ಜಿಲ್ಲಾಡಳಿತ ಮಾರ್ಗಸೂಚಿ ನಿರ್ಲಕ್ಷಿಸಿದ ಅಂಗಡಿ ಮುಚ್ಚಿಸಿದ ಪೊಲೀಸರು
Team Udayavani, Apr 25, 2020, 5:55 AM IST
ಹೆಜಮಾಡಿ ಗಡಿಯಲ್ಲಿ ಡ್ರೋಣ್ ಕೆಮರಾ ಬಳಸಿ ಪೊಲೀಸರು ತಪಾಸಣೆ ಕಾರ್ಯ ನಡೆಸಿದರು.
ಪಡುಬಿದ್ರಿ: ಕೆಲವೊಂದು ಸೇವೆಗೆ ಲಾಕ್ಡೌನ್ನಿಂದ ವಿನಾಯಿತಿ ನೀಡಿದ್ದರೂ ಜಿಲ್ಲಾಡಳಿತ ಹೊರಡಿಸಿದ ಮಾರ್ಗಸೂಚಿ ಮರೆತು ಶುಕ್ರವಾರ ಪಡುಬಿದ್ರಿ ಸುತ್ತಮುತ್ತ ತೆರೆದಿದ್ದ ಕೆಲ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು.
ಸರಕಾರದ ಮಾರ್ಗಸೂಚಿ ಮಾತ್ರ ತಿಳಿದಿದ್ದ ಮಂದಿ ಜಿಲ್ಲಾಡಳಿತದ ಮಾರ್ಗಸೂಚಿಗೆ ಕಿವಿಗೊಡದೆ ಪಡುಬಿದ್ರಿ ಸುತ್ತಮುತ್ತ ಹಾರ್ಡ್ವೇರ್, ಸಿಮೆಂಟ್, ಇಲೆಕ್ಟ್ರಿಕಲ್, ಪೈಂಟ್, ಫ್ಯಾನ್ಸಿ ಅಂಗಡಿಗಳನ್ನು ತೆರೆದಿದ್ದರು. ಇದನ್ನು ಮನಗಂಡ ಪೊಲೀಸರು ತಪಾಸಣೆ ನಡೆಸಿ ಅಂತಹ ಮಳಿಗೆಯನ್ನು ಬಂದ್ ಮಾಡುವಂತೆ ಸೂಚನೆ ನೀಡಿದರು.
ಸೇವಾ ಪೂರೈಕೆದಾರರಿಗೆ ಅವಕಾಶ ಸ್ವತ್ಛಂದವಾಗಿ ತಿರುಗಾಡದಿರಿಸೇವಾ ಪೂರೈಕೆದಾರ ಪ್ಲಂಬರ್, ಇಲೆಕ್ಟ್ರೀಶಿಯನ್, ಕಾಪೆìಂಟರ್ಗಳಿಗೆ ಸರಕಾರ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆ, ಮನೆಗಳಿಗೆ ತೆರಳಿ ಸೇವೆಯನ್ನು ನೀಡಬಹುದಾಗಿದೆ. ಅಂಗಡಿಗಳನ್ನು ತೆರೆಯುವಂತಿಲ್ಲ. ಕೃಷಿ ಚಟುವಟಿಕೆ, ತೋಟಗಾರಿಕೆ, ಮೀನುಗಾರಿಕೆಯ ಚಟುವಟಿಕೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆಸಬಹುದು. ಮೇ 3ರವರೆಗೆ ಲಾಕ್ಡೌನ್ ಮುಂದು ವರಿಯ ಲಿದೆ. ಸ್ವತ್ಛಂದ ತಿರುಗಾಟಗಳಿಗೆ ಅನುಮತಿ ಇಲ್ಲ ಎಂದು ಉಡುಪಿ
ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಡ್ರೋಣ್ ಕೆಮರಾ ಮೂಲಕ ತಪಾಸಣೆ
ಉಡುಪಿ – ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಹೆಜಮಾಡಿಯಲ್ಲಿ ಸೀಲ್ಡೌನ್ ಮುಂದುವರಿದಿದ್ದು, ಎರಡೂ ತಪಾಸಣಾ ಕೇಂದ್ರ, ಪಡುಬಿದ್ರಿ ಸುತ್ತಮುತ್ತ ಪೊಲೀಸರು ಡ್ರೋಣ್ ಕೆಮರಾ ಬಳಸಿ ತಪಾಸಣೆ ಕಾರ್ಯ ಆರಂಭಿಸಿದ್ದಾರೆ. ಹೆಜಮಾಡಿಯಲ್ಲಿ ಡ್ರೋಣ್ ಕೆಮರಾ ಮೂಲಕ ತಪಾಸಣೆ ಮಾಡುತ್ತಿದ್ದಾಗ ಕೆಮರಾವು ಹೈಟೆನ್ಶನ್ ವಿದ್ಯುತ್ ತಂತಿಗೆ ಅಪ್ಪಳಿಸಿ ನೆಲಕ್ಕುರುಳಿ ಸುಮಾರು 25,000 ರೂ. ನಷ್ಟವಾಗಿದೆ. ತತ್ಕ್ಷಣ ಬದಲಿ ಕೆಮರಾ ಬಳಸಿ ತಪಾಸಣೆ ಮುಂದುವರಿಸಲಾಯಿತು.
ಜಿಲ್ಲೆಯ ವಿವಿಧೆಡೆ ಡ್ರೋಣ್ ಕೆಮರಾ ಮೂಲಕ ತಪಾಸಣೆ ಕಾರ್ಯಕ್ಕಾಗಿ ಪೊಲೀಸ್ ಇಲಾಖೆ ಕಾಪುವಿನ ಛಾಯಾಗ್ರಾಹಕರೊಬ್ಬ ರನ್ನು ಗೊತ್ತುಪಡಿಸಿದೆ. ಅವರೂ ಪೊಲೀಸರೊಂದಿಗೆ ಇದ್ದು ಗುರುವಾರ ದಿಂದ ತಪಾಸಣೆ ಆರಂಭಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ