ಲಾಕ್‌ಡೌನ್‌ ಮುಗಿದರೂ ಇಳಿಯದ ಮೀನಿನ ದರ


Team Udayavani, Jun 8, 2020, 5:56 AM IST

ಲಾಕ್‌ಡೌನ್‌ ಮುಗಿದರೂ ಇಳಿಯದ ಮೀನಿನ ದರ

ವಿಶೇಷ ವರದಿ- ಮಹಾನಗರ: ಒಂದೆಡೆ ಈ ಬಾರಿಯ ಮೀನುಗಾರಿಕಾ ಋತು ಬಹುತೇಕ ಕೊನೆಗೊಳ್ಳುತ್ತಿದ್ದು, ಇನ್ನೊಂದೆಡೆ ಮೀನಿನ ದರದಲ್ಲಿಯೂ ಭಾರೀ ಏರಿಕೆಯಾಗುತ್ತಿದೆ.

ಲಾಕ್‌ಡೌನ್‌ ಆರಂಭವಾದ ಅನಂತರ ಮೀನಿನ ಅಲಭ್ಯತೆ ಯಿಂದಾಗಿ ಏರುಗತಿಯಲ್ಲಿದ್ದ ಮೀನಿನ ಬೆಲೆ ಈಗಲೂ ಅದೇ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಲಾಕ್‌ಡೌನ್‌ ತೆರವಾದ ಅನಂತರ ಹೊಟೇಲ್‌ಗ‌ಳು ತೆರೆಯಲ್ಪಟ್ಟಿವೆ. ಇದರಿಂದ ಮೀನಿಗೆ ಬೇಡಿಕೆ ಹೆಚ್ಚುತ್ತಿದೆ. ಜತೆಗೆ ಸದ್ಯ ಕರ್ನಾಟಕ ಕರಾವಳಿಯಲ್ಲಿ ಚಂಡಮಾರುತದಿಂದಾಗಿ ನಾಡ ದೋಣಿ ಮೀನುಗಾರಿಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ತಮಿಳು ನಾಡು, ಕೇರಳ, ಆಂಧ್ರ ಪ್ರದೇಶ ಗಳ ಮೀನು ಕರ್ನಾಟಕ ಕರಾವಳಿಗೆ ಸರಬ ರಾಜಾ ಗುತ್ತಿದೆ. ಅಲ್ಲಿನ ಮೀನನ್ನೇ ಖರೀದಿಸಬೇಕಾದ ಅನಿವಾ ರ್ಯದಿಂದಾಗಿ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ.

ಆಳಸಮುದ್ರ ಮೀನುಗಾರಿಕೆ ಸಂಶಯ
“ಮೀನಿನ ಕೊರತೆ ಇರುವುದರಿಂದ ಬೆಲೆ ಸಹಜ ವಾಗಿಯೇ ಹೆಚ್ಚಾಗಿದೆ. ಆದರೆ, ಒಂದೇ ಸಮನೆ ಏರಿಕೆಯಾಗಿಲ್ಲ. ಕೆಲವು ಕಡೆ ಮೀನು ಇದ್ದರೂ ಜನರ ಕೈಯಲ್ಲಿ ಹಣವಿಲ್ಲದೆ ವ್ಯಾಪಾರವಾಗುತ್ತಿಲ್ಲ. ಈಗ ಚಂಡಮಾರುತದಿಂದಾಗಿ ಸಮುದ್ರದಲ್ಲಿ ಯಾವ ಮೀನುಗಾರಿಕೆಯೂ ನಡೆಯುತ್ತಿಲ್ಲ. ಹೊಳೆಯ ಮೀನು ಹಾಗೂ ತಮಿಳುನಾಡಿನ ಮೀನು ಮಾತ್ರ ದೊರೆಯುತ್ತಿವೆ’ ಎನ್ನುತ್ತಾರೆ ಮೀನು ವ್ಯಾಪಾರಿ ನಿತಿನ್‌.

ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಮೀನುಗಳ ಬೆಲೆ ಕೆ.ಜಿ.ಯೊಂದಕ್ಕೆ 40ರಿಂದ 50ರೂ.ಗಳಷ್ಟು ಹೆಚ್ಚಾಗಿತ್ತು. ಅಲ್ಲದೆ ಲಾಕ್‌ಡೌನ್‌ ಸಂದರ್ಭದಲ್ಲಿ 50-60 ರೂ.ಗಳಷ್ಟು ಹೆಚ್ಚಳವಾಗಿತ್ತು. ಸದ್ಯ ಅದು ಇನ್ನೂ ಹೆಚ್ಚ ಳವಾಗಿದೆ.

ಕೋಳಿ ಮಾಂಸ ದರವೂ ಇಳಿದಿಲ್ಲ
ಲಾಕ್‌ಡೌನ್‌ ಆರಂಭದಿಂದಲೇ ಏರಿಕೆಯಾಗಿರುವ ಕೋಳಿ ಮಾಂಸದ ದರವೂ ಇನ್ನೂ ಕಡಿಮೆಯಾಗಿಲ್ಲ. ಸದ್ಯ ಮಂಗಳೂರು ಮತ್ತು ಸುತ್ತಲಿನ ಪ್ರದೇಶದಲ್ಲಿ ಕೆ.ಜಿ.ಯೊಂದಕ್ಕೆ (ಲೈವ್‌ ಚಿಕನ್‌) 175ರಿಂದ 180 ರೂ. ದರವಿದೆ. ಕೋಳಿಯ ಮಾಂಸಕ್ಕೆ (ಸ್ಕಿನ್‌ ಔಟ್‌/ ಫೆದರ್‌ ಔಟ್‌) 250-290 ರೂ.ಗಳಿವೆ. ಕೋಳಿ ಫಾರಂಗಳಿಗೆ ಫೀಡ್ಸ್‌, ಕೆಲಸದಾಳುಗಳು ಹಾಗೂ ನೀರಿನ ಕೊರತೆಯಿಂದಾಗಿ ಬೆಲೆ ಇಳಿಕೆಯಾಗಿಲ್ಲ. ಸದ್ಯ ಕೋಳಿಗಳ ಕೊರತೆಯೂ ಇದೆ. ಜು. 15ರ ಅನಂತರ ಬೆಲೆ ಇಳಿಕೆ ನಿರೀಕ್ಷಿಸಬಹುದು ಎಂದು ಮಂಗಳೂರಿನ ಪ್ರಮುಖ ಕೋಳಿ ವ್ಯಾಪಾರಿಯೋರ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 ತೀರ್ಮಾನವಾಗಿಲ್ಲ
ಸಾಮಾನ್ಯವಾಗಿ ಮೀನಿನ ಲಭ್ಯತೆಗೆ ತಕ್ಕಂತೆ ಮೀನಿನ ದರ ನಿಗದಿಯಾಗುತ್ತದೆ. ಇದರ ಮೇಲೆ ಇಲಾಖೆಗೆ ನಿಯಂತ್ರಣವಿರುವುದಿಲ್ಲ. ಕೋವಿಡ್-19 ಲಾಕ್‌ಡೌನ್‌ ಆರಂಭದಲ್ಲೇ ಕರ್ನಾಟಕ ಕರಾವಳಿಯಲ್ಲಿ ನಿಷೇಧಿಸಲ್ಪಟ್ಟ ಆಳಸಮುದ್ರ ಮೀನುಗಾರಿಕೆಗೆ ಅನುಮತಿ ನೀಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.
 -ಪಾರ್ಶ್ವನಾಥ್‌ ದ.ಕ. ಜಿಲ್ಲಾ ಉಪನಿರ್ದೇಶಕ, ಮೀನುಗಾರಿಕಾ ಇಲಾಖೆ.

ಪ್ರಸ್ತುತ ಮಂಗಳೂರು ಮಹಾನಗರ ಮತ್ತು ಸುತ್ತಮುತ್ತ ಹಾಗೂ ಜಿಲ್ಲೆಯ ವಿವಿಧೆಡೆ ಇರುವ ಮೀನಿನ ದರ ಈ ಕೆಳಗಿನಂತಿದೆ. ಆದರೆ ಮೀನಿನ ದರದಲ್ಲಿ ಜಿಲ್ಲೆಯಲ್ಲಿಯೇ ಒಂದು ಭಾಗದಿಂದ ಇನ್ನೊಂದು ಭಾಗದಲ್ಲಿ ಸ್ವಲ್ಪ ಪ್ರಮಾಣದ ವ್ಯತ್ಯಾಸವಿರುತ್ತದೆ.

ಮೀನು ದರ (ಕೆ.ಜಿ.ಗೆ ರೂ.ಗಳಲ್ಲಿ)
ಬಂಗುಡೆ 300-350
ಬೈಗೆ (ಬೂತಾಯಿ) 250-260
ಪಾಂಪ್ಲೆಟ್‌ 400-500
ನಂಗ್‌ (ಸಣ್ಣದು) 200-220
ನಂಗ್‌ (ದೊಡ್ಡದು) 300-350
ಮಾಂಜಿ (ಸಣ್ಣದು) 400-420
ಬೊಳಿಂಜಿರ್‌ 200
ಮಿಕ್ಸ್‌ ಮೀನು 100
ಸಿಗಡಿ 180
ಸಮುದ್ರದ ಸಿಗಡಿ 350
ಕಾಣೆ (ಸಣ್ಣದು) 800-900
ಕಾಣೆ (ದೊಡ್ಡದು) 1,000-1,100

ಹೊಳೆ ಮೀನು
ಕಾಣೆ (ದೊಡ್ಡದು) 1,100
ನಂಗ್‌ (ದೊಡ್ಡದು) 300
ಪಯ 500
ಕಲ್‌ದೆಂಜಿ 800-900

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.