ಕಲಿಕಾ ಸಾಮರ್ಥ್ಯ ಅಳೆಯಲು ಪರೀಕ್ಷೆ ಬೇಕೇ ಬೇಕು
Team Udayavani, May 31, 2021, 6:50 AM IST
ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯವನ್ನು ಅಳೆಯಲು ಮೌಲ್ಯಮಾಪನವು ಒಂದು ಮಾನದಂಡ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವವೂ ಕೂಡ ಅಷ್ಟೇ ಮುಖ್ಯ. ಆದ ಕಾರಣ, ಪರೀಕ್ಷೆ ವಿಚಾರದಲ್ಲಿ ಮಕ್ಕಳಿಗೆ ತೊಂದರೆ ಕೊಡದೇ ಬೇಗನೇ ನಿರ್ಧಾರ ತೆಗೆದುಕೊಳ್ಳಬೇಕು. ಹಾಗೆಯೇ ಪರೀಕ್ಷೆಯನ್ನೂ ಸುರಕ್ಷಿತವಾಗಿ ನಡೆಸಬೇಕು.
ಇದು ರಾಜ್ಯದ ಪೋಷಕರ ಮನವಿ. ಉದಯವಾಣಿ ನಡೆಸಿದ ಸಮೀಕ್ಷೆಯಲ್ಲಿ ಬಹು ಉತ್ಸಾಹದಿಂದ ಪಾಲ್ಗೊಂಡಿದ್ದವರು ಇವರೇ. ಮಕ್ಕಳಿಗೆ ಪರೀಕ್ಷೆ ಮಾಡುವುದಕ್ಕೆ ಸಹಮತ ವ್ಯಕ್ತಪಡಿಸಿರುವ ಹೆತ್ತವರು, ಎಸೆಸೆಲ್ಸಿ ಮತ್ತು ಪಿಯುಸಿ ಜೀವನದ ಅತ್ಯಂತ ಪ್ರಮುಖ ಘಟ್ಟ ಎಂದೂ ಹೇಳಿದ್ದಾರೆ. ಈ ವರ್ಷ ಪಿಯುಸಿ ಪರೀಕ್ಷೆ ಮಾಡಿ ಅಂತ ಶೇ.57ರಷ್ಟು ಹೆತ್ತವರು ಸರಕಾರಕ್ಕೆ ಸಲಹೆ ನೀಡಿದ್ದಾರೆ. ಉಳಿದವರಲ್ಲಿ ಈ ವರ್ಷ ಬೇಡ ಎಂದವರು ಶೇ.23.5.
ಆಫ್ ಲೈನ್ ಆದ್ರೂ ಆಗಲಿ, ಆನ್ ಲೈನ್ ಆದ್ರೂ ಆಗಲಿ ಒಟ್ಟಾರೆಯಾಗಿ ಪರೀಕ್ಷೆಯಾದರೆ ಸಾಕು ಎಂದವರು ಶೇ.65.6ರಷ್ಟು ಮಂದಿ. ತರಗತಿ ಪರೀಕ್ಷೆಗಳ ಅಂಕದಲ್ಲಿ ಪಾಸ್ ಮಾಡಿ ಎಂದು ಶೇ.34.4ರಷ್ಟು ಮಂದಿ ಹೇಳಿದ್ದಾರೆ. ಅದರಲ್ಲೂ ಆಫ್ ಲೈನ್ ಪರೀಕ್ಷೆಯೇ ಇರಲಿ ಅಂತ ಶೇ.38.9ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ ಹೆತ್ತವರು ಪರೀಕ್ಷೆ ಜತೆಗೆ, ಮಕ್ಕಳ ಆರೋಗ್ಯದ ಬಗ್ಗೆಯೂ ಗಮನ ಕೊಟ್ಟಿದ್ದಾರೆ. ಬಹುತೇಕ ಹೆತ್ತವರು ಶಾಲಾ- ಕಾಲೇಜು ಮಟ್ಟದಲ್ಲೇ ಪರೀಕ್ಷೆ ನಡೆಯಲಿ ಎಂದು ಕೇಳಿಕೊಂಡಿದ್ದಾರೆ. ಅಂದರೆ ನಾವು ಶಾಲಾ-ಕಾಲೇಜು ಮಟ್ಟದಲ್ಲಿ ಪರೀಕ್ಷೆ ನಡೆದರೆ ಸಾಕೇ ಎಂಬ ಪ್ರಶ್ನೆ ಕೇಳಿದ್ದೆವು. ಇದಕ್ಕೆ ಶೇ.59.6ರಷ್ಟು ಮಂದಿ ಸಾಕು ಎಂದು ಉತ್ತರಿಸಿದ್ದಾರೆ. ರಾಜ್ಯಮಟ್ಟದ ಪರೀಕ್ಷೆ ಬೇಕು ಎಂದವರು ಶೇ.29.9ರಷ್ಟು ಮಂದಿ. ಜಿಲ್ಲಾ ಮಟ್ಟದಲ್ಲಿ ನಡೆಯಲಿ ಅಂತ ಶೇ.10.5ರಷ್ಟು ಮಂದಿ ಹೇಳಿದ್ದಾರೆ. ಒಟ್ಟಾರೆಯಾಗಿ ಇಲ್ಲಿ ಸಿಕ್ಕಿರುವ ಉತ್ತರವೇನೆಂದರೆ, ಮನೆಯ ಹತ್ತಿರದಲ್ಲೇ ಮಕ್ಕಳು ಪರೀಕ್ಷೆ ಬರೆದು ಬರಲಿ ಎಂಬುದಾಗಿದೆ.
ಪರೀಕ್ಷಾ ವಿಷಯದ ವಿಚಾರದಲ್ಲೂ ಹೆತ್ತವರು ಬುದ್ಧಿವಂತಿಕೆ ತೋರಿದ್ದಾರೆ. ಪ್ರಮುಖ ವಿಷಯಗಳ ಮೇಲೆ ಪರೀಕ್ಷೆ ನಡೆಸಿ ಅಂತ ಶೇ.41.3ರಷ್ಟು ಹೆತ್ತವರು ಹೇಳಿದ್ದಾರೆ. ಪಠ್ಯಕ್ರಮದ ಅರ್ಧ ವಿಷಯದ ಮೇಲೆ ಪರೀಕ್ಷೆ ನಡೆಯಲಿ ಎಂದು ಶೇ.34.3ರಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ. ಶೇ.24.4ರಷ್ಟು ಹೆತ್ತವರು ಪೂರ್ಣ ವಿಷಯದ ಮೇಲೆ ಪರೀಕ್ಷೆ ನಡೆಯಲಿ ಎಂದಿದ್ದಾರೆ. ಇನ್ನು ಪ್ರತಿ ರೂಮಿನಲ್ಲಿ 20 ಮಕ್ಕಳನ್ನು ಕೂರಿಸಿ ಪರೀಕ್ಷೆ ಬರೆಸಿದರೆ ಸಾಕು ಎಂದು ಕೆಲವರು ಹೇಳಿದರೆ, ಕಳೆದ ವರ್ಷದಂತೆಯೇ ಸುರಕ್ಷಿತವಾಗಿ ಪರೀಕ್ಷೆ ಮಾಡಲಿ ಎಂದು ಹೇಳಿ ಸರಕಾರದ ಬೆನ್ನನ್ನೂ ತಟ್ಟಿದ್ದಾರೆ. ಹಾಗೆಯೇ ಪರೀಕ್ಷೆ ಮುಂದೂಡುತ್ತಾ ಹೋದರೆ ಅವರಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಬೇಗನೇ ಮುಗಿಯಲಿ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿಯೇ ಬಹಳಷ್ಟು ಹೆತ್ತವರು ಜುಲೈಯಲ್ಲೇ ಪರೀಕ್ಷೆ ನಡೆಯಲಿ ಎಂದೂ ಹೇಳಿದ್ದಾರೆ.
ಪರೀಕ್ಷೆ ನಡೆಸುವುದಾದರೆ ಈ ಕೆಳಗಿನ ಯಾವ ವಿಧಾನ ಉತ್ತಮ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ