“ಮನಿಯಾರ್ಡರ್ ಎಕಾನಮಿ’ಗೆ ಭಾರೀ ಹೊಡೆತ
ವಲಸಿಗರು ತವರಿಗೆ ಕಳುಹಿಸುವ ಹಣ
Team Udayavani, May 19, 2020, 4:15 PM IST
ಹಾಂಕಾಂಗ್: ಬಹ್ರೈನ್ ಬ್ಯಾಕ್ನಲ್ಲಿ ನಿರ್ಮಾಣ ಕೆಲಸಗಾರನಾಗಿದ್ದ ಸೈಫುಲ್ ಇಸ್ಲಾಂ ಕಳೆದ ನಾಲ್ಕು ವರ್ಷಗಳಿಗಿಂತ ಹೆಚ್ಚು ಸಮಯದಿಂದ ತನ್ನ ಸಂಪಾದನೆಯ ಅರ್ಧಾಂಶವನ್ನು ಬಾಂಗ್ಲಾದೇಶದಲ್ಲಿನ ತನ್ನ ವೃದ್ಧ ತಂದೆ-ತಾಯಿಯರಿಗೆ ಕಳುಹಿಸುತ್ತಿದ್ದ. ಕೋವಿಡ್-19ರ ಅಟ್ಟಹಾಸದಿಂದಾಗಿ ಈ ವಾರದ ಆದಿಯಲ್ಲಿ 25ರ ಹರೆಯದ ಇಸ್ಲಾಂ ತನ್ನ ಕೆಲಸ ಕಳಕೊಂಡಾಗ ಹೆತ್ತವರಿಗೆ ಕಳುಹಿಸುತ್ತಿದ್ದ ಹಣವೂ ಹಠಾತ್ ನಿಂತುಹೋಯಿತು.
“ಈಗ ನಾನು ಮನೆಗೆ ಹಣ ಕಳುಹಿಸಲಾಗುತ್ತಿಲ್ಲ. ನನ್ನ ಕುಟುಂಬ ಸಂಕಷ್ಟದಲ್ಲಿದೆ ಮತ್ತು ಆಹಾರ ಖರೀದಿಸಲು ಹಾಗೂ ವೈದ್ಯಕೀಯ ಚಿಕಿತ್ಸೆಗೆ ನನ್ನ ವೃದ್ಧ ಹೆತ್ತವರಲ್ಲಿ ಹಣವಿಲ್ಲ’ ಎಂದು ಆತ ಸಿಎನ್ಎನ್ನೊಂದಿಗೆ ಹೇಳಿದ.
ಇದು ಇಸ್ಲಾಂ ಒಬ್ಬನ ಕತೆಯಲ್ಲ. ಕೋವಿಡ್ನಿಂದಾಗಿ ಜಗತ್ತಿನಾದ್ಯಂತ ಅರ್ಥವ್ಯವಸ್ಥೆಗಳು ಕುಸಿದಿವೆ ಮತ್ತು ಲಾಕ್ಡೌನ್ನಿಂದಾಗಿ ನಿರ್ಮಾಣದಂಥ ಅನೇಕ ಉದ್ದಿಮೆಗಳು ಮುಚ್ಚಿವೆ. ಇದರಿಂದಾಗಿ ವಲಸೆ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ ಮತ್ತು ಹಣಕ್ಕಾಗಿ ಅವರನ್ನು ಅವಲಂಬಿಸಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಕೋವಿಡ್ನಿಂದಾಗಿ 2020ರಲ್ಲಿ ಜಾಗತಿಕ ಹಣ ರವಾನೆ (ಮನಿಯಾರ್ಡರ್ ಎಕಾನಮಿ) ಶೇ. 20ರಷ್ಟು ಕುಸಿಯಲಿದೆ ಮತ್ತು ಜಗತ್ತಿನ ಕಡುಬಡವರಿಗೆ ಮಹತ್ವದ ಆದಾಯ ಮೂಲದಲ್ಲಿ 10,000 ಕೋಟಿ ಡಾಲರ್ಗಳ ಕಡಿತವಾಗಲಿದೆ. 2009ರಲ್ಲಿ ಜಾಗತಿಕ ಆರ್ಥಿಕ ಕುಸಿತ ಸಂಭವಿಸಿದ ವೇಳೆ ಜಾಗತಿಕ ರವಾನೆಯಲ್ಲಾಗಿದ್ದ ಕುಸಿತ ಕೇವಲ ಶೇ. 5ರಷ್ಟಿತ್ತು ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಈ ಬಾರಿ ರವಾನೆಯಲ್ಲಿ ನಾವು ನಿರೀಕ್ಷಿಸಿರುವ ಇಳಿಕೆ ಇತಿಹಾಸದಲ್ಲಿ ಅಭೂತಪೂರ್ವವಾದುದು ಎಂದು ವಲಸೆ ಕುರಿತ ಅರ್ಥಶಾಸ್ತ್ರಜ್ಞ ದಿಲೀಪ್ ರಥ್ ಹೇಳುತ್ತಾರೆ. ಸುಮಾರು 80 ಕೋಟಿ ಜನರು, ಅಂದರೆ ಭೂಮಿಯಲ್ಲಿರುವ ಪ್ರತಿ 9ರಲ್ಲಿ ಒಬ್ಬ ವ್ಯಕ್ತಿ ಜೀವನೋಪಾಯಕ್ಕೆ ಹಣ ರವಾನೆಯನ್ನು ಅವಲಂಬಿಸಿದ್ದಾನೆಂದು ವಿಶ್ವ ಸಂಸ್ಥೆ ಹೇಳುತ್ತದೆ.
ರವಾನೆಯಲ್ಲಿನ ಕುಸಿತ ಅಭಿವೃದ್ಧಿಶೀಲ ರಾಷ್ಟ್ರಗಳ ಬೆಳವಣಿಗೆ ಮೇಲೆ ಕೂಡ ನಾಟಕೀಯ ಪರಿಣಾಮ ಬೀರಲಿದೆ. ಹೈಟಿ, ದಕ್ಷಿಣ ಸುಡಾನ್ ಮತ್ತು ಟೊಂಗಾದಂಥ ಚಿಕಣಿ ಅರ್ಥವ್ಯವಸ್ಥೆಗಳ ಜಿಡಿಪಿಯ ಮೂರನೆ ಒಂದು ಭಾಗಕ್ಕಿಂತ ಹೆಚ್ಚು ಮೊತ್ತ ರವಾನೆಯಿಂದ ಬರುತ್ತದೆ. ವಲಸಿಗರು ಕಳುಹಿಸುವ ಹಣ ಇಂಥ ರಾಷ್ಟ್ರಗಳಿಗೆ ಪ್ರಮುಖ ಆರ್ಥಿಕ ಜೀವನಾಡಿಯಾಗಿದೆ. ಬಡ ಹಾಗೂ ಸಣ್ಣ ರಾಷ್ಟ್ರಗಳು ಈ ಬಿಕ್ಕಟ್ಟಿನಿಂದ ಕುಸಿಯುವ ಅಪಾಯ ಹೆಚ್ಚು ಎಂದು ರಥ್ ಹೇಳುತ್ತಾರೆ. ವಿಶ್ವಾದ್ಯಂತ ಸುಮಾರು 27 ಕೋಟಿ ವಲಸಿಗರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟೆಕ್ಸಾಸ್ ಶೂಟೌಟ್ ಮರುದಿನವೇ ರೈಫಲ್ ಹಿಡಿದು ಶಾಲೆಗೆ ಬಂದ ಮತ್ತೋರ್ವ ವಿದ್ಯಾರ್ಥಿ
ಪ್ರಸಕ್ತ ವರ್ಷ ಅಮೆರಿಕದಲ್ಲಿ 10 ಶೂಟೌಟ್! ಶಸ್ತ್ರಾಸ್ತ್ರ ಕಾಯ್ದೆ ಮತ್ತೆ ಚರ್ಚೆಗೆ
ಜಾರ್ಜ್ ಡಬ್ಲ್ಯೂ ಬುಷ್ ಹತ್ಯೆಗೆ ಸ್ಕೆಚ್: ಅಮೆರಿಕದಲ್ಲಿ ಇರಾಕಿ ಪ್ರಜೆ ಬಂಧನ
ಬೋಕೋ ಹರಾಂ ಉಗ್ರರಿಂದ ನರಮೇಧ; ನೈಜೀರಿಯಾದಲ್ಲಿ 50 ರೈತರ ಹತ್ಯೆ, ಹಲವರು ಚಿಂತಾಜನಕ
ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ಭೀಕರ ಶೂಟೌಟ್: 19 ಮಕ್ಕಳು ಸೇರಿ 21 ಮಂದಿ ಸಾವು
MUST WATCH
ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ
IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್
Wheel Chair Romeo actor exclusive interview | RELEASING ON MAY 27TH
ಶಿರಸಿ : ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ
ಪುತ್ರನಿಗೆ ತಪ್ಪಿದ ಪರಿಷತ್ ಟಿಕೆಟ್ : ಬಿಎಸ್ ವೈ ಹೇಳಿದ್ದೇನು?
ಹೊಸ ಸೇರ್ಪಡೆ
ಹೆಬ್ರಿ ತಾ| ಆಡಳಿತ ಕಟ್ಟಡ ಲೋಕಾರ್ಪಣೆಗೆ ಸಿದ್ಧ
ವಿಜಯಪುರ: ಆಕಸ್ಮಿಕ ಬೆಂಕಿ ಅವಘಡ; 30 ಲಕ್ಷ ಮೌಲ್ಯದ ವಸ್ತುಗಳಿಗೆ ಹಾನಿ
ಕುಷ್ಟಗಿ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಕಾಂಗ್ರೆಸ್ ನಲ್ಲಿ ಇರ್ತಾರ? ಜೆಡಿಎಸ್ ಸೇರ್ತಾರ!
ಉಸಿರಾಟದ ಸಮಸ್ಯೆ: ಕೇದಾರನಾಥ ನಾಲ್ವರು ಯಾತ್ರಾರ್ಥಿಗಳ ಸಾವು, ಮೃತರ ಸಂಖ್ಯೆ 38ಕ್ಕೆ ಏರಿಕೆ
ಮಳಲಿ ಮಸೀದಿಯ ಸರ್ವೇ ನಡೆಯಬೇಕು, ಜನರು ಸತ್ಯ ತಿಳಿಯಲಿ: ಡಾ ಸುರೇಂದ್ರ ಕುಮಾರ್ ಜೈನ್