ಕೊಡುವುದರಲ್ಲಿ ಸಂತೃಪ್ತಿ ಪಡುವುದು ಒಲುಮೆ


Team Udayavani, Feb 10, 2021, 8:00 AM IST

ಕೊಡುವುದರಲ್ಲಿ ಸಂತೃಪ್ತಿ ಪಡುವುದು ಒಲುಮೆ

ಒಂದೂರಿನಲ್ಲಿ ಒಂದು ಮಾವಿನ ಮರ ಇತ್ತು. ಬಹಳ ಹಳೆಯ ಮರ. ರೆಂಬೆ ಕೊಂಬೆಗಳನ್ನು ಚಾಚಿ ವಿಶಾಲವಾಗಿ ಹರಡಿತ್ತು. ಅದು ಹೂಬಿಡುವ ಕಾಲದಲ್ಲಿ ಚಿಟ್ಟೆಗಳು, ಜೇನ್ನೊಣಗಳ ದಂಡು ಅದರ ಸುತ್ತ ನೆರೆಯುತ್ತಿತ್ತು. ಹಣ್ಣುಗಳಾದಾಗ ಪಕ್ಷಿಗಳು ಧಾವಿಸಿ ಬರುತ್ತಿದ್ದವು. ಮರದ ಕೊಂಬೆಗಳು ಎಲ್ಲರನ್ನೂ ಸ್ವಾಗತಿಸಿ ಆಶೀರ್ವದಿಸಿ ಕಳುಹಿಸುತ್ತಿದ್ದವು. ಆ ಊರಿನ ಒಬ್ಬ ಸಣ್ಣ ಹುಡುಗ ಆ ಮರದ ನೆರಳಿಗೆ ಬಂದು ಆಡಿಕೊಂಡಿರುತ್ತಿದ್ದ. ಅವನನ್ನು ಮರ ಬಹಳ ಇಷ್ಟಪಡುತ್ತಿತ್ತು.

ಹಿರಿದಕ್ಕೆ ಕಿರಿಯದರ ಜತೆಗೆ ಪ್ರೀತಿ, ಒಲುಮೆ ಮೂಡು ವುದು ಸಾಧ್ಯ. ಮರಕ್ಕೆ ತಾನು ಬಹಳ ದೊಡ್ಡದು ಎಂಬುದು ಗೊತ್ತಿರಲಿಲ್ಲ. ಒಲವಿಗೆ ದೊಡ್ಡದು – ಸಣ್ಣ ದೆಂಬುದು ಇಲ್ಲ.

ಮಾವಿನ ಮರವು ಬಾಲಕನನ್ನು ಇಷ್ಟಪ ಟ್ಟದ್ದು ಹೀಗೆ. ಆತ ಆಡಲು ಬಂದಾಗ ಅದರ ರೆಂಬೆಗಳು ಕೆಳಕ್ಕೆ ಬಾಗುತ್ತಿದ್ದವು. ಅವನು ತಿನ್ನಲಿ ಎಂದು ಅದು ಹಣ್ಣು ಗಳನ್ನು ತಾನಾಗಿ ಉದುರಿಸುತ್ತಿತ್ತು. ಪ್ರೀತಿ ಬಾಗಬಲ್ಲುದು, ಆದರೆ ಅಹಂ ಎದೆ ಸೆಟೆಸಿ ನಿಲ್ಲುತ್ತದೆ.
ಮಗು ತನ್ನ ನೆರಳಿನಲ್ಲಿ ಆಟವಾಡಿ ದಾಗ, ಹಣ್ಣುಗಳನ್ನು ತಿಂದಾಗ ಮರಕ್ಕೆ ಅಮಿತಾನಂದವಾಗುತ್ತಿತ್ತು. ಪ್ರೀತಿ ತಾನು ಏನನ್ನಾದರೂ ಕೊಟ್ಟರೆ ಬಹಳ ಸಂತುಷ್ಟ ವಾಗುತ್ತದೆ; ಆದರೆ ಅಹಂ ಪಡೆದು ಕೊಂಡಾಗಲಷ್ಟೇ ಖುಷಿಪಡುತ್ತದೆ.

ಬಾಲಕ ಬೆಳೆದು ದೊಡ್ಡವನಾದ. ಮರವೇರಿ ಕೊಂಬೆಗಳಲ್ಲಿ ಜೋಕಾಲಿ ಆಡು ತ್ತಿದ್ದ. ಅದರ ಎಲೆ, ಹೂಗೊಂಚಲು ಗಳನ್ನು ಕಿತ್ತು ಪೋಣಿಸಿ ತಲೆಯ ಮೇಲೆ ಧರಿಸಿ ಕಾಡಿನ ರಾಜನಂತೆ ನಟಿಸುತ್ತಿದ್ದ. ಪ್ರೀತಿಯ ಹೂವುಗಳಿದ್ದಾಗ ರಾಜರಂತಿರ ಬಹುದು. ಆದರೆ ಅಹಂನ ಮುಳ್ಳುಗಳಿ ದ್ದಾಗ ಎಲ್ಲವೂ ನರಕ.

ಕಾಲ ಸರಿದು ಬಾಲಕ ಯುವಕ ನಾದ. ಮಹತ್ವಾಕಾಂಕ್ಷೆಗಳು ಬೆಳೆದವು. ಆತ ಸದಾ ಮರದಡಿಗೆ ಬರುತ್ತಿರಲಿಲ್ಲ. ಮರ ಅವನಿಗಾಗಿ ಕಾಯುತ್ತಿತ್ತು. ಆತ ಬಾರದೆ ಇದ್ದಾಗ ವೇದನೆ ಪಡುತ್ತಿತ್ತು. ಪ್ರೀತಿ ಎಷ್ಟು ಕಾಲವೂ ಕಾಯಬಲ್ಲುದು, ತಾನು ಏನೂ ನೀಡದೆ ಇದ್ದಾಗ ಬೇಸರಿಸುವುದು. ತಾನು ಸಂಪೂರ್ಣ ಶರಣಾಗತಿಯಾದಾಗ ಪ್ರೀತಿ ಬಹಳ ಸಂತುಷ್ಟವಾಗಿರುತ್ತದೆ. ಆದರೆ ಅಹಂ ಕಾಯುವುದಿಲ್ಲ, ಬಾಗುವುದಿಲ್ಲ.

ಒಂದು ದಿನ ಯುವಕ ಹಾದು ಹೋಗುತ್ತಿದ್ದಾಗ ಮರ ಆತನನ್ನು ಬಾ ಬಾ ಎಂದು ಕರೆಯಿತು. ಆತ ಅದರ ಹತ್ತಿರ ಬಂದು, “ನಾನೀಗ ದೊಡ್ಡವನಾಗಿದ್ದೇನೆ. ಈಗ ನನಗೆ ಹಣ ಬೇಕಾಗಿದೆ, ನಿನ್ನ ಪ್ರೀತಿಯಲ್ಲ’ ಎಂದ. ಮರ ಸ್ಥಂಭೀಭೂತ ವಾಯಿತು. “ನನ್ನಲ್ಲಿ ಹಣವಿಲ್ಲ, ಪ್ರೀತಿ ಮಾತ್ರ ಇದೆ. ಬೇಕಿದ್ದರೆ ನನ್ನ ಹಣ್ಣುಗಳನ್ನು ಒಯ್ದು ಮಾರಿಕೋ’ ಎಂದಿತು.

“ಹೌದಲ್ಲ’ ಅನಿಸಿತು ಯುವಕನಿಗೆ. ಆತ ಮರವೇರಿ ಹಣ್ಣುಗಳನ್ನು ಮಾತ್ರ ವಲ್ಲ, ಕಾಯಿಗಳನ್ನೂ ಉದುರಿಸಿದ. ಹಲವು ಎಲೆಗಳು, ಕೊಂಬೆಗಳು ಮುರಿ ದವು. ಆದರೂ ಮರ ಕೃತಾರ್ಥತೆಯನ್ನು ಅನುಭವಿಸಿತು. . ಕೊಡುವ ಪ್ರಕ್ರಿಯೆ ಯಲ್ಲಿ ತಾನು ಘಾಸಿ ಗೊಂಡರೂ ಪ್ರೀತಿ ಸಂತೃಪ್ತ. ಆದರೆ ಅಹಂ ಹಾಗಲ್ಲ; ಎಷ್ಟು ಪಡೆದರೂ ಅದಕ್ಕೆ ಅಸಂತೃಪ್ತಿಯೇ.

ಬಹಳ ವರ್ಷಗಳ ಬಳಿಕ ಮತ್ತೆ ಬಂದಾಗ ಆತ ಮಧ್ಯವಯಸ್ಕನಾಗಿದ್ದ. ಮನೆ ಕಟ್ಟುವುದಕ್ಕಾಗಿ ಮರ ಕಡಿಯಲು ಬಂದಿದ್ದ. ಮರ ಸಂತೋಷದಿಂದ ಒಪ್ಪಿಕೊಂಡಿತು. ಆತ ಕೊಡಲಿ ತಂದು ಕಡಿದು ಕೊಂಡೊಯ್ದ. ಈಗ ಮರದ ಕಾಂಡ ಮಾತ್ರ ಉಳಿದುಕೊಂಡಿತ್ತು. ಹೋಗುವಾಗ ಕೃತಜ್ಞತೆ ಹೇಳುವುದಕ್ಕೂ ಆತ ತಿರುಗಿ ನೋಡಲಿಲ್ಲ. ಆದರೂ ಮರ ಬಹಳ ಸಂತೋಷಪಟ್ಟಿತು.

ಬಹಳ ವರ್ಷಗಳ ಬಳಿಕ ಮತ್ತೆ ಮರದತ್ತ ಬಂದಾಗ ಆತ ವೃದ್ಧನಾಗಿದ್ದ. “ನನಗೆ ದೂರ ದೇಶಕ್ಕೆ ವ್ಯಾಪಾರಕ್ಕಾಗಿ ಹೋಗುವುದಕ್ಕೆ ದೋಣಿ ಮಾಡ ಬೇಕಾಗಿದೆ. ಅದಕ್ಕೆ ನೀನು ಬೇಕು’ ಎಂದ. ಮರ ಅದಕ್ಕೂ ಖುಷಿಯಿಂದ ಒಪ್ಪಿಕೊಂಡಿತು. ವೃದ್ಧ ಗರಗಸ ತಂದು ಕಾಂಡವನ್ನು ಕತ್ತರಿಸಿ ಒಯ್ದ. ಈಗಲೂ ಕೃತಜ್ಞತೆಯ ಮಾತು ಹೇಳಲಿಲ್ಲ. ಆದರೂ ಮರ ಸಂತೋಷ ಪಟ್ಟಿತು.

ಈಗ ಮರವಿದ್ದಲ್ಲಿ ಒಂದು ಮೋಟು ಕುತ್ತಿ ಮಾತ್ರ ಇದೆ. ದೂರ ದೇಶಕ್ಕೆ ಹೋದ ವೃದ್ಧ ಮರಳಿ ಬಂದಿಲ್ಲ. ಆತ ಮತ್ತೆ ಬಂದಾನು, ಕನಿಷ್ಠ ಅವನು ಹೇಗಿದ್ದಾನೆ ಎಂಬ ಸುದ್ದಿಯಾದರೂ ಕೇಳಿಬರ ಬಹುದು ಎಂದು ಅದು ಕುಟುಕು ಜೀವ ಹಿಡಿದುಕೊಂಡು ಕಾಯುತ್ತಿದೆ. ವೃದ್ಧ ಎಲ್ಲಿ ಹೋಗಿದ್ದಾನೆ, ಚೆನ್ನಾಗಿ ದ್ದಾನೆಯೇ ಎಂಬುದು ನಿಮಗೇ ನಾದರೂ ಗೊತ್ತಿದ್ದರೆ ಅದಕ್ಕೆ ತಿಳಿಸಿಬಿಡಿ.
( ಸಾರ ಸಂಗ್ರಹ)

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.