ನಾಗರ ಹಾವು ಮತ್ತು ನಾಯಿ ನಡುವೆ ಘೋರ ಕಾದಾಟ: ಎರಡೂ ಜೀವ ಅಂತ್ಯ
Team Udayavani, Jan 28, 2022, 6:40 PM IST
ಸಕಲೇಶಪುರ: ಹಾವು-ಮುಂಗುಸಿ ಬದ್ದ ವೈರಿಗಳು ಎಂಬ ಮಾತು ಸಾಮಾನ್ಯವಾಗಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ಹಾವು ಮತ್ತು ನಾಯಿಗಳು ವೈರಿಗಳಾಗಿರುವ ದೃಶ್ಯ ಹೆಚ್ಚು ಕಂಡು ಬರುತ್ತಿದ್ದು ಹಾವು ಮತ್ತು ನಾಯಿಯ ನಡುವೆ ಕಾದಾಟ ನಡೆದು ಎರಡೂ ಪ್ರಾಣಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಶುಕ್ರವಾರಸಂತೆ ಗ್ರಾಮದಲ್ಲಿ ಗುರುವಾರ ಗ್ರಾಮದ ಮಂಜುನಾಥ್ ಎಂಬುವವರು ತಮ್ಮ ಜಮೀನಿಗೆ ಹೋಗುವ ವೇಳೆ ಅವರೊಂದಿಗೆ ಸಾಕಿದ ನಾಯಿಯು ಸಹ ತೆರಳಿತ್ತು ದಾರಿ ಮದ್ಯೆ ನಾಗರಹಾವೊಂದು ಎದುರಾಗಿದ್ದು, ಈ ವೇಳೆ ಮಂಜುನಾಥ್ ನಾಯಿಯನ್ನು ಕರೆದರು ಸಹ ನಾಯಿ ಬರದೆ ಹಾವಿನ ಜೊತೆ ಸೆಣೆಸಾಡಲು ನಿಂತಿದೆ.
ಮೊದಲಿಗೆ ನಾಯಿ ಹಾವನ್ನು ಕಚ್ಚಿದರೆ ನಂತರ ಹಾವು ನಾಯಿಯನ್ನು ಕಚ್ಚಿದೆ. ಇದೇ ರೀತಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಪರಸ್ಪರ ಕಾದಾಟ ನಡೆಸಿದ ನಂತರ ಮೊದಲಿಗೆ ನಾಯಿ ನಿತ್ರಾಣಗೊಂಡು ನೆಲಕ್ಕೆ ಒರಗಿದರೆ ನಂತರ ತೀವ್ರ ಪ್ರಮಾಣದಲ್ಲಿ ಗಾಯಗೊಂಡಿದ್ದ ಹಾವು ಸಹ ಮೃತಪಟ್ಟಿದೆ. ಹಾವು ತನ್ನ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿ ಹೋರಾಟ ಮಾಡಿ ಜೀವ ಬಿಟ್ಟರೆ, ನಾಯಿ ಸಹ ಹಾವಿನ ಮೇಲೆ ಕಿಡಿ ಕಾರಿ ಪ್ರಾಣ ಬಿಟ್ಟಿದೆ. ಈ ಸಂ‘ರ್ದಲ್ಲಿ ನಾಯಿಯ ಮಾಲಿಕ ಗಾಬರಿಯಾದರೂ ಸಹ ಇವೆರಡರ ನಡುವಿನ ಸೆಣಸಾಟವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಸ್ನೇಹಿತರಿಗೆ ಕಳುಹಿಸಿದ್ದಾರೆ. ಇದು ಹೀಗೆ ಒಬ್ಬರಿಂದ ಒಬ್ಬರಿಗೆ ವಿಡಿಯೋ ಹೋಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ