ಉಡುಪಿ ಜಿಲ್ಲೆ ಗಡಿ ಬಂದ್: ಪಲಿಮಾರಿನಲ್ಲಿ ತಡೆಗೋಡೆ; ತೀವ್ರ ನಿಗಾ
Team Udayavani, Apr 12, 2020, 12:28 PM IST
ಉಡುಪಿ / ಪಡುಬಿದ್ರಿ: ಉಡುಪಿ ಜಿಲ್ಲೆಯ ಗಡಿಗಳನ್ನು ಶನಿವಾರದಿಂದ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಶೀರೂರು, ಹೆಜಮಾಡಿ, ಪಲಿಮಾರು, ಸೋಮೇಶ್ವರ, ಮಾಳ, ಹೊಸಂಗಡಿ ಮೊದಲಾದೆಡೆ ಗಳಲ್ಲಿರುವ ಗಡಿಯ ಚೆಕ್ಪೋಸ್ಟ್ಗಳಲ್ಲಿ ಬಂದೋಬಸ್ತ್ ಬಿಗಿ ಗೊಳಿಸಲಾಗಿದೆ. ಅಗತ್ಯ ವಸ್ತುಗಳಾದ ಪತ್ರಿಕೆ, ಹಾಲು, ಆ್ಯಂಬುಲೆನ್ಸ್, ತರಕಾರಿ, ಆಹಾರ ವಸ್ತು ಇತ್ಯಾದಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಬೇರೆ ವಾಹನಗಳಿಗೆ ಅವಕಾಶ ನೀಡಲಿಲ್ಲ.
ಉಡುಪಿ ಮತ್ತು ದ.ಕ. ಜಿಲ್ಲೆಯ ಗಡಿ ಪಲಿಮಾರು ಸೇತುವೆಗೆ ಮಣ್ಣು ಹಾಕಿ ತಡೆಗೋಡೆ ನಿರ್ಮಿಸಲಾಗಿದೆ. ಶನಿವಾರ ಭೇಟಿ ನೀಡಿದ ಕಾಪು ತಹಶೀಲ್ದಾರ್, ತಡೆಗೋಡೆ ನಿರ್ಮಿಸಲು ಗ್ರಾಮಕರಣಿಕರು ಮತ್ತು ಗ್ರಾ.ಪಂ. ಪಿಡಿಒ ಅವರಿಗೆ ಸೂಚಿಸಿದರು.
ರಾ. ಹೆದ್ದಾರಿ ಮೂಲಕ ಹೋಗಿ ಬರಲು ಕಷ್ಟವಾದ ಕಾರಣ ವಾಹನ ಸವಾರರು ಕರ್ನಿರೆ ಮೂಲಕ ಪಲಿಮಾರು ದಾರಿಯಾಗಿ ಉಡುಪಿ ಜಿಲ್ಲೆಗೆ ಬರುತ್ತಿದ್ದರು. ಇದರ ಬಗ್ಗೆ ದೂರುಗಳು ಬಂದ ಕಾರಣ ತಹಶೀಲ್ದಾರ್ ಭೇಟಿ ನೀಡಿದ್ದರು. ಪೊಲೀಸ್ ಚೆಕ್ಪೋಸ್ಟ್ ಕಷ್ಟಸಾಧ್ಯವೆಂಬ ಕಾರಣಕ್ಕೆ ಐದು ಲೋಡ್ ಕೆಂಪು ಮಣ್ಣು ಹಾಕಿ ಗಡಿ ಬಂದ್ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ