ಮಂಗಳವಾರದ ನಿಮ್ಮ ರಾಶಿಫಲ ಇಲ್ಲಿದೆ ಓದಿ
Team Udayavani, May 11, 2021, 7:37 AM IST
ಮೇಷ: ಹಂತಹಂತವಾಗಿ ಗೊಂದಲಗಳು ತಿಳಿಯಾಗಲಿವೆ. ಕೆಲವೊಮ್ಮೆ ಅದೃಷ್ಟದ ಆಸರೆ ಗೋಚರಕ್ಕೆ ಬರುತ್ತದೆ. ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳಬೇಕು. ಜಾಗ್ರತೆ ಇರಲಿ.
ವೃಷಭ: ಸಾಂಸಾರಿಕವಾಗಿ ಹೊಂದಾಣಿಕೆಯು ಗಟ್ಟಿಯಾಗಿರಲಿ. ಹಿರಿಯರ ಹಾಗೂ ಮಕ್ಕಳ ಆರೋಗ್ಯ ಆಗಾಗ ಕೈಕೊಡಲಿದೆ. ಆರ್ಥಿಕ ಪರಿಸ್ಥಿತಿ ನಿಮ್ಮ ಲೆಕ್ಕಾಚಾರವನ್ನು ಹೊಂದಿಕೊಂಡು ಇರುತ್ತದೆ. ದೂರ ಸಂಚಾರದ ವಿಷಯ ಬೇಡ.
ಮಿಥುನ: ಚಾಲನೆಯಲ್ಲಿ ಗಮನವಿರಲಿ. ವಾಹನ ಖರೀದಿಗೆ ಅನುಕೂಲವಾಗಲಿದೆ. ಆಗಾಗ ಕೊಂಚ ಗೊಂದಲಕ್ಕೆ ಕಾರಣವಾಗುವ ತಾಪತ್ರಯವನ್ನು ಅನುಭವಿಸ ಬೇಕಾಗುತ್ತದೆ. ಸ್ವಯಂಕೃತ ಅಪರಾಧವನ್ನು ಮಾಡದಿರಿ.
ಕರ್ಕ: ವಿದ್ಯಾರ್ಥಿಗಳು, ನಿರುದ್ಯೋಗಿಗಳು ಹಾಗೂ ಅವಿವಾಹಿತರು ನಿರಾಶಾ ಮನೋಭಾವವನ್ನು ಹೊಂದಲಿ ದ್ದಾರೆ. ಅನಾವಶ್ಯಕವಾಗಿ ಹಿರಿಯರೊಡನೆ ವಾದ-ವಿವಾದಗಳಿಗೆ ಕಾರಣರಾಗದಿರಿ. ಹಿತಶತ್ರುಗಳ ನಡವಳಿಕೆ ಮೇಲೆ ಗಮನವಿರಲಿ.
ಸಿಂಹ :ಆಗಾಗ ಧನಾಗಮನದಿಂದ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ದೂರ ಸಂಚಾರದಲ್ಲಿ ಮಾತ್ರವಲ್ಲ ಚಾಲನೆಯಲ್ಲಿ ಕೂಡಾ ಜಾಗ್ರತೆ ಇರಲಿ. ಕಾರ್ಯಕ್ಷೇತ್ರದಲ್ಲಿ ಹಲವಾರು ವಾಸ್ತವ ಅವಕಾಶಗಳು ನಿಮಗೆ ಸಿಗಲಿದೆ.
ಕನ್ಯಾ: ಧನ ಸಂಗ್ರಹದಿಂದ ಋಣಬಾಧೆಯು ನಿವಾರಣೆಯಾಗಿ ಸಂತಸವಾಗಲಿದೆ. ಕೋರ್ಟುಕಚೇರಿ ಕಾರ್ಯಭಾಗದಲ್ಲಿ ಬಹು ಸಮಯದ ನಂತರ ನಿಮಗೆ ಯಶಸ್ಸು ಕಂಡುಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ತುಲಾ: ದೂರಸಂಚಾರದಿಂದ ನಿಮ್ಮ ಮನೋಕಾಮನೆ ಗಳು ಸಿದ್ಧಿಯಾಗಲಿವೆ. ನವದಂಪತಿಗಳಿಗೆ ಸಂತಾನಭಾಗ್ಯದ ಸೂಚನೆ ತಂದೀತು. ಹೂಡಿಕೆ ವಿಸ್ತರಣೆಗಳು, ವ್ಯಾಪಾರ, ವ್ಯವಹಾರಗಳಿಗೆ ಅನುಕೂಲಕರವಾಗಲಿದೆ. ಶುಭವಿದೆ.
ವೃಶ್ಚಿಕ: ವ್ಯವಹಾರದಲ್ಲಿ ಆಗಾಗ ಹಿನ್ನಡೆಯನ್ನು ಅನುಭವಿಸಿ ದರೂ ಧನಾಗಮನವು ಪರಿಸ್ಥಿತಿಯನ್ನು ಸುಧಾರಿಸಲಿದೆ. ಕೆಲವೊಮ್ಮೆ ನಿಮ್ಮ ಪ್ರಯತ್ನಶೀಲತೆಗೆ ಮಹತ್ತರ ಬದಲಾವಣೆ ಕಂಡುಬರುವುದು. ಶುಭಮಂಗಲ ಕಾರ್ಯ ನಡೆದೀತು.
ಧನು: ಕಾರ್ಯರಂಗದಲ್ಲಿ ಹಾಗೂ ವೃತ್ತಿರಂಗದಲ್ಲಿ ಸಾವಧಾನ ದಿಂದ ಮುಂದುವರಿಯಬೇಕಾಗುತ್ತದೆ. ಅನಾವಶ್ಯಕ ಅಪವಾದ, ಅವಮಾನ ಕಿರಿಕಿರಿ ಪ್ರಸಂಗವನ್ನು ಎದುರಿಸಬೇಕಾದೀತು. ನಿಮ್ಮ ಪ್ರಯತ್ನಬಲ, ಆತ್ಮವಿಶ್ವಾಸದಲ್ಲಿ ವಿಶ್ವಾಸವಿರಲಿ.
ಮಕರ: ಸಾಮಾಜಿಕ ಕ್ಷೇತ್ರದಲ್ಲಿ ಕೂಡಾ ಕೀರ್ತಿ ಹೆಚ್ಚಿ ಆದರಾದಿಗಳಿಗೆ ಪಾತ್ರರಾಗುವಿರಿ. ಜೊತೆಗೆ ಅದರಿಂದ ಆರ್ಥಿಕ ಅನುಕೂಲವೂ ಒದಗಿ ಬರುವುದು. ಅವಿವಾಹಿತರ ವೈವಾಹಿಕ ಭಾಗ್ಯಕ್ಕೆ ಅದೃಷ್ಟ ಖುಲಾಯಿಸಲಿದೆ. ಮುನ್ನಡೆಯಿರಿ.
ಕುಂಭ: ಆದಾಯ ಮಾರ್ಗಸೂಚಿಗೆ ಹಲವಾರು ಮಾರ್ಗ ಗಳು ಗೋಚರಕ್ಕೆ ಬಂದಾವು. ಸದುಪಯೋಗಿಸಿಕೊಳ್ಳಿರಿ. ಯಾವುದೇ ವಿಚಾರದಲ್ಲಿ ದುಡುಕು ವರ್ತನೆಗೆ ಕಾರಣರಾಗದಂತೆ ವರ್ತಿಸಿರಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಮುನ್ನಡೆ ಕಂಡಾರು.
ಮೀನ: ನಿರುದ್ಯೋಗಿಗಳ ಹಿನ್ನಡೆ ಅನಿರೀಕ್ಷಿತ ರೂಪದಲ್ಲಿ ನಿವಾರಣೆಯಾಗುತ್ತದೆ. ಶ್ರೀ ದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ. ಕೌಟುಂಬಿಕವಾಗಿ ಹಠಾತ್ ಏರಿಳಿತಗಳು ಕಂಡುಬಂದಾವು. ದೂರಸಂಚಾರದ ಅವಕಾಶ ಕಾರ್ಯಸಾಧನೆಗೆ ಅನುಕೂಲವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ