ಈ ಬಾರಿ ಖಂಡಿತಾ ಶಿಕ್ಷಕರು ನನ್ನ ಕೈ ಹಿಡಿಯುತ್ತಾರೆ: ಬಸವರಾಜ ಗುರಿಕಾರ

ಯಾವುದೇ ಅಧಿಕಾರವಿಲ್ಲದೇ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ

Team Udayavani, Jun 9, 2022, 9:38 AM IST

1

ಧಾರವಾಡ: ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿಗೆ ಸತತ 40 ವರ್ಷಗಳ ಕಾಲ ಬಸವರಾಜ ಹೊರಟ್ಟಿಯವರನ್ನು ಶಿಕ್ಷಕರು ಆಯ್ಕೆ ಮಾಡಿದ್ದಾರೆ. ಆದರೆ ನಾನು ಸತತ 40 ವರ್ಷಗಳಿಂದ ಯಾವುದೇ ಅಧಿಕಾರವಿಲ್ಲದೇ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಹೋರಾಟ ನಡೆಸುತ್ತ ಬಂದಿದ್ದೇನೆ. ಹೀಗಾಗಿ ಈ ಬಾರಿ ಖಂಡಿತಾ ಚುನಾವಣೆಯಲ್ಲಿ ಶಿಕ್ಷಕರು ನನಗೆ ಮತ ಕೊಟ್ಟು ಆಯ್ಕೆ ಮಾಡುವುದು ಖಚಿತ.

“ಉದಯವಾಣಿ’ ಜತೆ ಮಾತನಾಡಿದ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಗುರಿಕಾರ ಅವರ ಆತ್ಮವಿಶ್ವಾಸದ ನುಡಿಗಳಿವು. ಒಟ್ಟಾರೆ ಅವರು ಹೇಳಿದ್ದು:

ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವು ದಕ್ಕಾಗಿಯೇ ಇಡೀ ಜೀವನ ಮುಡುಪಾಗಿಟ್ಟಿದ್ದೇನೆ. ಶಿಕ್ಷಕರಿಂದ, ಶಿಕ್ಷಕರಿಗಾಗಿ ಹಾಗೂ ಶಿಕ್ಷಕರಿಗೋಸ್ಕರ ಸದಾ ಶ್ರಮಿಸುತ್ತ ಬಂದಿದ್ದೇನೆ. 1980ರ ದಶಕದಲ್ಲಿ ಶಿಕ್ಷಕರ ಪರ ಧ್ವನಿ ಎತ್ತಲು ಆಡಳಿತಶಾಹಿ ವಲಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಗಟ್ಟಿ ಧ್ವನಿ ಎತ್ತಿದವರಿಗೆ ಅಮಾನತು ಶಿಕ್ಷೆಯಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಗುರುವಿನ ಸ್ಥಾನದಲ್ಲಿ ಜೀವನ ಕಳೆದು ಶಿಕ್ಷಕ ಸಮುದಾಯದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತಲೇ ಇರಲಿಲ್ಲ.

ಅಂತಹ ಸಂದರ್ಭ ಬೆರಳೆಣಿಕೆಯಷ್ಟು ಶಿಕ್ಷಕ ರನ್ನು ಕಟ್ಟಿಕೊಂಡು ಕೈಯಿಂದಲೇ ಖರ್ಚು ಮಾಡಿಕೊಂಡು ಹಗಲು ರಾತ್ರಿ ಎನ್ನದೇ ಉತ್ತರದ ಬೀದರನಿಂದ ಹಿಡಿದು ಚಾಮ ರಾಜನಗರದವರೆಗಿನ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಅತೀ ದೊಡ್ಡ ಶಿಕ್ಷಕ ಸಮುದಾಯವನ್ನು ಸಂಘಟಿಸುತ್ತ ಬಂದಿದ್ದೇನೆ. ಆ ದಿನಗಳನ್ನು ನೆನೆದರೆ ಖಂಡಿತ ಇಷ್ಟೊಂದು ಎತ್ತರಕ್ಕೆ ಶಿಕ್ಷಕರು ನನ್ನನ್ನು ಕೊಂಡೊಯ್ಯುತ್ತಾರೆ ಎಂದುಕೊಂಡಿರಲಿಲ್ಲ. ಇದೀಗ ಮತ್ತೂಮ್ಮೆ ಶಿಕ್ಷಕರು ತಮ್ಮ ಅಮೂಲ್ಯವಾದ ಮತ ನೀಡಿ ನನ್ನ ಗೆಲ್ಲಿಸುವ ಮೂಲಕ ಮಹತ್ವದ ಜವಾಬ್ದಾರಿ ಕೊಡುತ್ತಾರೆ ಎಂಬ ವಿಶ್ವಾಸವಿದೆ.

ಶಿಕ್ಷಕರ ಸಮಸ್ಯೆಗಳು ಮತ್ತು ಅಭಿವೃದ್ಧಿ ಪರ ವಿಚಾರಗಳೇನು ಎಂಬುದನ್ನು ನಾನು ಈಗಾಗಲೇ ಅರಿತಿದ್ದೇನೆ. ಇನ್ನಷ್ಟು ಒತ್ತು ಕೊಟ್ಟು ಶಿಕ್ಷಕರ ಸೇವೆ ಮಾಡುವ ಹಂಬಲದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪರಿಷತ್ತಿನ ಕಣಕ್ಕಿಳಿದಿದ್ದೇನೆ. ಶಿಕ್ಷಕ ವೃಂದ ಖಂಡಿತ ನನ್ನನ್ನು ಆಯ್ಕೆ ಮಾಡುತ್ತಾರೆ ಎನ್ನುವ ಭರವಸೆ ಇದೆ.  –ಬಸವರಾಜ ಗುರಿಕಾರ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ

5ನೇ ಆಯೋಗದ ಕಸುವು: ಶಿಕ್ಷಕರ ಐದನೇ ವೇತನ ಆಯೋಗಕ್ಕೆ ಖುದ್ದು ನಾನೇ ವರದಿ ತಯಾರಿಸಿದೆ. ಶಿಕ್ಷಕರ ವೇತನ ತಾರತಮ್ಯ ಕಡಿಮೆಯಾಗಬೇಕಾದರೆ ಮಧ್ಯಂತರ ಪರಿಹಾರದ ಜತೆಗೆ ವಿಶೇಷ ವೇತನ ನೀಡಬೇಕೆಂದು ಹೊಸ ಬೇಡಿಕೆ ಮಂಡಿಸಿ ವೇತನ ಆಯೋಗದಿಂದ ಶಿಕ್ಷಕರಿಗೆ ವಿಶೇಷ ವೇತನ ಮತ್ತು ಮಧ್ಯಂತರ ಪರಿಹಾರ ಕೊಡಬೇಕೆಂದು ಪ್ರಯತ್ನಿಸಿದೆ. ಮುಂದೆ 6ನೇ ವೇತನ ಆಯೋಗದ ಮುಂದೆ ವಿಶೇಷ ವೇತನ ವಿಲೀನವಾಗಬೇಕೆಂದು ಪ್ರಬಲ ವಾದ ಮಂಡಿಸಿ, ವರದಿ ಸಲ್ಲಿಸಿ ವಿಶೇಷ ವೇತನ ಮೂಲ ವೇತನದಲ್ಲಿ ವಿಲೀನಗೊಳಿಸಲು ಪಟ್ಟ ಪಾಡು ದೇವರಿಗೆ ಗೊತ್ತು. ಇದರಿಂದ ಹೆಚ್ಚುವರಿಯಾಗಿ ಒಂದು ವೇತನ ಬಡ್ತಿ ಕೋರಿದೆ. ಇದು ಸರ್ಕಾರಿ ನೌಕರರ ಪೈಕಿ ಬರೀ ಶಿಕ್ಷಕರಿಗೆ ಮಾತ್ರ ಸಿಕ್ಕಿದ್ದು ನಮ್ಮ ದೊಡ್ಡ ಹೋರಾಟದಿಂದ ಎಂಬುದನ್ನು ನಮ್ಮ ಶಿಕ್ಷಕರೆಲ್ಲರೂ ಮನಗಂಡಿದ್ದಾರೆ. ಇನ್ನು 80ರ ದಶಕದಲ್ಲಿಯೇ ವಯೋಮಿತಿ ಆಧಾರದ ಮೇಲೆ ಶಿಕ್ಷಕರ ನೇಮಕಾತಿ ಆದೇಶ ಮಾಡಿಸಿದೆವು. ಅಖಂಡ ಧಾರವಾಡ ಜಿಲ್ಲೆಯ ಶಿಕ್ಷಕರ ನೇಮಕಾತಿಗಳು ರದ್ದುಗೊಂಡಾಗ ನಿರಂತರವಾಗಿ ಎರಡು ತಿಂಗಳು ಹೋರಾಟ ಮಾಡಿ 482 ಶಿಕ್ಷಕರನ್ನು ನೇಮಕ ಮಾಡಿದ ಹೋರಾಟವೂ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲೇ ನಡೆದಿದೆ. ಇದನ್ನು ಈ ಕ್ಷೇತ್ರದ ಶಿಕ್ಷಕ ಸಮುದಾಯ ಮರೆತಿಲ್ಲ.

ಧಾರವಾಡಕ್ಕೆ ವಿಶೇಷ ಕೊಡುಗೆ:  ನಾನು ಹುಟ್ಟಿದ್ದು, ಓದಿ ಬೆಳೆದಿದ್ದು ಎಲ್ಲವೂ ಅಖಂಡ ಧಾರವಾಡ ಜಿಲ್ಲೆಯಲ್ಲಿಯೇ. ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷನಾದರೂ ಸ್ವಕ್ಷೇತ್ರವನ್ನು ಎಂದಿಗೂ ಮರೆಯದೇ ಕಾರ್ಯನಿರ್ವಹಿಸಿದ್ದೇನೆ. ಧಾರವಾಡ ಶಹರಕ್ಕೆ ಪ್ರತ್ಯೇಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸ್ಥಾಪನೆ, ಧಾರವಾಡದ ನೌಕರರ ಭವನದಲ್ಲಿ ಸಾಂಸ್ಕೃತಿಕ ಸಮುದಾಯ ಭವನ ಹಾಗೂ ಕೊಠಡಿಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಹೀಗಾಗಿ ಅಖಂಡ ಧಾರವಾಡ ಜಿಲ್ಲೆಯ ಶಿಕ್ಷಕ ವೃಂದದ ಪ್ರೀತಿ ನನ್ನೊಂದಿಗಿದೆ.

ನಾನು ಶಿಕ್ಷಕರ ಸೇವಕ:  ನಾನು ಶಿಕ್ಷಕರ ನಾಯಕನಲ್ಲ ಬದಲಿಗೆ ಶಿಕ್ಷಕರ ಸೇವಕ ಎಂದೇ ತಮ್ಮನ್ನು ಕರೆದುಕೊಳ್ಳುವ ಗುರಿಕಾರ ಅವರು ಹಳ್ಳಿಯಿಂದ ಹಿಡಿದು ದಿಲ್ಲಿವರೆಗೂ ತಮ್ಮ ಕಾರ್ಯವೈಖರಿಯಿಂದಲೇ ಹೆಸರು ಮಾಡಿದ್ದಾರೆ. ಶಿಕ್ಷಕರ ರಾಷ್ಟ್ರಮಟ್ಟದ ಸಂಘಟನೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಅವರ ಸಾಧನೆ ಮತ್ತು ಸೇವೆಗೆ ಹಿಡಿದ ಕನ್ನಡಿಯಾಗಿದೆ.

-ಡಾ|ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.