ಗೃಹಸ್ಥಾಶ್ರಮಕ್ಕೆ ಮರಳಿದ ವಿದ್ಯಾವಾರಿಧಿ ತೀರ್ಥರು


Team Udayavani, Oct 20, 2019, 3:05 AM IST

gruhastshrma

ಸುರಪುರ: ಹುಣಸಿಹೊಳೆ ಕಣ್ವ ಮಠದ ನಿರ್ಗಮಿತ ಪೀಠಾಧಿಪತಿ ವಿದ್ಯಾವಾರಿಧಿ ತೀರ್ಥರು ಶನಿವಾರ ಮಠದಲ್ಲಿ ಪ್ರಾಯಶ್ಚಿತಾಂಗ ಹೋಮ ನಡೆಸಿ ಕಾಶಾಂಬರ ವಸ್ತ್ರ ಕಳಚಿ ಗೃಹಸ್ಥಾಶ್ರಮ ಸ್ವೀಕರಿಸಿದರು. ಮಹಿಳೆಯೊಂದಿಗೆ ಅಶ್ಲೀಲ ಸಂಭಾಷಣೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಅವರು ನೂತನ ಯತಿ ವಿದ್ಯಾಕಣ್ವ ವಿರಾಜ ತೀರ್ಥರಿಗೆ ಕಾಯಿ ಹಸ್ತಾಂತರ ಮಾಡಿದ್ದರು.

ಬಳಿಕ ಶುಕ್ರವಾರ ಧರ್ಮದಂಡ ಹಸ್ತಾಂತರ ಮಾಡಿ, ಪೀಠತ್ಯಾಗ ಮಾಡಿದ್ದರು. ಐದು ವರ್ಷಗಳ ಹಿಂದೆ ಕೊಪ್ಪಳದ ಕೊಪ್ರೇಶ ಆಚಾರ್ಯ, ಕಣ್ವಮಠದ ಉತ್ತರಾಧಿಕಾರವನ್ನು ವೃಂದಾವನಸ್ಥ ವಿದ್ಯಾಭಾಸ್ಕರ ತೀರ್ಥರಿಂದ ವಹಿಸಿಕೊಂಡಿದ್ದರು. ರಾಜ್ಯವೂ ಸೇರಿ ದೇಶದ ವಿವಿಧೆಡೆ ಸಂಚರಿಸಿ ಕಣ್ವ ಸಮಾಜ ಸಂಘಟಿಸಿದ್ದರು. ಆ ಮೂಲಕ ಶುಕ್ಲಯಜುರ್ವೇದ ಧರ್ಮ ಪ್ರಚುರಪಡಿಸಿ ಪ್ರವರ್ಧಮಾನಕ್ಕೆ ತಂದಿದ್ದರು.

ಶ್ರೀಗಳ ವಿರುದ್ಧ ಮಹಿಳೆಯೊಂದಿಗಿನ ಚಾಟಿಂಗ್‌ ಆರೋಪ ಕೇಳಿ ಬಂದಾಗಿನಿಂದಲೂ ಕಣ್ವ ಮಠದ ಅನುಯಾಯಿಗಳು ಮತ್ತು ಸಮಾಜ ಬಾಂಧವರು ಸೇರಿ ಒಂದು ತಿಂಗಳ ಕಾಲ ನಿರಂತರ ಸಭೆ ನಡೆಸಿ ಪೀಠ ತ್ಯಾಗಕ್ಕೆ ಒತ್ತಾಯಿಸಿದ್ದರು. ಮಠದ ಪೋಷಕರಾದ ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕರ ನೇತೃತ್ವದಲ್ಲಿ ಸಭೆ ನಡೆಸಿ, ನೂತನ ಪೀಠಾಧಿ ಕಾರಿಯನ್ನಾಗಿ ಬೆಂಗಳೂರಿನ ರವೀಂದ್ರಚಾರ್ಯ ಜೋಶಿ ಹೆಸರನ್ನು ಅಂತಿಮಗೊಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಮಠದ ನೂತನ ಯತಿಗಳ ಪಟ್ಟಾಭಿಷೇಕ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತ್ತು. ವಿದ್ಯಾವಾರಿಧಿ ತೀರ್ಥರು ಮೂವರು ಮಕ್ಕಳ ವಿದ್ಯಾಭ್ಯಾಸ-ಮದುವೆ ಜವಾಬ್ದಾರಿ ಜೊತೆಗೆ ಪತ್ನಿ ಹಾಗೂ ವೃದ್ಧ ತಾಯಿ ಯೋಗಕ್ಷೇಮ ನೋಡಿಕೊಳ್ಳುವುದು ಸೇರಿ ಕುಟುಂಬದ ಜವಾಬ್ದಾರಿ ನಿರ್ವಹಣೆ ಹಿನ್ನೆಲೆಯಲ್ಲಿ ಗೃಹಸ್ಥಾಶ್ರಮಕ್ಕೆ ಮರುಳುವುದಾಗಿ ತಿಳಿಸಿದ್ದರು.

ಈ ಮೊದಲು ತಾವು ನಡೆಸಿಕೊಂಡು ಹೋಗುತ್ತಿದ್ದ ವೇದ ಪಾಠಶಾಲೆ ಪುನರಾರಂಭಿಸಿ ಮುಂದುವರಿಸಿಕೊಂಡು ಹೋಗುವ ಇಚ್ಛೆ ವ್ಯಕ್ತಪಡಿಸಿದ್ದರು. ವಿದ್ಯಾವಾರಿಧಿ ತೀರ್ಥರು ಶನಿವಾರ ಬೆಳಗ್ಗೆ ಕೃಷ್ಣಾನದಿಗೆ ತೆರಳಿ ದಂಡ ಮತ್ತು ಕಾಶಾಯ ವಸ್ತ್ರ ಕಳಚಿ ನದಿ ಸ್ನಾನ ಮಾಡಿದರು.

ನಂತರ ಮಠದಲ್ಲಿ ಪ್ರಾಯಶ್ಚಿತ್ತಾಂಗ ಹೋಮ ನಡೆಸಿ, ಸನ್ಯಾಸ ದೀಕ್ಷೆ ತ್ಯಾಗ ಮಾಡಿ, ಗೃಹಸ್ಥಾಶ್ರಮ ಸ್ವೀಕರಿಸುವುದರೊಂದಿಗೆ ಮತ್ತೆ ಕೊಪ್ರೇಶ ಆಚಾರ್ಯರಾಗಿ ಪರಿವರ್ತನೆ ಹೊಂದಿದರು. ಸನ್ಯಾಸ ಆಶ್ರಮದಿಂದ ಮರಳಿ ಗೃಹಸ್ಥಾಶ್ರಮಕ್ಕೆ ಮರಳುವ ವಿಧಿ ವಿಧಾನಗಳ ಮೂಲಕ ಕಾಶಾಯ ವಸ್ತ್ರ ಕಳಚಿ ಬಿಳಿ ಪಂಜೆ, ಅಂಗಿ ಧರಿಸಿ ಯಜ್ಞೋಪವೀತ (ಜನಿವಾರ) ಧಾರಣೆ ಮಾಡಿಕೊಂಡರು.

ಟಾಪ್ ನ್ಯೂಸ್

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.