ಕಲಬುರಗಿಯಲ್ಲಿ ಸಿಡಿಲಿಗೆ ಇಬ್ಬರು ಬಲಿ: 25 ಕುರಿಗಳ ಸಾವು
Team Udayavani, Oct 10, 2019, 4:31 PM IST
ಕಲಬುರಗಿ: ಜಿಲ್ಲೆಯಲ್ಲಿ ಗುರುವಾರ ಸುರಿದ ಭಾರಿ ಮಳೆ ಮತ್ತು ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದು, ಸುಮಾರು 25 ಕುರಿಗಳು ಸಾವನ್ನಪ್ಪಿವೆ.
ವಾಡಿ ಪಟ್ಟಣದ ದಂಡಗುಂಡ ಗ್ರಾಮದಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಿಡಿಲು ಬಡಿದು ಉಮಾದೇವಿ ಹದಗಲ್(17) ಎಂಬ ಯುವತಿ ಅಸುನೀಗಿದ್ದಾರೆ. ಜಮೀನಿನಲ್ಲಿ ಎಳ್ಳಿನ ರಾಶಿ ಮಾಡುತ್ತಿದ್ದಾಗ ಸಿಡಿಲು ಬಡೆದಿದ್ದು, ಸ್ಥಳದಲ್ಲಿ ಉಮಾದೇವಿ ಮೃತಪಟ್ಟಿದ್ದಾರೆ.
ಕಡಬೂರ ಗ್ರಾಮದಲ್ಲಿ ರಮೇಶ ನರಿಬೋಳಿ ಎಂಬಾತ ಕೂಡ ಸಿಡಿಲಿಗೆ ಬಲಿಯಾಗಿದ್ದಾನೆ. ಇನ್ನು, ಪತ್ತು ನಾಯಕ್ ತಾಂಡಾದಲ್ಲಿ ಸುಮಾರು 20ರಿಂದ 25 ಕುರಿಗಳು ಸಿಡಿಲು ಬಡಿದು ಮೃತಪಟ್ಟಿವೆ.