ಬರುವೆನೆಂದು ಬಾರದ ಸಚಿವ; ಕಾಯುತ್ತ ಕುಳಿತಿದ್ದ ನಿವಾಸಿಗಳು
Team Udayavani, Jan 13, 2021, 4:23 PM IST
ಹುಬ್ಬಳ್ಳಿ: ಗೋಕುಲ ರಸ್ತೆ ಜಗದೀಶ ನಗರ ಬಡಾವಣೆ ನಿವಾಸಿಗಳು ವಸತಿ ಸಚಿವ ವಿ. ಸೋಮಣ್ಣ ಅವರು ಬಡಾವಣೆಗೆ ಭೇಟಿ ಕೊಡುವುದಾಗಿ ಭರವಸೆ ನೀಡಿದ್ದರಿಂದ ಮಂಗಳವಾರ ಬೆಳಗ್ಗೆ 7 ಗಂಟೆಯಿಂದಲೇ ಅವರ ಬರುವಿಕೆಗಾಗಿ ಕಾಯುತ್ತ ಕುಳಿತಿದ್ದರು.
ಆದರೆ, ಸಚಿವರು ಸ್ಥಳಕ್ಕೆ ಬಾರದೆ ನೇರವಾಗಿ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದರು.
ಆಶ್ರಯ ಮನೆಗಳನ್ನು ಮೂಲ ಫಲಾನುಭವಿಗಳಿಗೆ ಹಸ್ತಾಂತರ ಮಾಡುವಂತೆ ಆಗ್ರಹಿಸಿ ಜಗದೀಶನಗರ ಆಶ್ರಯ ಬಡಾವಣೆ ನಿವಾಸಿಗಳು ಸೋಮವಾರ ವಸತಿ ಸಚಿವ ವಿ. ಸೋಮಣ್ಣ ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಮನವಿ ಮಾಡಿದ್ದರು. ಆಗ ಸಚಿವರು ಮಂಗಳವಾರ ಬೆಳಗ್ಗೆ ಬಾಗಲಕೋಟೆಗೆ ತೆರಳುವ ಮುನ್ನ ನಿಮ್ಮ ಬಡಾವಣೆಗೆ ಭೇಟಿಕೊಟ್ಟು ಪರಿಶೀಲಿಸುವೆ ಎಂದು ಭರವಸೆ ಕೊಟ್ಟಿದ್ದರು. ಜೊತೆಗೆ ಮಾಧ್ಯಮದವರಿಗೂ ಈ ವಿಷಯ ತಿಳಿಸಿದ್ದರು.
ಇದನ್ನೂ ಓದಿ:ಬಿಎಸ್ ವೈ ಸಂಪುಟಕ್ಕೆ ‘ಸಪ್ತ ಸಚಿವರ ಬಲ’: ನೂತನ ಸಚಿವರ ಪ್ರಮಾಣ ವಚನ
ಆದರೆ, ಮಂಗಳವಾರ ಸಚಿವರು ಮಾತ್ರ ಬಡಾವಣೆಗೆ ಭೇಟಿ ಕೊಡದೆ ನೇರವಾಗಿ ಬಾಗಲಕೋಟೆಗೆ ಪ್ರಯಾಣಿಸಿದರು. ಅವರ ಬರುವಿಕೆಗಾಗಿ ಬೆಳಗ್ಗೆ 7 ಗಂಟೆಯಿಂದಲೇ ಕೆಲಸ ಬಿಟ್ಟು ಕುಳಿತಿದ್ದ ನಿವಾಸಿಗಳು, ಇತ್ತ ಸಚಿವರು ಬರಲಿಲ್ಲ. ಒಂದು ದಿನದ
ದುಡಿಮೆ ಕಳೆದುಕೊಂಡೆವು. ಕಳೆದ 20 ವರ್ಷಗಳಿಂದ ನಮ್ಮದು ಇದೇ ಆಗೈತಿ ಎಂದು ನಿರಾಸೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ