ಥಾಮಸ್ ಕಪ್: ಪುರುಷರ ತಂಡ ನಾಕೌಟ್ ಹಂತಕ್ಕೆ
Team Udayavani, May 9, 2022, 10:53 PM IST
ಬ್ಯಾಂಕಾಕ್: ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡವು ಸತತ ಎರಡನೇ 5-0 ಗೆಲುವಿನೊಂದಿಗೆ ಥಾಮಸ್ ಕಪ್ ಕೂಟದ ನಾಕೌಟ್ ಹಂತಕ್ಕೇರಿದೆ.
“ಸಿ’ ಬಣದಲ್ಲಿ ಆಡುತ್ತಿರುವ ಭಾರತವು ಕೆನಡ ತಂಡದೆದುರು 5-0 ಅಂತರದ ಜಯ ಸಾಧಿಸಿದೆ.
ಭಾರತ ರವಿವಾರ ಜರ್ಮನಿಯನ್ನು 5-0 ಅಂತರದಿಂದ ಉರುಳಿಸಿತ್ತು. ಈ ಮೂಲಕ ಭಾರತ ಬಣದಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಮೂಲಕ ನಾಕೌಟ್ ಹಂತಕ್ಕೇರಲಿದೆ.
ವನಿತೆಯರ ತಂಡವು ಉಬೆರ್ ಕಪ್ ಕೂಟದ ಮೊದಲ ಪಂದ್ಯದಲ್ಲಿ ಕೆನಡ ವಿರುದ್ಧ 4-1 ಅಂತರದ ಜಯ ಸಾಧಿಸಿ ಶುಭಾರಂಭ ಮಾಡಿದೆ. ಲೀಗ್ ಹಂತದ ಮುಂದಿನ ಹೋರಾಟದಲ್ಲಿ ಭಾರತವು ಅಮೆರಿಕವನ್ನು ಮಂಗಳವಾರ ಮತ್ತು ಕೊರಿಯವನ್ನು ಬುಧವಾರ ಎದುರಿಸಲಿದೆ.
ಶ್ರೀಕಾಂತ್ಗೆ ಜಯ
ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ವಿಜೇತ ಕಿದಂಬಿ ಶ್ರೀಕಾಂತ್ ಮೂರು ಗೇಮ್ಗಳ ಕಠಿನ ಹೋರಾಟದಲ್ಲಿ ಕೆನಡದ ಬ್ರಿಯಾನ್ ಯಾಂಗ್ ಅವರನ್ನು ಸೋಲಿಸಿ ಭಾರತಕ್ಕೆ ಮುನ್ನಡೆ ದೊರಕಿಸಿಕೊಟ್ಟರು. 52 ನಿಮಿಷಗಳ ಈ ಹೋರಾಟದಲ್ಲಿ ಶ್ರೀಕಾಂತ್ 20-22, 21-11, 21-15 ಗೇಮ್ಗಳಿಂದ ಗೆದ್ದು ಬಂದರು.
ಡಬಲ್ಸ್ನಲ್ಲಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಕೇವಲ 29 ನಿಮಿಷಗಳಲ್ಲಿ ಜಾಸನ್ ಅಂತೋನಿ ಹೊ-ಶ್ಯುಯಿ ಮತ್ತು ಕೆವಿನ್ ಲೀ ಅವರನ್ನು ಮಣಿಸಿದರು. ಎಚ್. ಎಸ್. ಪ್ರಣಯ್ ಇನ್ನೊಂದು ಸಿಂಗಲ್ಸ್ನಲ್ಲಿ ಸಂಕೀರ್ತ್ ಅವರನ್ನು 21-15, 21-12 ಗೇಮ್ಗಳಿಂದ ಸುಲಭವಾಗಿ ಉರುಳಿಸಿದರು.
ಭಾರತೀಯ ತಂಡವು ಥಾಮಸ್ ಕಪ್ನಲ್ಲಿ ಚೊಚ್ಚಲ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಭಾರತವು ಇಷ್ಟರವರೆಗೆ ಥಾಮಸ್ ಕಪ್ನಲ್ಲಿ ಸೆಮಿಫೈನಲ್ ಹಂತಕ್ಕೂ ತೇರ್ಗಡೆಯಾಗಿಲ್ಲ. ಭಾರತವು ಬಣದ ಇನ್ನೊಂದು ಪಂದ್ಯದಲ್ಲಿ ಬುಧವಾರ ಚೈನೀಸ್ ತೈಪೆಯನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ