ಜನಾರ್ದನ ರೆಡ್ಡಿಗೆ ಈ ಬಾರಿಯೂ ಮತ ಹಾಕಲು ಅವಕಾಶವಿಲ್ಲ
Team Udayavani, Apr 23, 2019, 1:06 PM IST
ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಈ ಬಾರಿಯೂ ಮತದಾನ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಅಕ್ರಮ ಗಣಿಗಾರಿಕೆ ಕೇಸ್ನಲ್ಲಿ ಬಳ್ಳಾರಿ ಪ್ರವೇಶಿಸದಂತೆ ಕೋರ್ಟ್ ನಿಷೇಧ ಹೇರಿರುವ ಕಾರಣಕ್ಕೆಅವರಿಗೆ ಮತದಾನ ಮಾಡುವುದು ಸಾಧ್ಯವಾಗಲಿಲ್ಲ.
ಮತದಾನಕ್ಕಾಗಿ ಬಳ್ಳಾರಿಗೆ ತೆರಳಲು ಅವಕಾಶ ನೀಡುವಂತೆ ರೆಡ್ಡಿ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಕೋರ್ಟ್ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿತ್ತು.
ಗದಗ ಜಿಲ್ಲೆಯಲ್ಲಿ ಮತದಾರರ ಚೀಟಿ ಪಡೆಯಲು ನೊಂದಣಿ ಮಾಡಿರುವುದೂ ರದ್ದಾಗಿತ್ತು.
ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಮೊದಲ ಬಾರಿಗೆ ಮತದಾನ ಮಾಡಿದ್ದಾರೆ.
ರೆಡ್ಡಿ ಅವರಿಗೆ ವಿಧಾನಸಭಾ ಚುನಾವಣೆ, ಉಪಚುನಾವಣೆಯಲ್ಲೂ ಹಕ್ಕು ಚಲಾಯಿಸಲು ಸಾಧ್ಯವಾಗಿರಲ್ಲಿಲ್ಲ.