ಉಡುಪಿ ಜಿಲ್ಲೆ: ಗಾಳಿ-ಮಳೆ; ಸಿಡಿಲಿಗೆ ಹಾನಿ
Team Udayavani, Jun 19, 2020, 5:33 AM IST
ದೊಡ್ಡಣಗುಡ್ಡೆಯ ಜುಮಾದಿ ಕಟ್ಟೆ ಬಳಿ ಲಾರಿಯೊಂದು ಹೂತುಹೋಯಿತು.
ಉಡುಪಿ: ಕಳೆದೆರಡು ದಿನಗಳಿಂದ ವ್ಯಾಪಕ ಮಳೆಯಾಗಿದ್ದ ಜಿಲ್ಲೆಯಲ್ಲಿ ಗುರುವಾರ ಮಳೆ ಪ್ರಮಾಣ ಕಡಿಮೆಯಾಗಿದ್ದು, ನಗರದಲ್ಲಿ ದಿನವಿಡಿ ಮಳೆ -ಬಿಸಿಲಿನಾಟ ಕಂಡು ಬಂದಿತ್ತು.
ಬುಧವಾರ ರಾತ್ರಿ ಸುರಿದ ಮಳೆಗೆ ಬ್ರಹ್ಮಾವರ ತಾಲೂಕಿನಲ್ಲಿ ಹಲವು ಮನೆ ಗಳಿಗೆ ಹಾನಿಯಾಗಿದೆ. ಚೇರ್ಕಾಡಿ ಕಮಲಾ ಬಾಯಿ ಅವರ ಮನೆಗೆ ಸಿಡಿಲು ಬಡಿದು ಸುಮಾರು 70 ಸಾವಿರ ರೂ. ನಷ್ಟವಾದರೆ; ಚೇರ್ಕಳ ಶಕುಂತಳಾ ಅವರ ಮನೆಗೆ ಸಿಡಿಲು ಬಡಿದು 25 ಸಾವಿರ ರೂ.; ಬೈಕಾಡಿ ಗ್ರಾಮದ ಜಯಲಕ್ಷ್ಮೀ ಆಚಾರ್ ಅವರ ಮನೆಗೆ 15 ಸಾವಿರ ರೂ.; ಹಾರಾಡಿ ಗ್ರಾಮದ ಸಾಬಿರಾಲಿ ಅವರ ಮನೆಗೆ ಸಿಡಿಲು ಬಡಿದು 25 ಸಾವಿರ ರೂ.; ಕಚ್ಚಾರು ಗ್ರಾಮದ ಜ್ಯೋತಿ ಅವರ ಮನೆಗೆ ಹಾನಿಯಾಗಿ 5 ಸಾವಿರ ರೂ.; ಪಾಂಡೇಶ್ವರ ಗ್ರಾಮದ ರಾಜು ದೇವಾಡಿಗ ಅವರ ದನದ ಕೊಟ್ಟಿಗೆಗೆ ಹಾನಿಯಾಗಿ 25 ಸಾವಿರ ರೂ.; ಚಾಂತಾರು ಗ್ರಾಮದ ಅಣ್ಣಪ್ಪ ನಾಯ್ಕ ಅವರ ಮನೆಯ ದನದ ಕೊಟ್ಟಿಗೆಗೆ ಸುಮಾರು 10 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ದೊಡ್ಡಣಗುಡ್ಡೆ : ಹೂತು ಹೋದ ಲಾರಿ
ಉಡುಪಿ ತಾಲೂಕಿನಲ್ಲಿ ಬುಧವಾರ ಹಗಲು-ರಾತ್ರಿ ಉತ್ತಮ ಮಳೆಯಾಗಿತ್ತು. ಅವೈಜ್ಞಾನಿಕ ಕಾಮಗಾರಿಯಿಂದಾಗಿ ದೊಡ್ಡಣಗುಡ್ಡೆ ಗುಂಡಿಬೈಲು- ಪೆರಂಪಳ್ಳಿ ರಸ್ತೆಯ ಜುಮಾದಿ ಕಟ್ಟೆ ಹತ್ತಿರ ಸರಕು ಸಾಮಾನು ಹೊತ್ತ ಲಾರಿಯೊಂದು ಬುಧವಾರ ರಸ್ತೆ ಬದಿಯಲ್ಲಿ ಹೂತು ಹೋಗಿತ್ತು. ಅನಂತರ ಸಂಚಾರಕ್ಕೆ ತೆರವು ಮಾಡಿಕೊಡಲಾಯಿತು.
ವಿವಿಧೆಡೆ ಮಳೆ
ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಕಾಪು ಭಾಗಗಳಲ್ಲಿ ಕೂಡ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ. ಕೋಡಿ, ಗಂಗೊಳ್ಳಿ, ಮರವಂತೆ, ಉಪ್ಪುಂದ ದಲ್ಲಿ ಕಡಲಬ್ಬರ ಜೋರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Udupi; ಎ. 24ರ ಬಳಿಕ ಹೊರಗಿನವರು ಕ್ಷೇತ್ರದಲ್ಲಿರುವಂತಿಲ್ಲ: ಜಿಲ್ಲಾಧಿಕಾರಿ
Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ
Veerappa Moily; ದೇಶಕ್ಕೆ ಕ್ರಿಕೆಟ್ ಕಾಮೆಂಟ್ರಿಯನ್ ಬೇಕಿಲ್ಲ
Manipal; ಟ್ಯಾಪ್ಮಿ 38ನೇ ಘಟಿಕೋತ್ಸವ: 510 ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
MUST WATCH
ಹೊಸ ಸೇರ್ಪಡೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ