ಸಿಡಿಲಕಿಡಿ ಸುಂದರ್ ಸಾಹಸ
Team Udayavani, Jan 23, 2022, 5:15 AM IST
ನೇತಾಜಿ ಸೇನೆಯ ಕೊಂಡಿಗಳಲ್ಲಿ ನನ್ನ ಅಜ್ಜ ಯು. ಸುಂದರ ರಾವ್ ಅವರೂ ಒಬ್ಬರು ಎಂಬುದು ನನಗೆ ಹೆಮ್ಮೆ ವಿಚಾರ. ಬೆಳ್ತಂಗಡಿಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ, 1941ರಲ್ಲಿ ಬಾಂಬೆಯಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿ ಸೇರಿಕೊಂಡರು.
ಸಾಗರೋತ್ತರ ರಾಷ್ಟ್ರವಾದ ಮಲೇಷ್ಯಾದಲ್ಲಿ ಸೇನಾ ಸೇವೆಯಲ್ಲಿದ್ದಾಗ ಎರಡನೇ ಮಹಾಯುದ್ಧ ಕಾವೇರಿತ್ತು. ಮಿತ್ರಪಡೆಗಳ 1.3 ಲಕ್ಷ ಸೈನಿಕರ ಜತೆ ಇವರೂ ಯುದ್ಧ ಕೈದಿಯಾಗಿ ಸೆರೆಯಾದರು. ಆದರೆ, ಅಲ್ಲಿನ ಜೈಲಿನಿಂದ ತಪ್ಪಿಸಿಕೊಂಡ ಸುಂದರ್ ರಾವ್, ಸಿಂಗಾಪುರಕ್ಕೆ ಬಂದು ತಲೆಮರೆಸಿಕೊಂಡರು.
ಆಗ ಇಂಡಿಯನ್ ನ್ಯಾಶನಲ್ ಆರ್ಮಿ (ಐಎನ್ಎ) ಸೈನಿಕರು ಸಿಂಗಾಪುರದಲ್ಲಿ ಜಪಾನ್ ಸೇನೆಯ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಐಎನ್ಎ ಒಳ್ಳೆಯ ಆಯ್ಕೆ ಅಂತನ್ನಿಸಿ, ಸುಂದರ್ ನೇತಾಜಿಯ ಸೇನೆಗೆ ಸೇರ್ಪಡೆಗೊಂಡರು. ರಾಸ್ ಬಿಹಾರಿ ಬೋಸ್ ಮತ್ತು ಮೋಹನ್ ಸಿಂಗ್ ಅವರ ಮಾರ್ಗದರ್ಶನವೂ ಅಲ್ಲಿ ಇವರಿಗೆ ಸಿಕ್ಕಿತ್ತು. ಸಿಂಗಾಪುರದಿಂದ ಬರ್ಮಾ ತಲುಪಿದ್ದ ಐಎನ್ಎ ತುಕಡಿಯಲ್ಲಿ ನನ್ನ ತಾತಾ ಇದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 1947ರ ಮೊದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತಿತ್ತು ಎಂಬುದು ನಿಸ್ಸಂಶಯ.
-ಡಾ| ವಿಶಾಲ್ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ