ವಿದ್ಯುತ್‌ ಕಾರುಗಳ ಯುಗಾರಂಭ

2021ರಷ್ಟೊತ್ತಿಗೆ ಭಾರತದ ರಸ್ತೆಗಿಳಿಯಲಿವೆ ಹಲವು ಕಂಪನಿಗಳ ಕಾರುಗಳು

Team Udayavani, Jun 9, 2020, 11:30 AM IST

ವಿದ್ಯುತ್‌ ಕಾರುಗಳ ಯುಗಾರಂಭ

ಸಾಂದರ್ಭಿಕ ಚಿತ್ರ

ಜಗತ್ತು ಈಗ ಮತ್ತೆ ಸಂಪೂರ್ಣ ಪರಿಸರ ಸ್ನೇಹಿಯಾಗಲು ಹೊರಟಿದೆ. ಅದಕ್ಕೆ ಪೂರಕವಾಗಿ ಹೊಗೆಯುಗಳದ ವಾಹನಗಳು ರಸ್ತೆಗಿಳಿಯಬೇಕು ಎನ್ನುವುದು ಎಲ್ಲರ ಬಯಕೆ. ಪೆಟ್ರೋಲ್‌, ಡೀಸೆಲ್‌ ವಾಹನಗಳಿಂದ ವಿಪರೀತ ಹೊಗೆ ಬರುವುದರಿಂದ ವಿದ್ಯುತ್‌ ಚಾಲಿತ ವಾಹನಗಳಿಗೆ ಬೇಡಿಕೆ ಶುರುವಾಗಿದೆ. ಇದರ ಮಧ್ಯೆ ತಾಂತ್ರಿಕವಾಗಿ ಬಲಿಷ್ಠ ವಾಗಿರುವ, ಸಂಪೂರ್ಣ ಪರಿಸರಸ್ನೇಹಿಯಾಗಿರುವ ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಜೋರಾಗಿ ಸಾಗಿದೆ. 2021ರೊಳಗೆ ಭಾರತದಲ್ಲಿ ಕಾರ್ಯಾರಂಭ ಮಾಡಲು ಸಜ್ಜಾಗಿರುವ ವಾಹನಗಳ ವಿವರ ಇಲ್ಲಿದೆ.

ವಿದ್ಯುತ್‌ ವಾಹನಗಳು ಯಾಕೆ ಬೇಕು?
● ಪೆಟ್ರೋಲ್‌, ಡೀಸೆಲ್‌ ವಾಹನಗಳಿಂದ ಬರುವ ಹೊಗೆಯಿಂದ ವಾಯುಮಾಲಿನ್ಯ ವಿಪರೀತವಾಗಿದೆ.
● ಹೊಗೆಯುಗುಳುವ ವಾಹನಗಳಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ. ಮಹಾನಗರಗಳು ರೋಗಗ್ರಸ್ತವಾಗುತ್ತಿವೆ.
● ಪೆಟ್ರೋಲ್‌, ಡೀಸೆಲ್‌ ಯಾವತ್ತಿದ್ದರೂ ಮುಗಿದುಹೋಗುವ ತೈಲಗಳು, ಅವುಗಳ ಮೇಲೆ ದೀರ್ಘಾವಧಿ ಅವಲಂಬಿಸಲು ಸಾಧ್ಯವಿಲ್ಲ.

ಅಡ್ಡಿಗಳೇನು?
● ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ವಿದ್ಯುತ್‌ ಚಾಲಿತ ವಾಹನಗಳನ್ನು ರಸ್ತೆಗಿಳಿಸುವಷ್ಟು ತಾಂತ್ರಿಕ ಶ್ರೀಮಂತಿಕೆ ಹೊಂದಿಲ್ಲ.
● ಇಂತಹ ವಾಹನಗಳನ್ನು ಚಾರ್ಜ್‌ ಮಾಡಲು ಬೇಕಾದ ವ್ಯವಸ್ಥೆ ಭಾರತದಲ್ಲಿ ಇಲ್ಲವೇ ಇಲ್ಲ ಎನ್ನುವ ಮಟ್ಟದಲ್ಲಿದೆ.
● ವಾಹನಗಳೂ ತಾಂತ್ರಿಕವಾಗಿ ಬಲಿಷ್ಠವಾಗಿಲ್ಲ. ವಾಹನಗಳ ಬ್ಯಾಟರಿಗಳೂ ಇದುವರೆಗೆ ಹೇಳಿಕೊಳ್ಳುವಷ್ಟು ಸಕ್ಷಮತೆ ತೋರಿಲ್ಲ.

ಸಿದ್ಧವಾಗಿರುವ ಕಾರುಗಳು
ಟಾಟಾ ಅಲ್ಟ್ರೋಜ್‌
ಈ ಕಾರನ್ನು 2019ರಲ್ಲಿ ಒಮ್ಮೆ ಪ್ರದರ್ಶನ ಮಾಡಲಾಗಿತ್ತು. ಟಾಟಾ ಸಂಸ್ಥೆ, ಜಿಪಾನ್‌ ಪವರ್‌ ಟೈನ್‌ ತಂತ್ರಜ್ಞಾನ ಬಳಸಿ ಈ ಕಾರು ತಯಾರಿಸಿದೆ. ಒಮ್ಮೆ ಚಾರ್ಜ್‌ ಮಾಡಿದರೆ 250 ಕಿ.ಮೀ. ಸಂಚರಿಸಬಹುದು. 8 ವರ್ಷ ವಾರಂಟಿ ಇರುವ ಲಿಥಿಯಮ್‌ ಐಯಾನ್‌ ಬ್ಯಾಟರಿ ಹೊಂದಿದೆ.

ಮಹೀಂದ್ರ ಇಎಕ್ಸ್‌ಯುವಿ300
2020ರ ಆಟೋ ಎಕ್ಸ್‌ಪೋದಲ್ಲಿ ಇದು ಮೊದಲ ಬಾರಿ ಕಾಣಿಸಿಕೊಂಡಿತ್ತು. ಮಹೀಂದ್ರದ  ಬಹು ನಿರೀಕ್ಷಿತ ಕಾರೂ ಹೌದು. ಎರಡು ಮಾದರಿಯಲ್ಲಿ ಈ ಕಾರು
ತಯಾರಾಗಿದೆ. ಒಮ್ಮೆ ಚಾರ್ಜ್‌ ಮಾಡಿದರೆ 250ರಿಂದ 300 ಕಿ.ಮೀ. ಸಂಚರಿಸಬಲ್ಲ ಒಂದು ಕಾರು, 350ರಿಂದ 400 ಕಿ.ಮೀ. ಸಂಚರಿಸಬಲ್ಲ ಇನ್ನೊಂದು ಕಾರೂ ಇದೆ. ಇದೂ ಕೂಡಾ ಲಿಥಿಯಮ್‌ ಐಯಾನ್‌ ಬ್ಯಾಟರಿ ಹೊಂದಿದೆ.

ಜಾಗ್ವಾರ್‌ ಐ-ಪೇಸ್‌
ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಈ ಕಾರು ಲಭ್ಯವಿದೆ. 2019ರಲ್ಲಿ ಜಾಗತಿಕ ಕಾರು ಪ್ರಶಸ್ತಿಯಲ್ಲಿ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು.
ಅಂದಿನಿಂದಲೇ ಗ್ರಾಹಕರು ಇದರ ಮೇಲೆ ಕಣ್ಣಿಟ್ಟಿದ್ದಾರೆ. ಒಮ್ಮೆ ಚಾರ್ಜ್‌ ಮಾಡಿದರೆ ಗರಿಷ್ಠ 480 ಕಿ.ಮೀ. ಓಡಿಸಬಹುದು.

ಆಡಿ ಇ-ಟ್ರಾನ್‌
ಈ ಕಾರು ಈಗಾಗಲೇ ಭಾರತ ಪ್ರವೇಶಿಸಿದೆ. ಆದರೆ ಕೊರೊನಾ ಕಾರಣ ರಸ್ತೆಗಿಳಿಯಲು 2021ರವರೆಗೆ ಕಾಯ ಬೇಕಾಗಬಹುದು. 265 ಕಿ.ವ್ಯಾ.
ಸಾಮರ್ಥಯದ ಬ್ಯಾಟರಿ ಹೊಂದಿದೆ. ಒಮ್ಮೆ ಚಾರ್ಜ್‌ ಮಾಡಿದರೆ 400 ಕಿ.ಮೀ. ಸಂಚರಿಸಬಹುದು. 200 ಕಿ.ಮೀ. ವೇಗದಲ್ಲಿ ಸಂಚರಿಸುವ ತಾಕತ್ತು ಹೊಂದಿದೆ.

ಮರ್ಸಿಡಿಸ್‌ ಬೆಂಜ್‌ ಇಕ್ಯೂಸಿ
ಈ ಕಾರು ಇದೇ ವರ್ಷ ಭಾರತ ಪ್ರವೇಶಿಸಲಿದೆ. ಗಂಟೆಗೆ 80 ಕೆಡಬ್ಲ್ಯೂಎಚ್‌ ಸಾಮರ್ಥಯದ ಲಿಥಿಯಮ್‌ ಐಯಾನ್‌ ಬ್ಯಾಟರಿ ಹೊಂದಿದೆ. ಒಮ್ಮೆ ಚಾರ್ಜ್‌
ಮಾಡಿದರೆ ಗರಿಷ್ಠ 400 ಕಿ.ಮೀ. ಸಂಚರಿಸಬಹುದು.

ಪೋರ್ಶೆ ಟಯ್ಕನ್‌
ಈ ಐಷಾರಾಮಿ ಕಾರು ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷ ಆರಂಭದಲ್ಲಿ ಭಾರತ ಪ್ರವೇಶಿಸಬಹುದು. 2020ರಲ್ಲಿ ಇದಕ್ಕೆ ಎರಡು ಜಾಗತಿಕ ಕಾರು
ಪ್ರಶಸ್ತಿ ಬಂದಿದೆ. ಈ ಕಾರನ್ನು ಒಮ್ಮೆ ಚಾರ್ಜ್‌ ಮಾಡಿದರೆ ಗರಿಷ್ಠ 500 ಕಿ.ಮೀ.ವರೆಗೆ ಪ್ರಯಾಣಿಸಬಹುದು.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.