ಮಹಾರಾಷ್ಟ್ರ ಎಸಿಬಿ ಬಲೆಗೆ ಬಿದ್ದ ವಿಜಯಪುರ ಪೇದೆ ಸಸ್ಪೆಂಡ್
ಡಿಎಸ್ಪಿ ಬಂಧನಕ್ಕೆ ಶೋಧ
Team Udayavani, Aug 22, 2019, 6:00 PM IST
ವಿಜಯಪುರ: ರಾಜ್ಯದ ಗಮನ ಸೆಳೆದಿದ್ದ ಕಾಂಗ್ರೆಸ್ ನ ರೇಶ್ಮಾ ಪಡೇಕನೂರ ಹಂತಕ ಆರೋಪಿಗಳಿಂದ ಲಂಚ ಪಡೆಯುವಾಗ ವಿಜಯಪುರ ಪೊಲೀಸರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ರೇಶ್ಮಾ ಪಡೇಕನೂರ ಹತ್ಯೆಯ ಕುರಿತು ತನಿಖೆಗಾಗಿ ಸೋಲಾಪುರಕ್ಕೆ ತೆರಳಿದ್ದ ಬಸವನ ಬಾಗೇವಾಡಿ ಡಿಎಸ್ಪಿ ಮಹೇಶ್ವರಗೌಡ ಅವರಿದ್ದ ಪೊಲೀಸರು ಆರೋಪಿಗಳಿಗೆ ಐದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಡಿದ್ದಾರೆ.
ಅಂತಿಮವಾಗಿ ಒಂದು ಲಕ್ಷ ರೂ. ಲಂಚದ ಹಣ ಪಡೆಯುವಾಗ
ಪೇದೆ ಮಲ್ಲಿಕಾರ್ಜುನ ಪೂಜಾರಿ ಹಾಗೂ ಮಧ್ಯವರ್ತಿ ರಿಯಾಜ ಕೊಕಟನೂರ ಮಹಾರಾಷ್ಟ್ರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪೇದೆ ಮಲ್ಲಿಕಾರ್ಜುನ, ಖಾಸಗಿ ವ್ಯಕ್ತಿ ರಿಯಾಜನನ್ನು ಮಹಾರಾಷ್ಟ್ರ ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಪ್ರಮುಖ ಆರೋಪಿ ಬಸವನಬಾಗೇವಾಡಿ ಉಪವಿಭಾಗದ ಡಿವೈಎಸ್ಪಿ ಮಹೇಶ್ವರಗೌಡ ಬಂಧನಕ್ಕಾಗಿ ಶೋಧ ನಡೆದಿದ್ದು, ವಿಜಯಪುರ ಜಿಲ್ಲೆಗೆ ಧಾವಿಸಿದ್ದಾರೆ.
ಈ ಮಧ್ಯೆ ಮಹಾರಾಷ್ಟ್ರ ಎಸಿಬಿ ಬಲೆಗೆ ಬಿದ್ದಿರುವ ಪೇದೆ ಮಲ್ಲಿಕಾರ್ಜುನ ಪೂಜಾರಿ ಯನ್ನು ಸೇವೆಯಿಂದ ಅಮಾನತು ಮಾಡಿದ್ದಾಗಿ ವಿಜಯಪುರ ಎಸ್ಪಿ ಪ್ರಕಾಶ ನಿಕ್ಕಂ ಉದಯವಾಣಿ ಗೆ ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರ ಎಸಿಬಿ ಪೊಲೀಸರು ವರದಿ ನೀಡುತ್ತಲೇ ಡಿವೈಎಸ್ಪಿ ಮಹೇಶ್ವರಗೌಡ ವಿರುದ್ಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ವರದಿ ಸಲ್ಲಿಸುವುದಾಗಿ ಎಸ್ಪಿ ವಿವರಿಸಿದ್ದಾರೆ.