ತೀರ್ಥಹಳ್ಳಿ: ಸರ್ಕಾರಿ ರಜೆಯಲ್ಲಿ ಹಂಚು ಸಾಗಾಟ; ಅಧಿಕಾರಿಗಳು ಗಮನಿಸಲಿ!
Team Udayavani, Nov 27, 2021, 3:16 PM IST
ತೀರ್ಥಹಳ್ಳಿ: ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಯು ತಾಲೂಕಿನ 38 ಗ್ರಾಮ ಪಂಚಾಯತಿಗಳಲ್ಲಿ ಅತಿ ದೊಡ್ಡ ಗ್ರಾಮ ಪಂಚಾಯತಿಯಲ್ಲಿ ಒಂದಾಗಿದೆ. ಈ ಗ್ರಾಮ ಪಂಚಾಯತಿಗೆ ಸಂಬಂಧಪಟ್ಟ ಸಾವಿರಾರು ಹಳೆಯ ಹಂಚುಗಳು ಗ್ರಾಮ ಪಂಚಾಯತಿಯ ಆವರಣದ ಪಕ್ಕದಲ್ಲಿಯೇ ದಾಸ್ತಾನು ಇಟ್ಟಿದ್ದು ಇಂದು ಕೊನೆಯ ಶನಿವಾರ ಸರ್ಕಾರಿ ರಜೆಯಿದ್ದು ಗ್ರಾಮ ಪಂಚಾಯತಿಯ ಯಾರೊಬ್ಬರೂ ಸಿಬ್ಬಂದಿಯೂ ಕೂಡ ಇಲ್ಲದ ಸಮಯದಲ್ಲಿ ಹಂಚುಗಳನ್ನು ವಾಹನವೊಂದಕ್ಕೆ ತುಂಬುತ್ತಿದ್ದರು ಎನ್ನಲಾಗಿದೆ.
ವಿಷಯ ತಿಳಿದ ಮೇಲಿನ ಕುರುವಳ್ಳಿ ದೇವರಾಜ್ ರವರು ಇದನ್ನು ಪ್ರಶ್ನಿಸಿದ್ದಾರೆ. ಪ್ರಶ್ನಿಸಿದ ಕೆಲವೇ ಸಮಯದಲ್ಲಿ ವಾಹನಕ್ಕೆ ತುಂಬಿದ ಪೂರ್ಣ ಹಂಚುಗಳನ್ನು ವಾಪಸ್ಸು ಇಳಿಸಿದ್ದಾರೆ. ಹಂಚು ವಾಪಾಸ್ಸು ಇಳಿಸುತ್ತಿದ್ದಂತೆ ಸಂಶಯಗೊಂಡ ದೇವರಾಜ್ರವರು ಗ್ರಾಮ ಪಂಚಾಯತಿ ಗೇಟಿಗೆ ಹೊಸದೊಂದು ಬೀಗ ಖರೀದಿಸಿ ತಂದು ಬೀಗ ಹಾಕಿದ್ದಾರೆ ಎನ್ನಲಾಗಿದೆ.
ಈ ಗ್ರಾಮ ಪಂಚಾಯತಿಯ ಆವರಣದಲ್ಲಿ ಸಾವಿರಾರು ರೂಪಾಯಿ ಬೆಲೆಬಾಳುವ ಕುಡಿಯುವ ನೀರಿನ ಹೆಚ್ಡಿಎಫ್ಸಿ ಪೈಪುಗಳನ್ನು ಅನೇಕ ತಿಂಗಳುಗಳಿಂದ ದಾಸ್ತಾನು ಮಾಡಿದ್ದಾರೆ ಆದರೂ ಕೂಡ ಗ್ರಾಮ ಪಂಚಾಯತಿ ಅಧಿಕಾರಿಗಳು ಈ ಗೇಟಿಗೆ ಬೀಗ ಹಾಕಲು ಮುಂದಾಗಿಲ್ಲ. ಗ್ರಾಮ ಪಂಚಾಯತಿಯಲ್ಲಿ ಸಿಸಿಟಿವಿ ಇದ್ದರೂ ಕೂಡ ಉಪಯೋಗಕ್ಕೆ ಬಾರದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಗಮನಿಸಿ ಸೂಕ್ತ ಕ್ರಮ ಜರುಗಸಲಿ ಎನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
MUST WATCH
ಹೊಸ ಸೇರ್ಪಡೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ