ಕೇಂದ್ರ ಬಜೆಟ್ನಿಂದ ರಾಜ್ಯದ ಜನರಿಗೆ ಚೆಂಬು ಸಿಕ್ಕಿದೆ: ರಾಮಲಿಂಗಾರೆಡ್ಡಿ
Team Udayavani, Feb 1, 2022, 9:30 PM IST
ಬೆಂಗಳೂರು:ಕೇಂದ್ರ ಬಜೆಟ್ನಿಂದ ರಾಜ್ಯದ ಜನರಿಗೆ ಚೆಂಬು ಸಿಕ್ಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಎರಡು ವರ್ಷಗಳಿಂದ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ. ಕೋಟ್ಯಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಜನರಿಗೆ ಏನಾದರೂ ಕೊಡುಗೆ ಸಿಗುತ್ತದೆ ಎಂಬ ನಿರೀಕ್ಷೆ ಯಿತ್ತು. ಆದರೆ, ಕೇಂದ್ರ ಸರ್ಕಾರ ಬಡವರು ಹಾಗೂಜನಸಾಮಾನ್ಯರ ಪರ ಇಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ತೆರಿಗೆದಾರರಿಗೆ ಏನೂ ರಿಲೀಫ್ ಇಲ್ಲ. ರಾಜ್ಯಗಳಿಗೆ ಜಿಎಸ್ಟಿ ಪರಿಹಾರ ಮುಂದುವರಿಸುವ ಬಗ್ಗೆ ಪ್ರಸ್ತಾಪವಿಲ್ಲ. ಮುಂದೆಯೂ ಸಿಗುವ ಖಾತರಿಯೂ ಇಲ್ಲ . ಮೋದಿ ಮುಂದುವರಿದರೆ ಚೆಂಬೇ ಗತಿ. ಕೇಂದ್ರ ಬಜೆಟ್ನಲ್ಲೂ ಜನರಿಗೆ ಅದೇ ಸಿಕ್ಕಿದೆ ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯದ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ : ಪಾಸಿಟಿವಿಟಿ ದರ 13.45%
ಎಂಟು ಲಕ್ಷ ಕೋಟಿ ದೊಡ್ಡವರ ಸಾಲ ಮನ್ನಾ ಮಾಡಿದ್ದಾರೆ. ಆದರೆ, ಬಜೆಟ್ನಲ್ಲಿ ರೈತರು,ಬಡವರಿಗೆ ಹೊಸ ಕಾರ್ಯಕ್ರಮವಿಲ್ಲ. ಬಿಪಿಎಲ್ ಕಾರ್ಡ್ ನವರಿಗೆ ಸಬ್ಸಿಡಿ ಕೊಡಬಹುದಿತ್ತು.
ಶ್ರೀಮಂತರ ತೆರಿಗೆ ಕಡಿತ ಮಾಡಲಾಗಿದೆ. ಬಡವರ ಮೇಲೆ ತೆರಿಗೆ ಬಾರ ಮುಂದುವರಿಸಲಾಗಿದೆ. ಇವರು ಯಾರ ಪರ ಎಂಬುದು ಗೊತ್ತಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ