ಮೌಲ್ಯಾಧಾರಿತ ಸುದ್ದಿಗೆ “ಉದಯವಾಣಿ’ ಎತ್ತಿದ ಕೈ: ಸಿಎಂ
"ಉದಯವಾಣಿ' ಹೊರತಂದಿರುವ "ಸುವರ್ಣ ಸಂಪದ' ವಿಶೇಷಾಂಕ ಬಿಡುಗಡೆ
Team Udayavani, Jan 26, 2022, 6:45 AM IST
"ಉದಯವಾಣಿ' ಹೊರತಂದಿರುವ "ಸುವರ್ಣ ಸಂಪದ' ವಿಶೇಷಾಂಕವನ್ನು ಮುಖ್ಯಮಂತ್ರಿ ಬಿಡುಗಡೆಗೊಳಿಸಿದರು.
ಬೆಂಗಳೂರು: “ಉದಯವಾಣಿ’ ಇಂದಿಗೂ ಮೌಲ್ಯಾ ಧಾರಿತ ಶುದ್ಧ ಸುದ್ದಿ ನೀಡುತ್ತಿರುವ ಪತ್ರಿಕೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸೆ ವ್ಯಕ್ತಪಡಿಸಿದರು.
ಸುವರ್ಣ ಸಂಭ್ರಮದಲ್ಲಿರುವ “ಉದಯವಾಣಿ’ ಹೊರತಂದಿರುವ “ಸುವರ್ಣ ಸಂಪದ’ ವಿಶೇಷಾಂಕ ವನ್ನು ವಿಧಾನ ಸೌಧದ ಕಚೇರಿಯಲ್ಲಿ ಮಂಗಳವಾರ ಬಿಡುಗಡೆಗೊಳಿಸಿ ಅವರು ಮಾತನಾಡಿ, “ಉದಯವಾಣಿ’ ಓದುಗರ ಹೃದಯದಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ ಎಂದು ಹೇಳಿದರು.
ಕರಾವಳಿಯಿಂದ ಬಂದಂತಹ ಪತ್ರಿಕೆ ಬಯಲುಸೀಮೆ ಸೇರಿ ವಿಶಾಲ ಕರ್ನಾಟಕದಲ್ಲಿ ಯಶಸ್ವಿಯಾಗಲು ಜನಪರ ಮತ್ತು ಅಭಿವೃದ್ಧಿ ಪರ ನಿಲುವು ಹಾಗೂ ನಾಡಿನ ಕಾಳಜಿಯೊಂದಿಗೆ ಓದುಗರಲ್ಲಿ ಮೂಡಿಸಿ ರುವ ವಿಶ್ವಾಸವೇ ಕಾರಣ ಎಂದರು.
ಪೈ ಕುಟುಂಬದ ಕೊಡುಗೆ
ಕರಾವಳಿಯಷ್ಟೇ ಅಲ್ಲದೆ ರಾಜ್ಯಕ್ಕೆ ಪೈ ಕುಟುಂಬದವರ ಕೊಡುಗೆ ಇದೆ. ಮಣಿಪಾಲ ಪ್ರಸ್, ಆಸ್ಪತ್ರೆ ಸೇರಿದಂತೆ ಪೈ ಸಮೂಹ ಕಟ್ಟಿರುವ ಅನೇಕ ಸಂಸ್ಥೆಗಳು ಸಮಾಜಮುಖಿ ಸಂಸ್ಥೆಗಳಾಗಿದ್ದು ಇತರರಿಗೆ ಮಾದರಿ ಹಾಗೂ ಪ್ರೇರಣೆ. ಅದೇ ಹಾದಿಯಲ್ಲಿ ಪತ್ರಿಕಾ ಮೌಲ್ಯವನ್ನು “ಉದಯವಾಣಿ’ ಉಳಿಸಿಕೊಂಡಿದೆ ಎಂದು ಬಣ್ಣಿಸಿದರು.
ಬದಲಾದ ಕಾಲಘಟ್ಟ ಹಾಗೂ ಜಾಗತೀಕರಣದ ಫಲವಾಗಿ ಪತ್ರಿಕೆ ಗಳು ಸಹ ಬದಲಾಗುತ್ತಿವೆ. ಇದು ಅನಿವಾರ್ಯ. ಆದರೂ ಕಾಲಕ್ಕೆ ತಕ್ಕಂತೆ ಹೊಸತನ ಮೈಗೂಡಿಸಿಕೊಂಡು ಓದುಗರ ಪ್ರೀತಿಗೆ ಪಾತ್ರವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ನ ಡಿಜಿಎಂ (ವ್ಯಾಪಾರಾಭಿವೃದ್ಧಿ) ಯು. ಸತೀಶ್ ಶೆಣೈ, ಬೆಂಗಳೂರು ಆವೃತ್ತಿಯ ಪ್ರಭಾರ ಸಂಪಾದಕ ಬಿ.ಕೆ. ಗಣೇಶ್, ಗ್ರಾಮೀಣ ಸುದ್ದಿ ವಿಭಾಗದ ಮುಖ್ಯಸ್ಥ ಅ.ಮ. ಸುರೇಶ್, ಉಪ ಮುಖ್ಯ ವರದಿಗಾರ ಎಸ್. ಲಕ್ಷ್ಮೀನಾರಾಯಣ, ವಿಶೇಷ ವರದಿಗಾರ ಶಂಕರ ಪಾಗೋಜಿ, ಜಾಹೀರಾತು ವಿಭಾಗದ ಮುಖ್ಯಸ್ಥ ಬಿ.ಕೆ. ಕೃಷ್ಣಪ್ಪ, ಪ್ರಸರಣ ವಿಭಾಗದ ಸಹಾಯಕ ವ್ಯವಸ್ಥಾಪಕ ರಾಜಣ್ಣ ಹಾಗೂ ವಿರೂಪಾಕ್ಷ ಗೌಡ ಚಿಕ್ಕನಗೌಡ್ರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ