ಮೈಸೂರಿನಲ್ಲಿ ಭೂ ಹಗರಣ : ಪ್ರಾದೇಶಿಕ ಆಯುಕ್ತರಿಂದ ತನಿಖೆಯಾಗಬೇಕು ಎಂದ ಹೆಚ್. ವಿಶ್ವನಾಥ್
Team Udayavani, Jun 11, 2021, 2:09 PM IST
ಮೈಸೂರು : ನಾವು ನೀವು ಕೊಡುವ ವರದಿಗೆ ಯಾವುದೇ ಬೆಲೆ ಇಲ್ಲ. ಸೋಮವಾರ ಪ್ರಾದೇಶಿಕ ಆಯುಕ್ತರು ಕೊಡುವ ವರದಿಗೆ ಬೆಲೆ. ಆದರೆ ಆ ವರದಿ ಈಗಾಗಲೇ ಒಪ್ಪಂದ ಆಗಿದೆ ಎಂದು ಸಾರಾ ಮಹೇಶ್ ದಾಖಲೆ ಕೊಟ್ಟು ಹೇಳಿಕೆ ನೀಡಿದಕ್ಕೆ ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರ ಜೊತೆ ಮೈಸೂರಿನಲ್ಲಿ ಭೂ ಅಕ್ರಮದ ವರದಿ ಬಗ್ಗೆ ಮಾತನಾಡಿದ ವಿಶ್ವನಾಥ್, ಸರಿಯಾದ ಸರ್ವೇ ನಂಬರ್ ನಮೂದಿಸಿ ವರದಿ ನೀಡಬೇಕು. ಈಗಾಗಲೇ ಈ ಪ್ರಕರಣದಲ್ಲಿ ಆದೇಶ ಆಗೋಗಿದೆ. ಇದೀಗಾ ಸರಪಳಿ ಹಿಡಿದು ಆ ಕಡೆ ಈ ಕಡೆ ತಿರುಗಿಸುತ್ತಿದ್ದಾರೆ ಅಷ್ಟೇ. ಈ ಪ್ರಕರಣವನ್ನ ಮುಚ್ಚಿ ಹಾಕುವ ಕೆಲಸ ಆಗುತ್ತಿದೆ. ಮೊದಲು ಇದೆಲ್ಲದರ ಬಗ್ಗೆ ಪ್ರಾದೇಶಿಕ ಆಯುಕ್ತರು ಸಮಗ್ರ ತನಿಖೆ ಮಾಡಬೇಕು ಎಂದರು.
ಮೈಸೂರಿನಲ್ಲಿ ಇದಿಷ್ಟೇ ಅಲ್ಲ- ಮೈಸೂರಿನಾದ್ಯಂತ ಈ ರೀತಿ ಆಗಿದೆ. ಎಲ್ಲವನ್ನು ರೆವಿನ್ಯೂ ಮಿನಿಸ್ಟರ್ ಮಾತನಾಡಲಿ. ಯಾಕೆ ಅವರು ಈ ಬಗ್ಗೆ ಸರಿಯಾಗಿ ಮಾತಾಡುತ್ತಿಲ್ಲ. ಮುಡಾ ಅಧ್ಯಕ್ಷರು, ಆಯುಕ್ತರಿಗೆ ಇದೆಲ್ಲವು ಗೊತ್ತಿಲ್ಲವಾ? ಇಡೀ ಮೈಸೂರಿನ ಭೂ ಅಕ್ರಮದ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಮೈಸೂರಿನಲ್ಲಿ ವಿಶ್ವನಾಥ್ ಆಗ್ರಹ ಮಾಡಿದ್ದಾರೆ.
ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಹೈಡ್ರಾಮಾ ನಡೆಯಿತು. ಶಾಸಕ ಸಾರಾ ಮಹೇಶ್ ಧರಣಿ ಮಾಡಿದ್ದು ಪ್ರಾದೇಶಿಕ ಆಯುಕ್ತರು ಬಂದು ಮನವಿ ಸ್ವೀಕರಿಸಿ ತನಿಖೆಗೆ ಸಮಿತಿ ರಚನೆ ಮಾಡಿದ್ದು ಎಲ್ಲವೂ ಪೂರ್ವ ನಿರ್ಧರಿತ. ಇದೆಲ್ಲಾ ದೊಡ್ಡ ನಾಟಕ. ಇದನ್ನು ನೋಡುತ್ತಿದ್ದಾರೆ ತನಿಖೆ ಹಳ್ಳ ಹಿಡಿಸುವ ಯತ್ನ ಇದು.
ಕಳಂಕಿತರು ಕೇಳಿದ್ದು ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ಕಟ್ಟಿದ್ದಿನೋ ಇಲ್ಲವೋ ಹೇಳಿ ಅಂತಾ ಅಷ್ಟೆ ಕೇಳ್ತಿದ್ದಾರೆ.
ರಾಜಕಾಲುವೆ ವಿಚಾರ ಡಿಸಿ ಆದೇಶದಲ್ಲಿ ಎಲ್ಲೂ ಇಲ್ಲ. ಆದೇಶದಲ್ಲಿ ಇಲ್ಲದೆ ಇರೋ ವಿಚಾರ ತನಿಖೆ ಮಾಡಿ ಇದರಲ್ಲಿ ಅಕ್ರಮ ಇಲ್ಲ ಅಂತಾ ವರದಿ ಪಡೆಯುವ ಯತ್ನವಿದು. ಪ್ರಾದೇಶಿಕ ಆಯುಕ್ತರು, ಕಳಂಕಿತರ ನಡುವೆ ಒಪ್ಪಂದ ನಡೆದಿರೋ ರೀತಿ ಕಾಣುತ್ತಿದೆ. ಹೀಗಾಗಲೆ ವರದಿಯೂ ಸಿದ್ಧವಿದೆ. ಸೋಮವಾರ ಅದು ಬಿಡುಗಡೆಯಾಗುತ್ತದೆ ಅಷ್ಟೆ.
ಹಿಂದಿನ ಡಿಸಿ ಮಾಡಿದ ಆದೇಶ ಎಲ್ಲಾ ಬಿಟ್ಟು ನಿಮಗೆ ಅನುಕೂಲಕವಾದ ಭಾಗದ ತನಿಖೆಗೆ ಮಾತ್ರ ಆಗ್ರಹ ಮಾಡಲಾಗಿದೆ. ಡಿಸಿ ಮಾಡಿದ ಆದೇಶ ಬಿಟ್ಟು ಪಾಸಿಂಗ್ ರೀಮಾರ್ಕ್ ಅಷ್ಟನ್ನೆ ಹಿಡಿದು ಕೊಂಡು ಯಾಕೆ ಎಳೆದಾಡಲಾಗುತ್ತಿದೆ. ಪ್ರಾದೇಶಿಕ ಆಯುಕ್ತರು ಸೋಮವಾರ ಕೊಡುವ ವರದಿಗೆ ಯಾವ ಬೆಲೆಯೂ ಇಲ್ಲ. ಕಣ್ಣಿಗೆ ಮಣ್ಣೆರೆಚಿ, ರೋಹಿಣಿ ಸಿಂಧೂರಿ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸುವ ಯತ್ನ. ಈ ವರದಿ ಮೂಲಕ ನಡೆದಿದೆ. ಪ್ರಾದೇಶಿಕ ಆಯುಕ್ತರಿಗೆ ಒಳ್ಳೆಯ ಹೆಸರಿಲ್ಲ. ಪ್ರಾದೇಶಿಕ ಆಯುಕ್ತರು ಕಳಂಕಿತರ ಬಗ್ಗೆ ಸೋಮವಾರ ನೀಡುವ ವರದಿ ಜನ ನಂಬಬಾರದು. ಒಂಟಿ ಧ್ವನಿಗೆ ಗಟ್ಟಿಧ್ವನಿ. ಒಂಟಿಯಾದರೂ ಪರವಾಗಿಲ್ಲ ನಾನು ಹೋರಾಡುತ್ತೇನೆ ಎಂದು ಮೈಸೂರಿನಲ್ಲಿ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ