ಇಲ್ಲಿ ಉಚಿತ ಊಟದ ಜತೆ ಹಣ್ಣುಹಂಪಲು ವಿತರಣೆ
ಉಡುಪಿ ಇಂದಿರಾ ಕ್ಯಾಂಟೀನ್
Team Udayavani, Apr 21, 2020, 6:11 AM IST
ಉಡುಪಿ: ಉಡುಪಿ ನಗರದ ಇಂದಿರಾ ಕ್ಯಾಂಟೀನ್ನಲ್ಲಿ ಮಾದರಿ ಎಂಬಂತೆ ಉಚಿತ ಊಟ, ತಿಂಡಿ ಜತೆಗೆ ಹಣ್ಣು ಹಂಪಲು ವಿತರಿಸಲಾಗುತ್ತಿದೆ.
ಉಡುಪಿಯ ಹೊಟೇಲ್, ಮಾಲ್, ಕೆಫೆಗಳು ಬಂದ್ ಆಗಿವೆ. ಇಂತಹ ಸಂದರ್ಭ ಜನರು ಹಸಿವಿನಿಂದ ಇರಬಾರದು ಎಂದು ಉದ್ಯಮಿ ಕಲ್ಕೂರ ರೆಫ್ರಿಜರೇಷನ್ ಆ್ಯಂಡ್ ಕಿಚನ್ ಇಕ್ವಿಪ್ಮೆಂಟ್ ಪ್ರೈ.ಲಿ. ಸಂಸ್ಥೆಯ ಮಾಲಕ ಕೆ. ರಂಜನ್ ಕಲ್ಕೂರ ಅವರು ಇಂದಿರಾ ಕ್ಯಾಂಟೀನ್ ಮೂಲಕ ನೂರಾರು ಮಂದಿಗೆ ದಿನದ ಮೂರೂ ಹೊತ್ತು ತಿಂಡಿ, ಊಟ ನೀಡುತ್ತಿದ್ದಾರೆ.
ಹಳೆ ತಾಲೂಕು ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ಬೆಳಗ್ಗೆ 400 ಮಂದಿಗೆ ತಿಂಡಿ, ಮಧ್ಯಾಹ್ನ 200 ಮಂದಿಗೆ ಊಟ ಮತ್ತು ಸಂಜೆ 100 ಮಂದಿಗೆ ಊಟ ವಿತರಿಸಲಾಗುತ್ತಿದೆ. ತಿಂಡಿ, ಊಟದ ಜತೆ ಬಾಳೆಹಣ್ಣು, ಸೇಬು, ಕಲ್ಲಂಗಡಿ ಹಣ್ಣು ಇತ್ಯಾದಿ ಹಂಪಲು ಗಳನ್ನು ನೀಡುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಸ್ಯಾನಿಟೈಸರ್ನಲ್ಲಿ ಕೈ ತೊಳೆದ ಬಳಿಕವೇ ಆಹಾರ ನೀಡಲಾಗುತ್ತಿದೆ.
ಉಚಿತ ಊಟ ಮುಂದುವರಿಕೆ
ಲಾಕ್ಡೌನ್ ಜಾರಿಯಿದ್ದ ಎ. 7ರಿಂದ ಕ್ಯಾಂಟೀನ್ನಲ್ಲಿ ಉಚಿತ ಊಟ-ತಿಂಡಿ ವಿತರಣೆ ಆರಂಭಿಸಿದ್ದರು. ಎ.14ಕ್ಕೆ ಲಾಕ್ಡೌನ್ ಮುಕ್ತಾಯಗೊಳ್ಳದೆ ಮುಂದುವರೆದ ಕಾರಣ ಉಚಿತ ಊಟ ನೀಡುವುದನ್ನು ಮುಂದಿನ ಮೇ 3ರ ತನಕ ವಿಸ್ತರಿಸಲಾಗಿದೆ.
ವಿವಿಧ ತಿಂಡಿ
ಬೆಳಗ್ಗೆ ಫಲಾಹಾರಕ್ಕೆ ಇಡ್ಲಿ, ಪುಳಿಯೊಗರೆ, ಖಾರಬಾತ್, ಪೊಂಗಲ್, ರವಾ ಕಿಚಡಿ, ಚಿತ್ರಾನ್ನ, ವಾಂಗಿಬಾತ್, ಕೇಸರಿಬಾತ್ ಖಾದ್ಯ ವಿದ್ದರೆ, ಮಧ್ಯಾಹ್ನ ತರಕಾರಿ ಊಟಕ್ಕೆ ಅನ್ನ ಸಾಂಬಾರ್, ಮೊಸರನ್ನಾ, ಟೊಮೆಟೊ ಬಾತ್, ಚಿತ್ರನ್ನ, ವಾಂಗಿಬಾತ್, ಬಿಸಿಬೇಳೆಬಾತ್, ಮೆಂತೆ, ಫಲಾವ್, ಪುಳಿಯೊಗರೆ, ಪಲಾವ್ ಇರುತ್ತದೆ. ಪರಿಸರದಲ್ಲಿ ಶುಚಿತ್ವಕ್ಕೂ ಆದ್ಯತೆ ನೀಡಲಾಗಿದೆ ಎಂದು ಇಂದಿರಾ ಕ್ಯಾಂಟೀನ್ನ ಮ್ಯಾನೇಜರ್ ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ