ವಿಜಯನಗರ ಕಾಲುವೆ ಡಿಸೈನ್ ಬದಲಿಸುವ ಚರ್ಚೆ
Team Udayavani, Aug 13, 2020, 11:08 AM IST
ಗಂಗಾವತಿ: ಶಾಶ್ವತ ದುರಸ್ತಿ ಕಾಮಗಾರಿ ಕೈಗೊಂಡಿರುವ ಸ್ಥಳದಲ್ಲಿ ಪದೇ ಪದೆ ಒಡೆದು ರೈತರ ಆತಂಕಕ್ಕೆ ಕಾರಣವಾಗಿರುವ
ವಿಜಯನಗರ ಆನೆಗೊಂದಿ ಕಾಲುವೆ ಡಿಸೈನ್ ಬದಲಿಸಲು ಶೀಘ್ರವೇ ರೈತರ ಜತೆ ಚರ್ಚೆ ಮಾಡಿ ಯೋಜನೆ ರೂಪಿಸುವುದಾಗಿ
ತುಂಗಭದ್ರಾ ಯೋಜನೆಯ ಮುಖ್ಯ ಅಭಿಯಂತರ ಸಿ. ಮಂಜಪ್ಪ ತಿಳಿಸಿದ್ದಾರೆ. ಅವರು ತಾಲೂಕಿನ ಹನುಮನಹಳ್ಳಿ, ಸಾಣಾಪೂರ ಬಾವಿ, ಕಾಲುವೆ ಕಡೆಬಾಗಿಲು ಗ್ರಾಮದ ಬಳಿ ಕಾಲುವೆಗೆ ಭೇಟಿ ನೀಡಿ ರೈತರ ಮನವಿ ಆಲಿಸಿದ ನಂತರ ಸುದ್ದಿಗಾರರೊಂದಿಗೆ
ಮಾತನಾಡಿದರು.
ಸಾಣಾಪೂರದಿಂದ ಸಂಗಾಪೂರದ ವರೆಗೆ ಈ ಕಾಲುವೆ ಗುಡ್ಡ ಪ್ರದೇಶದಲ್ಲಿ ಹರಿಯುತ್ತಿದ್ದು, ಮಳೆಗಾಲದಲ್ಲಿ ಕಾಲುವೆ ನೀರು ಮತ್ತು ಮಳೆ ನೀರು ಸೇರಿ ಪ್ರಸ್ತುತ ಕಾಲುವೆ ಒಡೆಯುತ್ತಿದೆ. ಪುರಾತನ ಕಾಲದ ಕಾಲುವೆ ಕೆಲವು ಭಾರಿ ಮಾತ್ರ ಒಡೆದ ಉದಾಹರಣೆ ಇದ್ದು ತಾಂತ್ರಿಕತೆ ಬಳಸಿ ಕಾಲುವೆ ನಿರ್ಮಿಸಲಾಗಿದೆ. ಪುನಃ ಅದೇ ತಾಂತ್ರಕತೆ ಬಳಸಿ ಡಿಸೈನ್ ಬದಲಿಸಿ ಶಾಶ್ವತ ದುರಸ್ತಿ ಮಾಡಲು ರೈತರ ಸಲಹೆ ಪಡೆಯಲಾಗುತ್ತದೆ. ರೈತರ ಸಮಗ್ರ ಸಲಹೆ ಸೂಚನೆ ಸರಕಾರಕ್ಕೆ ಕಳುಹಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ವೈ. ರಮೇಶ, ಆನೆಗೊಂದಿ ರೈತ ಸಂಘದ ಅಧ್ಯಕ್ಷ ವೈ. ಸುದರ್ಶನ್ ವರ್ಮಾ ಸೇರಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಸೇರಿದಮತೆ ಸ್ಥಳೀಯ ರೈತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ