ಅನರ್ಹ ಶಾಸಕರು: ಸ್ಪೀಕರ್‌ ಪಾತ್ರದ ಚರ್ಚೆ ಶುರು


Team Udayavani, Oct 26, 2019, 3:09 AM IST

anarha

ಬೆಂಗಳೂರು: ರಾಜ್ಯದ ಹದಿನೇಳು ಶಾಸಕರ ಅನರ್ಹತೆ “ಚೆಂಡು’ ಮತ್ತೆ ಸ್ಪೀಕರ್‌ ಅಂಗಳಕ್ಕೆ ಬರುತ್ತಾ? ಅನರ್ಹತೆ ರದ್ದಾಗುತ್ತಾ? ಉಪ ಚುನಾವಣೆ ಮುಂದೂಡಿಕೆ ಯಾಗುತ್ತಾ ಎಂಬ ವಿಚಾರ ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. “ಅನರ್ಹತೆ ಸಂಬಂಧ ಹೊಸದಾಗಿ ನಿರ್ಧಾರ ತೆಗೆದುಕೊಳ್ಳಲು ಹಾಲಿ ಸ್ಪೀಕರ್‌ ಸಿದ್ಧ’ ಎಂಬ ಸ್ಪೀಕರ್‌ ಪರ ವಾದ ಮಾಡುತ್ತಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಸುಪ್ರೀಂಕೋರ್ಟ್‌ ಮುಂದೆ ಹೇಳಿರುವುದು ಇಡೀ ಪ್ರಕರಣಕ್ಕೆ ಮತ್ತೂಂದು ಟ್ವಿಸ್ಟ್‌ ದೊರೆಯುವ ಲಕ್ಷಣಗಳು ಕಂಡುಬರುತ್ತಿವೆ.

ಅನರ್ಹತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಪೂರ್ಣಗೊಂಡು, ತೀರ್ಪು ಕಾಯ್ದಿರಿಸಲಾಗಿದೆಯಾದರೂ ಒಂದೊಮ್ಮೆ ಸುಪ್ರೀಂಕೋರ್ಟ್‌ ಅನರ್ಹತೆ ಇತ್ಯರ್ಥ ಅಥವಾ ಮರು ಪರಿಶೀಲನೆಗೆ ಈಗಿನ ಸ್ಪೀಕರ್‌ ತೀರ್ಮಾನ ಕೈಗೊಳ್ಳಲಿ ಎಂಬ ತೀರ್ಪು ಕೊಟ್ಟಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ “ಆಟ’ ಪ್ರಾರಂಭವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿಚಾರಣೆ ಪೂರ್ಣಗೊಂಡಿರುವುದು, ತೀರ್ಪು ಕಾಯ್ದಿರಿಸಿರುವುದರಿಂದ ಅನರ್ಹತೆಗೊಂಡ ಶಾಸಕರು ನಿರಾಳವಾಗಿದ್ದು, ಮತ್ತೆ ನಮ್ಮ ಪ್ರಕರಣ ಸ್ಪೀಕರ್‌ ಅಂಗಳಕ್ಕೆ ಬರಲಿದೆ, ನಮ್ಮ ಅನರ್ಹತೆ ರದ್ದಾಗಲಿದೆ.

ರಾಜೀನಾಮೆ ವಾಪಸ್‌ ಪಡೆಯಲೂ ಅವಕಾಶವಿದ್ದು, ರಾಜೀನಾಮೆ ವಾಪಸ್‌ ಪಡೆದರೆ ಉಪ ಚುನಾವಣೆ ರದ್ದಾಗುತ್ತದೆ, ನಾವು ಶಾಸಕರಾಗಿ ಮುಂದುವರಿಯಬಹುದು. ನಮ್ಮದೇ ಆದ ಒಂದು ಗುಂಪು ರಚಿಸಿಕೊಳ್ಳಬಹುದು. ಆ ನಂತರ ಬೇಕಾದರೆ ಮುಂದೆ ಪರಿಸ್ಥಿತಿ ನೋಡಿಕೊಂಡು ರಾಜೀನಾಮೆ ನೀಡಬಹುದೆಂಬ ಆಶಾಭಾವನೆ ಯಲ್ಲಿದ್ದಾರೆ. ಜನವರಿ ವೇಳೆಗೆ ರಾಜೀನಾಮೆ ನೀಡಿದರೆ ನಂತರ ಅಲ್ಲಿಂದ ಆರು ತಿಂಗಳು ಚುನಾವಣೆಗೆ ಕಾಲಾವಕಾಶ ಸಿಗುತ್ತದೆ. ಅಲ್ಲಿವರೆಗೂ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿ ನಂತರ ಉಪ ಚುನಾವಣೆಗೆ ಹೋಗಬಹುದು. ಆಗ ನಮಗೆ ಅನುಕೂಲವೆಂಬ ಭಾವನೆ ಅನರ್ಹತೆಗೊಂಡ ಶಾಸಕರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾರ್ವತ್ರಿಕ ಚುನಾವಣೆ ಗುಮ್ಮ?: ಇದರ ನಡುವೆ, ರಾಜ್ಯದಲ್ಲಿ ಮುಂದಿನ ವರ್ಷದ ಪ್ರಾರಂಭದಲ್ಲೇ ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯೇ ಎದು ರಾಗಲಿದೆ. ಮಹಾರಾಷ್ಟ್ರ-ಹರಿಯಾಣ ಫ‌ಲಿತಾಂಶದಿಂದ ತಕ್ಷಣಕ್ಕೆ ಉಪ ಚುನಾವಣೆಗೆ ಹೋಗಲು ಬಿಜೆಪಿ ಕೇಂದ್ರ ನಾಯಕರಿಗೂ ಇಷ್ಟವಿಲ್ಲ. ಅನರ್ಹತೆ ರದ್ದು ನಂತರ ಸ್ವಲ್ಪ ಕಾಲ ಬಿಟ್ಟು ರಾಜೀನಾಮೆ ಕೊಡಿಸಿ ಅದು ಅಂಗೀಕಾರವಾದ ನಂತರ ಅವರಿಗೆ ಸಚಿವ ಸ್ಥಾನ ನೀಡಿ ಅವರನ್ನೂ ಒಪ್ಪಿಸಿ ಒಂದೇ ಬಾರಿ ಸಾರ್ವತ್ರಿಕ ಚುನಾವಣೆಗೆ ಹೋಗುವ ಕಾರ್ಯತಂತ್ರವೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ ಸುಪ್ರೀಂಕೋರ್ಟ್‌ ತೀರ್ಪಿನ ನಂತರಷ್ಟೇ ಸ್ಪಷ್ಟತೆ ಸಿಗಲಿದೆ.

ಲೆಕ್ಕಾಚಾರ: ಸಿದ್ದರಾಮಯ್ಯ ಪ್ರತಿಪಕ್ಷ ನಾಯಕನಾಗಿ ಮತ್ತೆ ಕಾಂಗ್ರೆಸ್‌ನಲ್ಲಿ ಪ್ರಬಲ ಆಗುತ್ತಿರುವುದರಿಂದ ಉಪ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಶ್ರಮ ಹಾಕಿಯೇ ತೀರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಲು ಕಠಿಣವಾಗಬಹುದು. ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಿ ಮತ ಬ್ಯಾಂಕ್‌ ಗಟ್ಟಿಗೊಳಿಸಿಕೊಂಡೇ ಚುನಾವಣೆಗೆ ಹೋಗುವುದು ಸೂಕ್ತ ಎಂಬ ಲೆಕ್ಕಾ ಚಾರ ಅವರದಾಗಿದ್ದು ಬಿಜೆಪಿ ವರಿಷ್ಠರ ಮುಂದೆಯೂ ಇದನ್ನು ಹೇಳಿಕೊಂಡಿದ್ದಾರೆಂದು ಹೇಳಲಾಗಿದೆ.

ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಪರ ತೀರ್ಪು ಬರಲಿದೆ. ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ. ಸ್ಪೀಕರ್‌ ಒಂದು ವಾರ ಗಡುವು ನೀಡಬೇಕಿತ್ತು, ಕೇವಲ ಮೂರು ದಿನ ಕೊಟ್ಟಿದ್ದರಿಂದ ಆನ್ಯಾಯವಾಗಿತ್ತು.
-ಆರ್‌.ಶಂಕರ್‌, ಅನರ್ಹ ಶಾಸಕ

ಇದೊಂದು ಐತಿಹಾಸಿಕ ತೀರ್ಪು ಆಗಲಿದೆ. ಲೀಗಲ್‌ ಜರ್ನಲ್‌ನಲ್ಲಿ ದಾಖಲಾಗುವ ಕೇಸ್‌ ಆಗಿ ಉಳಿಯ ಲಿದೆ. ಸೂರ್ಯಚಂದ್ರರು ಇರೋ ತನಕ ಈ ತೀರ್ಪು ಉಳಿಯಲಿದೆ. ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ.
-ಎಚ್‌.ವಿಶ್ವನಾಥ್‌, ಅನರ್ಹ ಶಾಸಕ

ಅನರ್ಹತೆ ಪ್ರಕರಣ ಹಾಲಿ ಸ್ಪೀಕರ್‌ ಮರುಪರಿಶೀಲನೆಗೆ ಬಂದಾಗ ಅನರ್ಹತೆ ರದ್ದು ಮಾಡಿದರೆ ಶಾಸಕರ ರಾಜೀನಾಮೆ ಅಂಗೀಕಾರ ಮಾಡಬೇಕಾಗುತ್ತದೆ. ಆಗ ಅವರೆಲ್ಲರೂ ಉಪ ಚುನಾವಣೆಗೆ ಸ್ಪರ್ಧಿಸಬಹುದು. ಅನರ್ಹತೆ ರದ್ದಾದ ಬಳಿಕ ಶಾಸಕರು ತಮ್ಮ ರಾಜೀನಾಮೆ ವಾಪಸ್‌ ಪಡೆದರೆ ಆಗ ಉಪ ಚುನಾವಣೆ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ, ಸ್ಪೀಕರ್‌ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ.
-ಅಶೋಕ್‌ ಹಾರನಹಳ್ಳಿ, ಮಾಜಿ ಅಡ್ವೋಕೇಟ್‌ ಜನರಲ್‌

ಶಾಸಕರ ಅನರ್ಹತೆ ಪ್ರಕರಣವನ್ನು ಮತ್ತೆ ಹಾಲಿ ಸ್ಪೀಕರ್‌ ಮರುಪರಿಶೀಲನೆಗೆ ಸೂಚಿಸಿದಾಗ ಕಾನೂನು ತಜ್ಞರ ಅಭಿಪ್ರಾಯ ಪಡೆದು ಹಿಂದಿನ ಸ್ಪೀಕರ್‌ ತೀರ್ಮಾನವಾದ ಅನರ್ಹತೆ ರದ್ದು ಮಾಡಲೂಬಹುದು. ಒಂದೊಮ್ಮೆ ಅನರ್ಹತೆ ರದ್ದುಗೊಂಡ ನಂತರ ಅವರು ತಾವು ಶಾಸಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ವಾಪಸ್‌ ಪಡೆದರೆ ಶಾಸಕರಾಗಿ ಮುಂದುವರಿಯಬಹುದು. ಆಗ ಉಪ ಚುನಾವಣೆ ರದ್ದಾಗುತ್ತದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈಗಾಗಲೇ ಅನರ್ಹತೆಗೊಂಡವರನ್ನು ಉಚ್ಚಾಟನೆ ಮಾಡಿರುವುದರಿಂದ ಅವರು ಒಂದು ಗುಂಪಾಗಿ ಸದನದಲ್ಲಿ ಗುರುತಿಸಿಕೊಳ್ಳಬಹುದು.
-ಎ.ಎಸ್‌.ಪೊನ್ನಣ್ಣ, ಹಿರಿಯ ವಕೀಲ

* ಎಸ್‌.ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.