ಇಂದಿನಿಂದ ಭಕ್ತರ ಪ್ರವೇಶ: ವಿವಿಧ ದೇವಸ್ಥಾನಗಳಲ್ಲಿ ಸಕಲ ಸಿದ್ಧತೆ


Team Udayavani, Jun 8, 2020, 5:45 AM IST

ಇಂದಿನಿಂದ ಭಕ್ತರ ಪ್ರವೇಶ: ವಿವಿಧ ದೇವಸ್ಥಾನಗಳಲ್ಲಿ ಸಕಲ ಸಿದ್ಧತೆ

ಉಡುಪಿ: ಕೋವಿಡ್-19 ಕಾರಣದ ಲಾಕ್‌ಡೌನ್‌ ಆರಂಭವಾದಂದಿನಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕೊಡದ ದೇವಸ್ಥಾನಗಳು ಸೋಮವಾರದಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕೊಡುತ್ತಿವೆ.

ಸುಮಾರು ಎರಡೂವರೆ ತಿಂಗಳ ಬಳಿಕ ದೇವಸ್ಥಾನಗಳು ತೆರೆದುಕೊಳ್ಳುತ್ತಿರುವುದ ರಿಂದ ಕೊಲ್ಲೂರು, ಮಂದಾರ್ತಿ, ಕಮಲಶಿಲೆ, ಕೋಟೇಶ್ವರ, ಕುಂದೇಶ್ವರ, ಆನೆಗುಡ್ಡೆ, ಹಟ್ಟಿಯಂಗಡಿ, ಶ್ರೀಕ್ಷೇತ್ರ ಚಂಡಿಕಾಂಬಾ ದೇವಸ್ಥಾನ, ಸೌಕೂರು ದುರ್ಗಾಪರಮೇಶ್ವರಿ ದೇಗುಲ, ಕ್ರೋಢ
ಶಂಕರನಾರಾಯಣ ದೇಗುಲ, ಕೊಡವೂರು ಶಂಕರನಾರಾಯಣ, ಕಾಪು, ಎಲ್ಲೂರು, ಪಡುಬಿದ್ರಿ, ಕಟಪಾಡಿ ದೇವಸ್ಥಾನ, ಉಡುಪಿ ಆಸುಪಾಸಿನ ದೇವಿ ದೇವಸ್ಥಾನ ಗಳು ಸೇರಿದಂತೆ ಬಹುತೇಕ ದೇವಸ್ಥಾನಗಳ ಆಡಳಿತ ಮಂಡಳಿಗಳು ಭಕ್ತರನ್ನು ಸ್ವಾಗತಿಸಲು ಸಿದ್ಧತೆ ನಡೆಸಿವೆ.

ಊಟ, ತೀರ್ಥ ಸೇವೆ ಇಲ್ಲ
ಸ್ಯಾನಿಟೈಸರ್‌ ಬಳಕೆ, ಮಾಸ್ಕ್ ಧರಿಸಿ ಒಳಪ್ರವೇಶಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಇತ್ಯಾದಿ ಷರತ್ತುಗಳನ್ನು ಪಾಲಿಸಲು ದೇವಸ್ಥಾನಗಳು ಕಟಿಬದ್ಧವಾಗಿವೆ. ಅನ್ನದಾಸೋಹ ನಡೆಯುತ್ತಿದ್ದ ಬಹುತೇಕ ದೇವಸ್ಥಾನಗಳಲ್ಲಿ ಅನ್ನ ದಾಸೋಹವನ್ನು ಆರಂಭಿಸುತ್ತಿಲ್ಲ. ಸರಕಾರದ ನಿಯಮಾವಳಿ ಪ್ರಕಾರ ತೀರ್ಥ ಪ್ರಸಾದಗಳ ವಿತರಣೆ, ಯಾವುದೇ ಸೇವಾದಿಗಳೂ ನಡೆಯುತ್ತಿಲ್ಲ.

ಕುಳಿತುಕೊಳ್ಳುವಂತಿಲ್ಲ
ಭಕ್ತರು ದೇವರ ವಿಗ್ರಹಕ್ಕೆ ಕೈ ಮುಗಿ ಯಲು ಮಾತ್ರ ಅವಕಾಶ, ಕುಳಿತು ಕೊಳ್ಳುವಂತಿಲ್ಲ. ನಮಸ್ಕಾರ ಮಾಡುವಾಗ ಆರು ಅಡಿ ಅಂತರ ಕಾಪಾಡಿಕೊಳ್ಳಬೇಕು ಎಂಬ ನಿಯಮ ಜಾರಿಗೊಳಿಸಲು ಸರಕಾರ ನಿರ್ದೇಶನ ನೀಡಿದೆ.

ಶ್ರೀಕೃಷ್ಣಮಠದಲ್ಲಿಲ್ಲ
ಶ್ರೀಕೃಷ್ಣಮಠದಲ್ಲಿ ಸೋಮವಾರದಿಂದ ದರ್ಶನಾವಕಾಶ ಇಲ್ಲ. ಇನ್ನೂ 20-30 ದಿನ ಬಿಟ್ಟು ಆಗಿನ ವಾತಾವರಣ ನೋಡಿ ಭಕ್ತರಿಗೆ ದರ್ಶನಾವಕಾಶ ಕಲ್ಪಿಸಲಾಗುತ್ತದೆ.

ಮಾರಣಕಟ್ಟೆಯಲ್ಲಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಜೂ. 15ರ ಸಂಕ್ರಾಂತಿ ಬಳಿಕ ಭಕ್ತರಿಗೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ.

ಹೊರ ಪ್ರಾಕಾರದಲ್ಲಿ ದರ್ಶನ
ಉಡುಪಿ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನ, ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗರ್ಭಗುಡಿ ಹೊರಗಿನ ಪ್ರಾಕಾರವನ್ನು ಪ್ರವೇಶಿಸಲು ಅನುಮತಿ ಇಲ್ಲ. ಹೊರ ಪ್ರಾಕಾರದಲ್ಲಿಯೇ ಸ್ಟೀಲ್‌ ಗೇಟ್‌ಗೆ ಬೀಗ ಹಾಕಲಾಗುತ್ತದೆ. ಅಲ್ಲಿಂದಲೇ ದೇವರ ದರ್ಶನ ಮಾಡಬೇಕು. ಮಂಗಳಾರತಿ ಮಾಡಿದ ಆರತಿ ಸ್ವೀಕರಿಸುವ ಕ್ರಮವನ್ನೂ ಕೈಬಿಡಲಾಗಿದೆ. ಮಂಗಳಾರತಿ ನೋಡಲು ಮಾತ್ರ ಅವಕಾಶವಿದೆ. ಕುಂದಾಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಾಕ್‌ಡೌನ್‌ ಅವಧಿಯಂತೆ ಮುಂದುವರಿಯಲಿದೆ.

“ಸೋಂಕಿದೆ ಎಚ್ಚರಿಕೆ’ ನಾಮಫ‌ಲಕ
“ಸಮೀಪ ನಿಂತಿರುವವರಿಗೆ ಸೋಂಕಿರಬಹುದು, ಎಚ್ಚರಿಕೆ’ ಎಂಬ ನಾಮಫ‌ಲಕವನ್ನು ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದಲ್ಲಿ ಅಳವಡಿಸಲಾಗುತ್ತದೆ. ಇಂತಹ ನಾಲ್ಕೈದು ಫ‌ಲಕಗಳನ್ನು ಹಾಕಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಧರ್ಮದರ್ಶಿ
ಡಾ| ನಿ.ಬೀ. ವಿಜಯ ಬಲ್ಲಾಳ್‌ ತಿಳಿಸಿದ್ದಾರೆ.

ಪುರಾಣಗಳ ಸಂದೇಶ ಸರಕಾರದಿಂದ ಜಾರಿ!
ಧರ್ಮಶಾಸ್ತ್ರ, ಪುರಾಣಗಳಲ್ಲಿ ದೇವರು, ಗುರುಗಳಲ್ಲಿ ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಎಂಬ ಸಂದೇಶವಿದೆ. ಇದೇ ವೇಳೆ ಏನೂ ಇಲ್ಲದಾಗ ಕೈಮುಗಿದು ಹೋಗಬೇಕೆಂಬ ನಿರ್ದೇಶನವೂ ಇದೆ. ಶ್ರದ್ಧಾಭಕ್ತಿಯಿಂದ ಕೈಮುಗಿಯುವುದೂ ಅತಿ ದೊಡ್ಡ ಸೇವೆ ಎಂಬ ಪರಿಕಲ್ಪನೆಯನ್ನು ಶಾಸ್ತ್ರಗಳು ಸಾರಿವೆ. ಈಗ ಈ ಸಂದೇಶವನ್ನು ಕೊರೊನಾ ವೈರಸ್‌ ಸರಕಾರದ ಮೂಲಕ ಜಾರಿಗೊಳ್ಳುವಂತೆ ನೋಡಿಕೊಂಡಿದೆ. ಆದೇಶ ಕೊಟ್ಟ ಸರಕಾರಕ್ಕೂ ಈ ಶಾಸ್ತ್ರ ಸಂದೇಶ ಗೊತ್ತಿರಲಿಕ್ಕಿಲ್ಲ.

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.