ತರಕಾರಿ ವ್ಯಾಪಾರಿಯ ಸಾಮಾಜಿಕ ಕಾಳಜಿ
Team Udayavani, May 2, 2020, 5:29 AM IST
ಉಡುಪಿ: ಕೋವಿಡ್- 19 ವಿರುದ್ಧದ ಹೋರಾಟದಲ್ಲಿ ಅನೇಕರು ಎಲೆಮರೆಯ ಕಾಯಿಯಂತೆ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಅಂತಹವರಲ್ಲಿ ಬೀಡಿನಗುಡ್ಡೆಯ ತರಕಾರಿ ವ್ಯಾಪಾರಿ ಬಸವರಾಜ್ ಕೂಡ ಒಬ್ಬರು.
ಲಾಕ್ಡೌನ್ ವೇಳೆ ಸಂಘ ಸಂಸ್ಥೆಗಳು ನಿರಾಶ್ರಿತರು, ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆಗಳನ್ನು ಮಾಡಿದ್ದು ಇದಕ್ಕೆ ಅಗತ್ಯವಿರುವ ತರಕಾರಿಗಳನ್ನು ಹಲವು ದಿನಗಳಿಂದ ಬಸವರಾಜ್ ನೀಡುತ್ತಿದ್ದಾರೆ. ಮೂಲತಃ ರಾಣೆಬೆನ್ನೂರಿನವರಾದ ಇವರು 25 ವರ್ಷಗಳಿಂದ ಉಡುಪಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದು, ಪ್ರತಿ 2 ದಿನಕ್ಕೊಮ್ಮೆ ತರಕಾರಿಗಳನ್ನು ಸಂಘ ಸಂಸ್ಥೆಗೆ ನೀಡುತ್ತಿದ್ದಾರೆ. 3 ಕ್ವಿಂಟಲ್ಗೂ ಹೆಚ್ಚು ತರಕಾರಿ ಈಗಾಗಲೇ ನೀಡಿದ್ದಾರೆ. ಕೆಲವು ಕೂಲಿಕಾರ್ಮಿಕರು, ನಿರಾಶ್ರಿತರಿಗೆ ಉಚಿತ ಮತ್ತು ಕಡಿಮೆ ದರದಲ್ಲಿಯೂ ತರಕಾರಿಗಳನ್ನು ನೀಡುತ್ತಿದ್ದಾರೆ.
ಅಳಿಲು ಸೇವೆ
ವ್ಯಾಪಾರದಲ್ಲಿ ಹಾಕಿದ ಹಣದ ಅಸಲು ಬಂದ ಬಳಿಕ ನನ್ನಲ್ಲಿರುವ ತರಕಾರಿಯನ್ನು ಹಸಿದ ಹೊಟ್ಟೆಗಳಿಗೆ, ಊಟ ತಯಾರಿಸುವ ಸಂಘ ಸಂಸ್ಥೆಗಳಿಗೆ ನೀಡುತ್ತಿದ್ದೇನೆ. ಇದೊಂದು ಅಳಿಲು ಸೇವೆ.
-ಬಸವರಾಜ್, ತರಕಾರಿ ವ್ಯಾಪಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ