ರಾಜ್ಯದ ಹಿರಿಯಜ್ಜಿ ಆನೆಗೆ ಈಗ 84ರ ಹರೆಯ
Team Udayavani, Aug 12, 2019, 7:34 AM IST
ಆನೇಕಲ್: ಬನ್ನೇರುಘಟ್ಟಕ್ಕೆ ಬಂದಾಗ ನೀವು ಈ ಆನೆಯನ್ನು ನೋಡಿಯೇ ನೋಡಿರುತ್ತೀರಿ. ಈಕೆ ನಮ್ಮ ರಾಜ್ಯದಲ್ಲಿರುವ ಅತ್ಯಂತ ಹಿರಿಯ ಸಾಕಿದ ಆನೆ ಗಾಯತ್ರಿ. ವಯಸ್ಸು- 84 ವರ್ಷ.
ಉದ್ಯಾನವನದಲ್ಲಿ ಇರುವ 21 ಆನೆಗಳಿಗೆ ಗಾಯತ್ರಿಯೇ ಹಿರಿಯಾನೆ. ಈ ಅಜ್ಜಿ ಧೈರ್ಯವಂತೆ, ಗಂಡಾನೆಗಳ ಪುಂಡಾಟಗಳಿಗೆ ಬ್ರೇಕ್ ಹಾಕುವ ಟೀಚರ್, ಮರಿಯಾನೆಗಳನ್ನು ಪ್ರೀತಿಯಿಂದ ಸಲಹುವ ಅಮ್ಮ, ವೀಕ್ಷಕರು ಮತ್ತು ಮಾವುತರ ಪ್ರೀತಿಯದ್ದು ಇದು. ಅಂದ ಹಾಗೆ ಈ ‘ಗಾಯತ್ರಿ’ ಗಾತ್ರದಲ್ಲಿ ಮಾತ್ರ ಕುಳ್ಳಗೆ.
ಅರಣ್ಯ ಇಲಾಖೆ ಉಸ್ತುವಾರಿಯಲ್ಲಿ 6 ಆನೆ ಶಿಬಿರಗಳಿವೆ. ಜತೆಗೆ ಮೃಗಾಲಯ ಪ್ರಾಧಿಕಾರಕ್ಕೆ ಒಳಪಟ್ಟಿರುವ 2 ಮೃಗಾಲಯಗಳಲ್ಲಿ ಸುಮಾರು 159 ಸಾಕಾನೆಗಳಿವೆ.
1968ರಲ್ಲಿ ಸೆರೆ ಸಿಕ್ಕಿತ್ತು
ಬಳ್ಳೆ ಅರಣ್ಯ ಪ್ರದೇಶದಿಂದ ಕಾರ್ಯಾಚರಣೆ ಮೂಲಕ ಈ ಆನೆಯನ್ನು ಸೆರೆಹಿಡಿಯಲಾಗಿತ್ತು. 1968ರಲ್ಲಿ ನಡೆದಿದ್ದ ಈ ಕಾರ್ಯಾಚರಣೆ ವೇಳೆ ಹಾಲಿ ಅಜ್ಜಿಗೆ 32 ವರ್ಷ ವಯಸ್ಸೆಂದು ಅಂದಾಜಿಸಲಾಗಿತ್ತು. ಮೂರ್ಕಲ್ ಆನೆ ಶಿಬಿರದಲ್ಲಿ ಪಾಠ ಕಲಿಸಿದ ಬಳಿಕ ಒಂದಷ್ಟು ದಿನ ಸಕ್ರೆಬೈಲು, ಮುತ್ತೋಡಿ ಆನೆ ಶಿಬಿರಗಳಲ್ಲಿ ಆಶ್ರಯ ಪಡೆದಿತ್ತು. ಆ ವೇಳೆಗೆ ಗಾಯತ್ರಿ ಕಾಡಾನೆಗಳನ್ನು ಹಿಡಿಯುವ ಆನೆಗಳಿಗೆ ನಾಯಕಿಯಂತಾಗಿದ್ದಳು.
2010ರಲ್ಲಿ ಬನ್ನೇರುಘಟ್ಟಕ್ಕೆ
2010ರಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬನ್ನೇರುಘಟ್ಟ ವಲಯದಲ್ಲಿ ಪುಂಡಾನೆ ಸೆರೆಹಿಡಿಯಲೆಂದು ಶಿವಮೊಗ್ಗದಿಂದ ಬನ್ನೇರುಘಟ್ಟ ಉದ್ಯಾನವನಕ್ಕೆ ಬಂದ ಗಾಯತ್ರಿ ಮತ್ತು ಲಿಲ್ಲಿ ಆನೆಗಳು ತಮ್ಮ ವೈಶಿಷ್ಟ್ಯಗಳಿಂದ ಇಲ್ಲಿನ ಅಧಿಕಾರಿಗಳಿಗೆ ಇಷ್ಟವಾಗಿ ಉದ್ಯಾನವನದಲ್ಲೇ ಖಾಯಂ ಆನೆಗಳ ಪಟ್ಟಿಗೆ ಸೇರಿಕೊಂಡವು.
ಗಾಯತ್ರಿ ಇಲ್ಲಿಗೆ ಬರುವ ಮೊದಲು ಆರು ಮರಿಗಳಿಗೆ ಜನ್ಮ ನೀಡಿದ್ದಳು. ಇಲ್ಲಿಗೆ ಬಂದ ಬಳಿಕ ಅಜ್ಜಿ ಸ್ಥಾನ ಪಡೆದು ಕ್ಯಾಂಪ್ನ ಮರಿ ಆನೆಗಳನ್ನು ಕಾಳಜಿಯಿಂದ ಸಲಹುವ ಕಾಯಕ ಮಾಡುತ್ತಿದ್ದಾಳೆ.
ವಿಶೇಷ ಆರೈಕೆ
ವರ್ಷದಿಂದ ವರ್ಷಕ್ಕೆ ಗಾಯತ್ರಿ ಹಿರಿಯಳಾಗುತ್ತಿದ್ದಂತೆ ನಾವು ಅದನ್ನು ವಿಶೇಷ ಹಾರೈಕೆ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದೇವೆ. ಕ್ಯಾಂಪ್ಗ್ಳಲ್ಲಿ ಹಿರಿಯ ಆನೆಗಳು ಇದ್ದರೆ ಮಾತ್ರ ಉಳಿದ ಆನೆಗಳು ಭಯ ಮತ್ತು ಶಿಸ್ತಿನಿಂದ ಇರುವುವು. ಹೀಗಾಗಿ ಗಾಯತ್ರಿ ಇರುವುದರಿಂದ ಆನೆ ಕ್ಯಾಂಪ್ನ ಎಲ್ಲ ಆನೆಗಳು ಒಂದು ಶಿಸ್ತಿನ ಪಾಠ ಕಲಿತಿವೆ ಎಂದು ಉದ್ಯಾನವನದ ಸಹಾಯಕ ನಿರ್ದೇಶಕ ಡಾ| ಉಮಾಶಂಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ