ಸಾರ್ವಜನಿಕ ಗ್ರಂಥಾಲಯ ಈಗ ಸ್ಮಾರ್ಟ್‌


Team Udayavani, May 2, 2020, 5:25 AM IST

ಸಾರ್ವಜನಿಕ ಗ್ರಂಥಾಲಯ ಈಗ ಸ್ಮಾರ್ಟ್‌

ಉಡುಪಿ: ಲಾಕ್‌ಡೌನ್‌ನಿಂದಾಗಿ ಎಲ್ಲ ಕೆಲಸ ಕಾರ್ಯಗಳು ಇ-ತಂತ್ರಜ್ಞಾನದ ಮೂಲಕ ನಡೆಯುತ್ತಿವೆ. ಗ್ರಂಥಾಲಯವೂ ಮುಚ್ಚಿರುವುದ ರಿಂದ ಸಾರ್ವಜನಿಕರು ಸಹಿತ ವಿದ್ಯಾರ್ಥಿಗಳಿಗೆ ಅನು ಕೂಲವಾಗಲು ಇ -ಲೈಬ್ರರಿಗೆ ಒತ್ತು ನೀಡಲಾಗಿದೆ.

ಇ-ಲೈಬ್ರರಿಯ ಮೂಲಕ ಸಾವಿರಾರು ಪಠ್ಯ ವಿಷಯ, ಲ್ಯಾಬ್‌ಗಳ ಆಡಿಯೋ ವಿಡಿಯೋ, ಜರ್ನಲ್‌ ಮೊದಲಾದ ಸೌಲಭ್ಯ ಸಿಗುತ್ತಿವೆ. ಹೆಚ್ಚಿನ ವಿದ್ಯಾರ್ಥಿಗಳು ಈ ಸರಕಾರಿ ಇ-ಲೈಬ್ರರಿ ಆ್ಯಪ್‌ ಮತ್ತು ವೆಬ್‌ಸೈಟ್‌ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ.

ಕರ್ನಾಟಕ ಡಿಜಿಟಲ್‌ ಪಬ್ಲಿಕ್‌ ಲೈಬ್ರರಿ ಎ. 29ರ ವರದಿ ಪ್ರಕಾರ ಈಗಾಗಲೇ ರಾಜ್ಯದಲ್ಲಿ 89,239 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ದ.ಕ.ದಲ್ಲಿ 1,807 ಮತ್ತು ಉಡುಪಿ ಜಿಲ್ಲೆಯಲ್ಲಿ 605 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ನೋಂದಣಿ ಹೇಗೆ?
www.karnatakadigitalpubliclibrary.org ಮೂಲಕ ಡಿಪಾರ್ಟ್‌ಮೆಂಟ್‌ ಆಫ್ ಪಬ್ಲಿಕ್‌ ಲೈಬ್ರರಿ ಪೇಜ್‌ಗೆ ಹೋಗಬೇಕು. ಅಲ್ಲಿ ಲಾಗಿನ್‌ ಅಥವಾ ರಿಜಿಸ್ಟರ್‌ ಬಟನ್‌ ಕ್ಲಿಕ್‌ ಮಾಡಬೇಕು. ಕ್ರಿಯೇಟ್‌ ನ್ಯೂ ಆಯ್ಕೆ ಮಾಡಿ, ಹೆಸರು ಮೊಬೈಲ್‌ ಸಂಖ್ಯೆ, ಇ-ಮೇಲ್‌ ಐಡಿ ಮತ್ತು ರಾಜ್ಯದ ವಿವಿಧ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ ನಮ್ಮ ಜಿಲ್ಲೆಯ ಗ್ರಂಥಾಲಯವನ್ನು ಆಯ್ಕೆ ಮಾಡಿ ಲಾಗಿನ್‌ ಆಗಬೇಕು. ಅನಂತರ ನಾವು ನೀಡಿದ ನಂಬರ್‌ಗೆ ಒಟಿಪಿ ಬಂದು ಬಳಿಕ ಪಾಸ್‌ವರ್ಡ್‌ ಹಾಕಿದಾಗ ಲಾಗಿನ್‌ ಆಗುತ್ತದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲೂ ಇ-ಸಾರ್ವಜನಿಕ ಗ್ರಂಥಾಲಯ ಲಭ್ಯವಿದ್ದು ಅದನ್ನು ನೇರವಾಗಿ ಡೌನ್‌ಲೋಡ್‌ ಮಾಡಬಹುದಾಗಿದೆ.

ಸಾವಿರಾರು ಆಯ್ಕೆ
35,500 ಇ-ಪುಸ್ತಕ, 4,800 ವಿಡಿಯೋ ಮಾದರಿಯ ಲ್ಯಾಬ್‌, ಇತರ ಪಠ್ಯ ವಿಷಯ, 59,980 ಜರ್ನಲ್‌, 1,112 ಕಿಡ್‌ ಜೋನ್‌ಗಳ ಮಾಹಿತಿಗಳ ಭಂಡಾರ ಲಭ್ಯವಿದೆ.

ಆರ್ಟ್‌ ಆ್ಯಂಡ್‌ ಹ್ಯುಮಾನಿಟಿ ಸಂಬಂಧಿಸಿದಂತೆ ಸಮಾಜಶಾಸ್ತ್ರ, ಇತಿಹಾಸ, ಮನಃಶಾಸ್ತ್ರ, ರಾಜ್ಯಶಾಸ್ತ್ರ, ಲೀಗಲ್‌ ಸ್ಟಡೀಸ್‌, ಪತ್ರಿಕೋದ್ಯಮ ವಿಷಯಗಳು, ಕ್ಲಾಸಿಕ್‌ ಆ್ಯಂಡ್‌ ಲಿಟರೇಚರ್‌ನಲ್ಲಿ ಪ್ರಬಂಧ, ಕಾದಂಬರಿ, ಸಾಹಿತ್ಯ ಕೃತಿ, ವಿಮರ್ಶೆ, ವ್ಯಾಕರಣಗಳು ಲಭ್ಯವಿವೆ.

ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನಲ್ಲಿ ಬ್ಯಾಂಕಿಂಗ್‌, ಮಾರ್ಕೆಟ್‌ -ಮ್ಯಾನೇಜ್‌ಮೆಂಟ್‌, ಇನ್ಶೂರೆನ್ಸ್‌, ಇಕಾನಮಿ, ಫಿನಾನ್ಶಿಯಲ್‌, ಅಕೌಂಟ್‌ ಮೊದಲಾದ ವಿಷಯ. ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿಯಲ್ಲಿ ಕೆಮಿಸ್ಟ್ರಿ, ಫಿಸಿಕ್ಸ್‌, ಮ್ಯಾಥಮ್ಯಾಟಿಕ್ಸ್‌, ಮೆಡಿಸಿನ್‌, ಹೆಲ್ತ್‌ ಸೈನ್ಸ್‌, ಕಂಪ್ಯೂಟರ್‌ ಸೈನ್ಸ್‌, ಐಟಿ ವಿಷಯ ಲಭ್ಯ.

ಉಳಿದಂತೆ ಸಿಮ್ಯುಲೇಶನ್‌ ಲ್ಯಾಬ್‌, ಮ್ನಾಗಜಿನ್‌, ನ್ಯೂಸ್‌ ಪೇಪರ್‌ಗಳು ಹೀಗೆ ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು, ವಿಡಿಯೋ ರೀತಿಯ ಮಾಹಿತಿಗಳು ಲಭ್ಯವಿವೆ. ಜತೆಗೆ ಸಿಇಟಿ, ನೆಟ್‌, ಯುಪಿಎಸ್‌ಸಿ, ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯ ವಿವಿಧ ಪುಸ್ತಕಗಳು, ಹಳೆಯ ಪ್ರಶ್ನೆಪತ್ರಿಕೆಗಳು ಲಭ್ಯವಿವೆ.ಇಂಗ್ಲಿಷ್‌ ಹಿಂದಿ, ಕನ್ನಡ, ಮರಾಠಿ, ಸಂಸ್ಕೃತ, ತಮಿಳು, ತೆಲುಗು ಉರ್ದು ಹಿಂದಿ ಹೀಗೆ 9 ಬಗೆಯ ಭಾಷೆಗಳ ಆಯ್ಕೆ ಇದೆ.

ಉತ್ತಮ ಅವಕಾಶ
ಈ ಲಾಕ್‌ಡೌನ್‌ ಸಮಯದಲ್ಲೂ ಇ-ಲೈಬ್ರರಿ ಬಳಸಿ ಬೇಕಾದ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ. ಪರೀಕ್ಷೆಗೆ ತಯಾರಾಗುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಪುಸ್ತಕಗಳು ಲಭ್ಯವಿದ್ದು, ಪ್ರಯೋಜನ ಪಡೆದುಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವವರಿಗೂ ಬೇಕಾದ ಪುಸ್ತಕಗಳು ಲಭ್ಯವಿವೆ. ಮೊಬೈಲ್‌ ಮೂಲಕ ಸುಲಭವಾಗಿ ಎಲ್ಲ ಮಾಹಿತಿ ಪಡೆಯಬಹುದು.
-ನಳಿನಿ ಜಿ.,
ಮುಖ್ಯ ಗ್ರಂಥಾಲಯ ಅಧಿಕಾರಿ,
ಜಿಲ್ಲಾ ಕೇಂದ್ರ ಗ್ರಂಥಾಲಯ, ಉಡುಪಿ.

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.