ಸಕ್ರೆ ಬೈಲಿನಲ್ಲಿ ತರಬೇತಿ ಪಡೆಯುತ್ತಿದ್ದ ಗಂಡಾನೆ ಸಾವು
Team Udayavani, Aug 23, 2019, 9:38 PM IST
ಶಿವಮೊಗ್ಗ: ಹೊಟ್ಟೆನೋವಿನಿಂದ ಬಳಲುತ್ತಿದ್ದ 35 ವರ್ಷದ ಗಂಡಾನೆಯೊಂದು(ನಾಗಣ್ಣ) ಸಾವನ್ನಪ್ಪಿರುವ ಘಟನೆ ಇಲ್ಲಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಶುಕ್ರವಾರ ಸಂಜೆ ನಡೆದಿದೆ.
2017 ಡಿಸೆಂಬರ್ 21 ರಂದು ಚನ್ನಗಿರಿ ತಾಲ್ಲೂಕಿನ ಉಬ್ರಾಣಿಯಲ್ಲಿ ಈ ಆನೆಯನ್ನು ಅಭಿಮನ್ಯು ಮತ್ತು ತಂಡದಿಂದ ಸೆರೆ ಹಿಡಿದು ಕರೆತರಲಾಗಿತ್ತು.
ಭಾರಿ ಅವಾಂತರ ಸೃಷ್ಟಿಸಿದ್ದ ಈ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಟ್ಟಿತ್ತು. ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಭಾಗದಲ್ಲಿ ಹತ್ತಾರು ದಿನ ಕಾಡಿದ್ದ ಈ ಆನೆ ನಾಲ್ವರ ಸಾವಿಗೂ ಕಾರಣವಾಗಿತ್ತು.
15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸತತ ಪರಿಶ್ರಮದಿಂದ ಈ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಯಶಸ್ವಿಯಾಗಿತ್ತು. ನಂತರ ಈ ಆನೆಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ಕರೆತಂದು ಪಳಗಿಸಲಾಗಿತ್ತು. ಭಾರಿ ಸಿಟ್ಟು, ತೀಕ್ಷ ದಂತ ಹೊಂದಿದ್ದ ಈ ಆನೆಯು ಈಚೆಗೆ ಮಾವುತರ ಜತೆಗೆ ಬೆರೆತಿತ್ತು.
ಗುರುವಾರ ಕೂಡ ಫಿಲಂ ಶೂಟಿಂಗ್ವೊಂದರಲ್ಲಿ ಭಾಗವಹಿಸಿತ್ತು.
ಶುಕ್ರವಾರ ಬೆಳಗ್ಗೆಯಿಂದಲೇ ಹೊಟ್ಟೆನೋವು, ಭೇದಿಯಿಂದ ಬಳಲುತ್ತಿದ್ದ ಆನೆಗೆ ಔಷಧೋಪಚಾರ ಮಾಡಲಾಗಿತ್ತು. ಮಧ್ಯಾಹ್ನ ಎರಡು ಗಂಟೆಗೆ ಔಷಧ ನೀಡಿ ನೀರಿನ ಬಳಿಯೇ ಬಿಡಲಾಗಿತ್ತು. ಸಂಜೆ 4.30ರ ವೇಳೆಗೆ ಕೊನೆ ಉಸಿರೆಳೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಶಾರದಾ ಎಂಬ ಆನೆ ಮರಿಯೂ ಇದೇ ರೀತಿ ಹೊಟ್ಟೆನೋವಿನಿಂದ ಬಳಲಿ ಸಾವನ್ನಪ್ಪಿತ್ತು. ಪೋಸ್ಟ್ಮಾರ್ಟಮ್ ವರದಿ ಬಂದ ಮೇಲೆ ಸತ್ಯಾಂಶ ತಿಳಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ