ಸಿಡಿಲಕಿಡಿ ಸುಂದರ್ ಸಾಹಸ
Team Udayavani, Jan 23, 2022, 5:15 AM IST
ನೇತಾಜಿ ಸೇನೆಯ ಕೊಂಡಿಗಳಲ್ಲಿ ನನ್ನ ಅಜ್ಜ ಯು. ಸುಂದರ ರಾವ್ ಅವರೂ ಒಬ್ಬರು ಎಂಬುದು ನನಗೆ ಹೆಮ್ಮೆ ವಿಚಾರ. ಬೆಳ್ತಂಗಡಿಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ, 1941ರಲ್ಲಿ ಬಾಂಬೆಯಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿ ಸೇರಿಕೊಂಡರು.
ಸಾಗರೋತ್ತರ ರಾಷ್ಟ್ರವಾದ ಮಲೇಷ್ಯಾದಲ್ಲಿ ಸೇನಾ ಸೇವೆಯಲ್ಲಿದ್ದಾಗ ಎರಡನೇ ಮಹಾಯುದ್ಧ ಕಾವೇರಿತ್ತು. ಮಿತ್ರಪಡೆಗಳ 1.3 ಲಕ್ಷ ಸೈನಿಕರ ಜತೆ ಇವರೂ ಯುದ್ಧ ಕೈದಿಯಾಗಿ ಸೆರೆಯಾದರು. ಆದರೆ, ಅಲ್ಲಿನ ಜೈಲಿನಿಂದ ತಪ್ಪಿಸಿಕೊಂಡ ಸುಂದರ್ ರಾವ್, ಸಿಂಗಾಪುರಕ್ಕೆ ಬಂದು ತಲೆಮರೆಸಿಕೊಂಡರು.
ಆಗ ಇಂಡಿಯನ್ ನ್ಯಾಶನಲ್ ಆರ್ಮಿ (ಐಎನ್ಎ) ಸೈನಿಕರು ಸಿಂಗಾಪುರದಲ್ಲಿ ಜಪಾನ್ ಸೇನೆಯ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಐಎನ್ಎ ಒಳ್ಳೆಯ ಆಯ್ಕೆ ಅಂತನ್ನಿಸಿ, ಸುಂದರ್ ನೇತಾಜಿಯ ಸೇನೆಗೆ ಸೇರ್ಪಡೆಗೊಂಡರು. ರಾಸ್ ಬಿಹಾರಿ ಬೋಸ್ ಮತ್ತು ಮೋಹನ್ ಸಿಂಗ್ ಅವರ ಮಾರ್ಗದರ್ಶನವೂ ಅಲ್ಲಿ ಇವರಿಗೆ ಸಿಕ್ಕಿತ್ತು. ಸಿಂಗಾಪುರದಿಂದ ಬರ್ಮಾ ತಲುಪಿದ್ದ ಐಎನ್ಎ ತುಕಡಿಯಲ್ಲಿ ನನ್ನ ತಾತಾ ಇದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 1947ರ ಮೊದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತಿತ್ತು ಎಂಬುದು ನಿಸ್ಸಂಶಯ.
-ಡಾ| ವಿಶಾಲ್ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ