ಮುಚ್ಚಿದ್ದ ಮೇಗದ್ದೆ ಶಾಲೆ ತೆರೆದರೂ ಶಿಕ್ಷಕರು ಬರುತ್ತಿಲ್ಲ!
ಅತಂತ್ರದಲ್ಲಿ ವಿದ್ಯಾರ್ಥಿಗಳು, ಹೆತ್ತವರ ಅಳಲು
Team Udayavani, Sep 28, 2021, 6:09 AM IST
ಹೆಬ್ರಿ: ಮಕ್ಕಳಿಲ್ಲವೆಂದು ಕಳೆದ ಮೂರು ವರ್ಷಗಳಿಂದ ಮುಚ್ಚಿದ್ದ ಸುಮಾರು 40 ವರ್ಷಗಳ ಇತಿಹಾಸವಿರುವ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಮೇಗದ್ದೆ ಸ.ಕಿ.ಪ್ರಾ. ಶಾಲೆಗೆ ಇದೀಗ ಶಿಕ್ಷಕರು ಬಾರದೆ ವಿದ್ಯಾರ್ಥಿಗಳ ಪರಿಸ್ಥಿತಿ ಅತಂತ್ರವಾಗಿದೆ.
ಮೇಗದ್ದೆ ಗ್ರಾಮಸ್ಥರ ಸತತ ಪ್ರಯತ್ನದಿಂದ ಕೊನೆಗೂ ಶಾಲೆ ತೆರೆದರೂ ಕೆಲವು ತಿಂಗಳುಗಳ ಕಾಲ ಖಾಯಂ ಶಿಕ್ಷಕರಿಲ್ಲದೆ ಆತಂತ್ರವಾಗಿತ್ತು. ಬಳಿಕ ಬೇರೆ ಶಾಲೆಯಿಂದ ಇಬ್ಬರು ಶಿಕ್ಷಕರನ್ನು ಡೆಪ್ಟೆಶನ್ ಆಧಾರದಲ್ಲಿ ನೇಮಕ ಮಾಡಲಾಗಿತ್ತು. ಇದೀಗ ದೂರ ಹಾಗೂ ಇತರ ಕಾರಣ ಗಳಿಂದ ವಾರದಲ್ಲಿ ಒಂದು ದಿನ ಮಾತ್ರ, ಅದೂ ಮಧ್ಯಾಹ್ನ ವರೆಗೆ ಮಾತ್ರ ಓರ್ವ ಶಿಕ್ಷಕಿ ಶಾಲೆಗೆ ಬರುತ್ತಿದ್ದಾರೆ. ಮೊದಲೇ ಕೋವಿಡ್ ಕಾರಣ ದಿಂದ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಿದ್ದಾರೆ. ಅಲ್ಲದೆ ತೀರ ಗ್ರಾಮೀಣ ಪ್ರದೇಶವಾದ್ದರಿಂದ ನೆಟ್ವರ್ಕ್ ಸಮಸ್ಯೆಯಿಂದ ಆನ್ಲೈನ್ ಶಿಕ್ಷಣವೂ ಸಿಗುತ್ತಿಲ್ಲ. ಇದೀಗ ಶಾಲೆ ಆರಂಭವಾದರೂ ಶಾಲೆಗೆ ಶಿಕ್ಷಕರು ಬರದೆ ಮಕ್ಕಳ ಮುಂದಿನ ಶಿಕ್ಷ ಣದ ಗತಿ ಏನು ಎಂದು ಹೆತ್ತ ವರು ದೂರಿದ್ದಾರೆ.
ಧ್ವಜಾರೋಹಣಕ್ಕೂ ಬಂದಿಲ್ಲ
ಕೇವಲ ಮಂಗಳವಾರ ಮಾತ್ರ ಅರ್ಧ ದಿನ ಬರುವ ಶಿಕ್ಷಕರು ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಬಂದಿಲ್ಲ. ಊರಿನವರೇ ಸೇರಿ ಧ್ವಜಾರೋಹಣ ಮಾಡಿದ್ದೇವೆ ಎಂದು ಸ್ಥಳೀಯರಾದ ರಮೇಶ್ ತಿಳಿಸಿದ್ದಾರೆ.
ಖಾಯಂ ಶಿಕ್ಷಕರಿದ್ದರೂ ಅತಿಥಿ ಶಿಕ್ಷಕಿ
ಕೇವಲ 10 ವಿದ್ಯಾರ್ಥಿಗಳಿರುವ ಶಾಲೆಗೆ ಈ ಹಿಂದೆಯೇ ಇಬ್ಬರು ಶಿಕ್ಷಕಿಯರನ್ನು ನಿಯೋಜನೆ ಮಾಡಲಾಗಿದೆ. ಆದರೆ ಕಳೆದ ಹಲವು ತಿಂಗಳಿಂದ ಶಾಲೆಗೆ ಶಿಕ್ಷಕರು ಬರುತ್ತಿಲ್ಲ. ಈ ಹಿಂದೆ ಇಲ್ಲಿ ಗೌರವ ಶಿಕ್ಷಕಿಯಾಗಿದ್ದವರಿಗೆ ಇಬ್ಬರು ಶಿಕ್ಷಕಿಯರು ಸೇರಿ ತಲಾ 1,500 ರೂ.ರಂತೆ ಪಾವತಿಸಿ ನೀವೇ ಮಕ್ಕಳಿಗೆ ಪಾಠ ಮಾಡಿ ಎಂದು ಹೇಳಿ ಅವರು ಇಲ್ಲಿಗೆ ಬಾರದೆ ಬೇರೆ ಶಾಲೆಗೆ ಹೋಗುತ್ತಿದ್ದಾರೆ ಎಂದು ಎಸ್ಡಿಎಂಸಿ ಅಧ್ಯಕ್ಷ ವಿಜಯ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:“ಭಗವಂತನ ಹಸ್ತ’ ಕಂಡು ನಿಬ್ಬೆರಗಾದ ಜನ!
ಅತಂತ್ರದಲ್ಲಿ ಪೋಷಕರು
ಮುಚ್ಚಿದ್ದ ಶಾಲೆಯೊಂದು ತೆರೆಯಿತು ಎಂಬ ಸಂತೋಷದಿಂದ ಮಕ್ಕ ಳನ್ನು ಹೆತ್ತ ವರು ಹತ್ತಿ ರದ ಈ ಶಾಲೆಗೆ ಸೇರಿಸಿದ್ದರು. ಈಗ ಇರುವ 10 ವಿದ್ಯಾರ್ಥಿಗಳಲ್ಲಿ ಇಲ್ಲಿಯ ಸಮಸ್ಯೆಗೆ ಬೇಸತ್ತು ಇಬ್ಬರು ಮಕ್ಕಳು ಖಾಸಗಿ ಶಾಲೆಗೆ ಸೇರ್ಪಡೆ ಯಾಗಿದ್ದಾರೆ. ತೀರ ಬಡತನದಲ್ಲಿರುವ ಹಾಗೂ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದೆ ಸಮಸ್ಯೆ ಎದುರಿಸುತ್ತಿರುವ ಹೆತ್ತ ವರು ಮಕ್ಕಳ ಭವಿಷ್ಯದ ಬಗ್ಗೆ ಆತಂಕಪಡುವಂತಾಗಿದೆ.
ಊರಿನವರ ಸತತ ಪ್ರಯತ್ನ
ತೀರ ಗ್ರಾಮೀಣ ಹಾಗೂ ವಲಯ ವನ್ಯಜೀವಿ ವಿಭಾಗದಲ್ಲಿ ಬರುವ ಈ ಶಾಲೆಯಲ್ಲಿ ಮೂಲಸೌಲಭ್ಯ ಕೊರತೆ ಸಹಿತ ಹತ್ತು ಹಲವು ಸಮಸ್ಯೆ ಗಳಿದ್ದರೂ ಊರಿನವರ ಸತತ ಪ್ರಯತ್ನದ ಶಾಲೆಯನ್ನು ತೆರೆದು ಬೇಕಾಗುವ ಮೂಲಸೌಕರ್ಯಗಳನ್ನು ಕಲ್ಪಿಸಿದ್ದಾರೆ. ಸರಕಾರ ಈ ಬಗ್ಗೆ ಇನ್ನೂ ಕೂಡ ಖಾಯಂ ಶಿಕ್ಷಕರನ್ನು ನೇಮಕ ಮಾಡದೆ ವಿದ್ಯಾರ್ಥಿಗಳು ಅತಂತ್ರರನ್ನಾಗಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ
ಈ ಭಾಗದ ಸಮಾಜ ಸೇವಕ ರಮೇಶ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಸೇರಿ ಹಲವಾರು ಹೋರಾಟಗಳನ್ನು ಮಾಡಿ ಶಾಲೆಯ ಉಳಿವಿಗೆ ಹೋರಾಡಿದ್ದರು. ಇದೀಗ ಮತ್ತೆ ಶಾಲೆ ಅತಂತ್ರವಾಗಿದ್ದು ಗ್ರಾಮಸ್ಥರು ಆಕ್ರೋಶಿತರಾಗಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಯದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಮಕ್ಕಳ ಭವಿಷ್ಯ ಕಾಪಾಡಿ
ಮುಚ್ಚಿದ್ದ ಶಾಲೆಯನ್ನು ಗ್ರಾಮಸ್ಥರ ನಿರಂತರ ಪ್ರಯತ್ನದಿಂದ ಇಲಾಖೆ ಪುನರಾಂಭಿಸಿದೆ. ಆದರೆ ಈಗ ಸರಿಯಾಗಿ ಶಿಕ್ಷಕರು ಬಾರದೆ ವಿದ್ಯಾರ್ಥಿ ಗಳಿಗೆ ತೊಂದರೆಯಾಗಿದೆ. ಇಲ್ಲಿಗೆ ಶಿಕ್ಷಕಿ ಯರ ಬದಲು ಶಿಕ್ಷಕರನ್ನು ನೇಮಿಸಿದ್ದಲ್ಲಿ ಸ್ವಲ್ಪವಾದರೂ ಸಮಸ್ಯೆ ಬಗೆಹರಿಯಲಿದೆ. ಇಲ್ಲಿನ ಸಮಸ್ಯೆ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಇದು ವರೆಗೆ ಯಾವುದೇ ಪ್ರಯೋಜನವಾಗಿಲ್ಲ.
-ರಮೇಶ್ ಮೇಗದ್ದೆ, ಸಾಮಾಜಿಕ ಕಾರ್ಯìಕರ್ತರು
ಆತಂಕ ಬೇಡ
ಗ್ರಾಮೀಣ ಬಸ್ ವ್ಯವಸ್ಥೆ ಇಲ್ಲದ್ದರಿಂದ ಶಿಕ್ಷಕಿಯರು ಹೋಗಲು ಸಮಸ್ಯೆಯಾಗಿದೆ. ಸರಕಾರದಿಂದ ನೇರ ಖಾಯಂ ಶಿಕ್ಷಕರ ನೇಮಕಾತಿಯಾಗುವ ತನಕ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಶೀಘ್ರ ಅತಿಥಿ ಶಿಕ್ಷಕರನ್ನು ನೇಮಿಸಿ ಸಮಸ್ಯೆ ಬಗೆಹರಿಸಲಾಗುವುದು. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಹೆತ್ತವರು ಆತಂಕಪಡಬೇಕಿಲ್ಲ.
-ವೆಂಕಟೇಶ್ ಜಿ. ನಾಯಕ್,
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಕಳ
-ಹೆಬ್ರಿ ಉದಯಕುಮಾರ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ