ್ನದ ಬುದ್ಧ ಮೂರ್ತಿಯ ಮೂಗಿನ ಬಳಿಗೆ ಹೋಗುತ್ತಲೇ ಇರಲಿಲ್ಲ. ತನ್ನ ಚಿನ್ನದ ಬುದ್ಧನಿಗೆ ಮೀಸಲಾಗಿರಬೇಕಿದ್ದ ಧೂಮ ಇತರ ಬುದ್ಧ ಮೂರ್ತಿಗಳನ್ನು ತಲುಪುತ್ತಿದ್ದುದನ್ನು ಅವರಿಗೆ ಸಹಿಸಲು ಸಾಧ್ಯವಾಗಲಿಲ್ಲ.

ಇದಕ್ಕಾಗಿ ಆ ಗುರು ಒಂದು ಉಪಾಯ ಮಾಡಿದರು. ಒಂದು ಉದ್ದನೆಯ ಬಿದಿರಿನ ಕೊಳವೆ ತಂದು, ಅದರೊಳಗೆ ಅಗರಬತ್ತಿ ಉರಿಸಿದರು. ಕೊಳವೆಯ ತುದಿ ಚಿನ್ನದ ಬುದ್ಧ ಮೂರ್ತಿಯ ಮೂಗಿನ ಬುಡ ದಲ್ಲಿರುವಂತೆ ಇರಿಸಿದರು.
ಈ ಉಪಾಯ ದಿಂದಾಗಿ ಅಗರ ಬತ್ತಿಯ ಧೂಮ ಚಿನ್ನದ ಮೂರ್ತಿಗೇ ತಲು ಪಿತೇನೋ ನಿಜ, ಆದರೆ ಮೂರ್ತಿಯ ಮೂಗು ಬತ್ತಿಯ ಹೊಗೆಯಿಂದ ಕಪ್ಪಾಯಿತು!

ಇದು ಆ ಗುರುಗಳನ್ನು ಇನ್ನಷ್ಟು ಚಿಂತೆಗೀಡು ಮಾಡಿತು. ಅವರು ದೇವಾಲಯದ ಮುಖ್ಯ ಪುರೋಹಿತ ರನ್ನು ಕರೆದು ಸಮಸ್ಯೆಯನ್ನು ಹೇಳಿ ಕೊಂಡು ಪರಿಹಾರ ಕೇಳಿದರು.

“ನಿನ್ನ ಬುದ್ಧ, ನನ್ನ ಬುದ್ಧ, ಈ ದೇವಾಲಯದಲ್ಲಿರುವ ಸಹಸ್ರಾರು ಬುದ್ಧರು – ಎಲ್ಲವೂ ಒಂದೇ. ಮೂರ್ತಿಯೇ ಇಲ್ಲದೆ; ಮನಸ್ಸಿನಲ್ಲಿ ಬುದ್ಧನನ್ನು ಧ್ಯಾನಿಸಿ ಅಗರಬತ್ತಿ ಉರಿಸಿದರೂ ಅದರ ಸುವಾಸನೆಯನ್ನು ಆಘ್ರಾಣಿಸುವುದು ಅದೇ ಬುದ್ಧ. ಅದು ಬಿಟ್ಟು ನನ್ನ ಚಿನ್ನದ ಬುದ್ದ ಎಂಬ ವ್ಯಾಮೋಹ, ಸ್ವಾರ್ಥ ಬೆಳೆಸಿ ಕೊಂಡಿರುವುದೇ ನಿಮ್ಮ ಸಮಸ್ಯೆ. ಆ ಸ್ವಾರ್ಥದಿಂದಾಗಿ ನಮ್ಮೆಲ್ಲರ ಮುಖ ವನ್ನೂ ಕಪ್ಪು ಮಾಡಿಬಿಟ್ಟಿರಿ ನೀವು’ ಎಂದು ನಕ್ಕುಬಿಟ್ಟರು ಪುರೋಹಿತರು.

ಇದು ನಮ್ಮ ನಿಮ್ಮ ಸಮಸ್ಯೆಯೂ ಹೌದು. ನಾನು, ನನ್ನದು ಎನ್ನುವ ವ್ಯಾಮೋಹ ಅನುದಿನವೂ ನಮ್ಮ ಮುಖವನ್ನು ಕಪ್ಪಗಾಗಿಸುತ್ತಿರುತ್ತದೆ. ನಮ್ಮ ಮನೆ, ನಮ್ಮ ಕುಟುಂಬ, ಹೆಂಡತಿ – ಮಕ್ಕಳು ಎಂದಷ್ಟೇ ಚಿಂತೆ ಮಾಡುತ್ತಿರುತ್ತೇವೆ. ಪರೋಪಕಾರ, ನಿಸ್ವಾರ್ಥ ಚಿಂತನೆ, ಸಕಾರಾತ್ಮಕ ಮನೋ ಭಾವಗಳಂತಹ ಸದ್ಗುಣಗಳಿಂದ ಎಲ್ಲೆಡೆ ಕಂಪು ಹರಡಲು ಬಿಡದೆ ಹೊಗೆ ನಮ್ಮ ನಮ್ಮ ಮುಖಕ್ಕೆ ಮಸಿ ಹಿಡಿಯುವಂತೆ ವರ್ತಿಸುತ್ತಿರುತ್ತೇವೆ.

ಅದನ್ನು ತ್ಯಜಿಸೋಣ.
( ಸಾರ ಸಂಗ್ರಹ)

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.