ಇನ್ನಷ್ಟು ಅತ್ಯಾಧುನಿಕಗೊಳ್ಳಲಿದೆ ವಂದೇ ಭಾರತ್ ಎಕ್ಸ್ಪ್ರೆಸ್
ಅರೆ ಅತಿವೇಗದ ಟ್ರೈನುಗಳಿಗೆ ಹೊಸ ಹೊಸ ಸೌಲಭ್ಯ ಅಳವಡಿಕೆ
Team Udayavani, Aug 21, 2021, 9:00 PM IST
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅರೆ ಅತಿವೇಗದ ಟ್ರೈನುಗಳಾದ ವಂದೇ ಭಾರತ್ ಎಕ್ಸ್ಪ್ರೆಸ್ ಈಗಾಗಲೇ ಪ್ರಾಯೋಗಿಕ ಸಂಚಾರದಲ್ಲಿವೆ.
ಸಂತೋಷದ ಸಂಗತಿಯೆಂದರೆ ಈ ರೈಲುಗಳು ಸದ್ಯದಲ್ಲೇ ಇನ್ನಷ್ಟು ಅತ್ಯಾಧುನಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ. ಈಗಿನ ಅಂದಾಜಿನ ಪ್ರಕಾರ ಮುಂದಿನ ವರ್ಷ ಮಾರ್ಚ್ ಹೊತ್ತಿಗೆ ಟ್ರೈನುಗಳು ಸಿದ್ಧ ಸ್ಥಿತಿಯಲ್ಲಿ ಸಿಗಲಿವೆ, ಜೂನ್ ಹೊತ್ತಿಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ಆ.15ರಂದು ಸ್ವಾತಂತ್ರ್ಯದಿನದ ಅಮೃತ ಮಹೋತ್ಸವದ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ; 2023 ಆ.15ಕ್ಕೆ 75 ಹೊಸ ಅತ್ಯಾಧುನಿಕ ಟ್ರೈನುಗಳು ಸಂಚಾರ ಆರಂಭಿಸಲಿವೆ ಎಂದಿದ್ದರು. ಸ್ವಾತಂತ್ರ್ಯ ಬಂದು 75 ವರ್ಷವಾದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಿದ್ದರು. ಬಹುಶಃ ಆ ಹೊತ್ತಿಗೆ ಭಾರತದ ರೈಲ್ವೆ ವ್ಯವಸ್ಥೆ ಸಂಪೂರ್ಣ ಹೊಸರೂಪ ಪಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ:ಅಫ್ಘಾನಿಸ್ತಾನದ ಅಪಾಯದ ಕೂಪದಿಂದ ಪಾರಾದ ಮುಧೋಳ ಮೂಲದ ಯೋಧ ಮಂಜುನಾಥ ಮಾಳಿ
ಹೊಸ ಸೌಲಭ್ಯಗಳೇನಿರಲಿವೆ?
1. ಆಸನಗಳನ್ನು ಹಿಂದಕ್ಕೆ ವಾಲಿಸಿ ಕೂರುವ ವ್ಯವಸ್ಥೆ
2. ಬ್ಯಾಕ್ಟೀರಿಯಾ ಮುಕ್ತ ಹವಾನಿಯಂತ್ರಿತ ವ್ಯವಸ್ಥೆ.
3. ಟ್ರೈನುಗಳಲ್ಲಿನ ವಾತಾವರಣ ನಿಯಂತ್ರಿಸಲು, ವಿದ್ಯುತ್ ಮತ್ತಿತರೆ ಪ್ರಮುಖ ವ್ಯವಸ್ಥೆ ನಿಯಂತ್ರಣಕ್ಕೆ ಕೇಂದ್ರೀಕೃತ ಕೋಚ್ ನಿಗಾ ಘಟಕ.
4. ತುರ್ತು ಪರಿಸ್ಥಿತಿ ಎದುರಾದರೆ, ಅಪಘಾತವಾದರೆ ಜನರನ್ನು ಸಲೀಸಾಗಿ ಟ್ರೈನಿನಿಂದ ಹೊರಹಾಕಲು ನಾಲ್ಕು ತುರ್ತು ಕಿಟಕಿಗಳು
5. ಮುಂಗಾರು ಮಳೆ ಸುರಿಯುವ ವೇಳೆ ಪ್ರವಾಹ ಸ್ಥಿತಿಯನ್ನು ತಡೆದುಕೊಳ್ಳಲು ಅತ್ಯುತ್ತಮ ರಕ್ಷಣಾ ಸಾಧನಗಳ ಅಳವಡಿಕೆ.
6. ಯಾವುದೇ ಸಂದರ್ಭದಲ್ಲಿ ವಿದ್ಯುತ್ ವ್ಯವಸ್ಥೆ ಕೈಕೊಟ್ಟರೆ, ಪ್ರತಿ ಬೋಗಿ ಯಲ್ಲೂ ತಲಾ ನಾಲ್ಕು ಬೆಳಕಿನ ದೀಪಗಳು ಹೊತ್ತಿಕೊಳ್ಳುತ್ತವೆ.
7. ವಿದ್ಯುತ್ ಕೈಕೊಟ್ಟರೆ ಸತತ 3 ಗಂಟೆಗಳವರೆಗೆ ಸರಾಗವಾಗಿ ಗಾಳಿಯಾಡಲು, ಉಸಿರಾಟ ಮಾಡಲು ವ್ಯವಸ್ಥೆಯಿರುತ್ತದೆ.
8. ತುರ್ತು ಪರಿಸ್ಥಿತಿಯ ವೇಳೆ ಎಚ್ಚರಿಕೆ ನೀಡಲು ಪ್ರತೀ ಕೋಚ್ಗಳಲ್ಲಿ ನಾಲ್ಕು ಗುಂಡಿಗಳಿರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ