ಅರ್ಥ ಅರಿಯದೆ ಅರಚಿದರೇನು ಬಂತು?


Team Udayavani, Jul 8, 2020, 5:04 AM IST

artha-bantu

ಒಬ್ಬ ಸಾಧು ನಿತ್ಯವೂ ಸ್ವಲ್ಪ ಹೊತ್ತು ವನಪ್ರದೇಶದಲ್ಲಿ ಕುಳಿತು ಪಕ್ಷಿಗಳ ಚಿಲಿಪಿಲಿ ನಾದವನ್ನು ಆಲಿಸುತ್ತಲಿದ್ದ. ಒಮ್ಮೆ ಬೇಡನೊಬ್ಬ ಬಲೆ ಹರಡಿ ಹಕ್ಕಿಗಳನ್ನು ಹಿಡಿದೊಯ್ದುದ್ದನ್ನು ನೋಡಿದ. ಆತ ಮರುದಿನವೂ ಬೇಟೆಗೆ ಬರುತ್ತಾನೆ  ಎಂಬುದನ್ನರಿತ ಸಾಧುವು, ಉಳಿದಿರುವ ಹಕ್ಕಿಗಳಿಗಾದರೂ ಅಪಾಯದ ಕುರಿತು ಎಚ್ಚರಿಸೋಣ ಎಂದು ಯೋಚಿಸಿ- “ನಾಳೆಯೂ ಬೇಡ ಬಂದು ಬಲೆ ಹರಡಿ ನಿಮ್ಮನ್ನು ಹಿಡಿಯುತ್ತಾನೆ. ಎಚ್ಚರಿಕೆಯಿಂದಿರಿ’ ಎಂದು ಹಕ್ಕಿಗಳಿಗೆ ಹೇಳಿದ.

ತನ್ನ ಮಾತು ಹಕ್ಕಿಗಳಿಗೆ ಅರ್ಥವಾಗಿದೆ ಎಂದು ಖಚಿತಪಡಿಸಿ  ಕೊಳ್ಳಲು ಅವುಗಳನ್ನು ಕೇಳಿದ- “ನಾನು ಏನು ಹೇಳಿದೆ ಹೇಳಿ?’ ಆಗ ಹಕ್ಕಿಗಳೆಲ್ಲವೂ ಒಕ್ಕೊರಲಿಂದ ನುಡಿದವು- “ಬೇಡ ಬರುತ್ತಾನೆ ಬಲೆ ಹರಡಲು, ಎಚ್ಚರಿಕೆ, ಎಚ್ಚರಿಕೆ…’  ಅದನ್ನು ಕೇಳಿದ ಸಾಧುವು ತೃಪ್ತನಾಗಿ ಹಿಂದಿರುಗಿದ. ಮರುದಿನ ಬೇಡ ಬರುತ್ತಿದ್ದಂತೆಯೇ ಹಕ್ಕಿಗಳು- “ಬೇಡ ಬರುತ್ತಾನೆ ಬಲೆ ಹರಡಲು. ಎಚ್ಚರಿಕೆ, ಎಚ್ಚರಿಕೆ’ ಎಂದು ಕೂಗಿಕೊಂಡವು. ನಿನ್ನೆಯಂತೆಯೇ ಇಂದೂ ಹಕ್ಕಿಗಳು ಸಿಗುತ್ತಾವೆಂಬ ನಿರೀಕ್ಷೆಯಲ್ಲಿದ್ದ ಬೇಡ, ಹಕ್ಕಿಗಳ ಮಾತು ಕೇಳಿ ನಿರಾಶನಾದ.

ಹೇಗೂ ಹಕ್ಕಿಗಳು ಸಿಗುವುದಿಲ್ಲ ಎಂದು ಬಲೆ ಹರಡಿ ಧಾನ್ಯದ ಕಣಗಳನ್ನು ಎರಚಿ, ಅಲ್ಲೇ ವಿಶ್ರಮಿಸಿದ. ಆದರೆ, ನಿದ್ರೆಯಿಂದ ಎಚ್ಚೆತ್ತು ನೋಡಿದವನಿಗೆ ಅಚ್ಚರಿ  ಕಾದಿತ್ತು. ಎಲ್ಲ ಹಕ್ಕಿಗಳೂ ಬಲೆಯ ಮೇಲೆಯೇ ಕುಳಿತು ಕಾಳುಗಳನ್ನು ತಿನ್ನುತ್ತಾ “ಬೇಡ ಬರುತ್ತಾನೆ ಎಚ್ಚರಿಕೆ’ ಎಂದು ಅರಚುತ್ತಲಿದ್ದವು! ಬೇಡನು ತಡೆಯಲಾರದ ನಗುವಿನೊಡನೆ ಹಕ್ಕಿಗಳನ್ನು ಹೊತ್ತು ಮನೆಗೆ ತೆರಳಿದ. ಹಕ್ಕಿಗಳು  ಪಾರಾಗಿರುತ್ತವೆಂಬ ನಿಶ್ಚಯ  ದಿಂದ ಬಂದ ಸಾಧುವು ಆ ದೃಶ್ಯವನ್ನು ಕಂಡು ದಂಗಾದ. ಬೇಡನ ಬಲೆಯಲ್ಲಿದ್ದ ಹಕ್ಕಿಗಳು “ಬೇಡ ಬರುತ್ತಾನೆ ಎಚ್ಚರಿಕೆ’ ಎಂದು ಅರಚುತ್ತ ಲೇ ಇದ್ದವು. ಮಾತನಾಡಬಲ್ಲ ಹಕ್ಕಿಗಳಿಗೆ ಮಾತನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ  (ಸಂಸ್ಕಾರ)ವಿರಲಿಲ್ಲವಷ್ಟೆ!

ಇದು ಹಿಂದೊಮ್ಮೆ ಎಲ್ಲೋ ಕೇಳಿದ ಕಥೆ  ಯಾದರೂ, ಪ್ರಸ್ತುತ ನಮ್ಮ ಕಥೆಯೂ ಹೌದು. ಜ್ಞಾನಿಗಳು ಹೃದಯ ಗುಹೆಯಲ್ಲಿ ಅನುಭವಿಸಿ ದ ಆತ್ಮದರ್ಶನ, ತತ್ಪರಿಣಾಮ ವಾದ ಪರಮಾ ನಂದವು ಭಾಷಾ  (ಮಂತ್ರ- ಸ್ತೋತ್ರ-  ಸಾಹಿತ್ಯಗಳ) ರೂಪದಲ್ಲಿ ಹೊರ ಹೊಮ್ಮಿವುದುಂಟು. ಶ್ರೀರಂಗ ಮಹಾಗುರುಗಳ ಆಶಯವೆಂದರೆ ಪದಾರ್ಥದ ಅನುಭವದಿಂದ ಪದವೂ, ಭಾವದಿಂದ ಭಾಷೆಯೂ ಹೊರಡುತ್ತ ವೆ. ಕೇಳುವವರಿಗೆ ತಕ್ಕ ಸಂಸ್ಕಾರವಿದ್ದಾಗ ಪದವು- ಪದಾರ್ಥದೆಡೆಗೂ, ಭಾಷೆಯು-  ಭಾವದೆಡೆಗೂ ಒಯ್ಯುತ್ತವೆ.

* ಮೈಥಿಲೀ ರಾಘವನ್‌, ಸಂಸ್ಕೃತ ಚಿಂತಕಿ

ಟಾಪ್ ನ್ಯೂಸ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.