ವಾಷಿಂಗ್ಟನ್‌: ಏರ್‌ಪೋರ್ಟ್‌ಗಳಿಗೆ ನವೀಕರಣ ಭಾಗ್ಯವಿಲ್ಲ!


Team Udayavani, Jun 11, 2020, 5:00 PM IST

ವಾಷಿಂಗ್ಟನ್‌: ಏರ್‌ಪೋರ್ಟ್‌ಗಳಿಗೆ ನವೀಕರಣ ಭಾಗ್ಯವಿಲ್ಲ!

ವಾಷಿಂಗ್ಟನ್‌: ಕೋವಿಡ್‌ನಿಂದಾಗಿ ವಿಮಾನಯಾನ ಸಂಸ್ಥೆಗಳು ಇನ್ನಿಲ್ಲದಂತೆ ನಷ್ಟ ಅನುಭವಿಸಿದ್ದು ಗೊತ್ತೇ ಇದೆ. ಇಷ್ಟು ಮಾತ್ರವಲ್ಲ ಜಗತ್ತಿನ ಪ್ರಮುಖ ವಿಮಾನ ನಿಲ್ದಾಣಗಳು ಈಗ ನವೀಕರಣವನ್ನೂ ಕಾಣದೆ ಇನ್ನಷ್ಟು ಮಂಕಾಗುವ ಸಾಧ್ಯತೆಯೂ ಇದೆ.

ಕೋವಿಡ್‌ ಸೋಂಕು ಹರಡುವ ಮುನ್ನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ರಿಪೇರಿ ಕಾಮಗಾರಿಗಳು, ಟರ್ಮಿನಲ್‌ ವಿಸ್ತರಣೆ, ಅನುಕೂಲಕರ ಒಳಾಂಗಣ ವಿಸ್ತರಣೆ ಇತ್ಯಾದಿಗಳಿಗೆ ಯೋಜಿಸಿದ್ದವು. ಆದರೆ ಕೋವಿಡ್‌ನಿಂದಾಗಿ ಪ್ರಯಾಣಿಕರ ಸಂಚಾರ ಸ್ಥಗಿತಗೊಂಡಿದ್ದರಿಂದ ವಿಮಾನ ನಿಲ್ದಾಣಗಳ ಪುನಶ್ಚೇತನಕ್ಕೆ ಗರಬಡಿದಿದೆ. ಅಲ್ಲದೇ ಸದ್ಯಕ್ಕೆ ಪರಿಸ್ಥಿತಿ ಸುಧಾರಣೆಯಾಗದಿದ್ದರೆ ದೊಡ್ಡ ಪ್ರಮಾಣದಲ್ಲಿ ಹಣ ವಿನಿಯೋಗಿಸುವುದು ಮತ್ತಷ್ಟು ನಷ್ಟಕ್ಕೆ ದಾರಿಯಾಗಬಹುದು ಎಂದು ಆತಂಕವಾಗಿದೆ.

ಅಮೆರಿದಲ್ಲೇ ಹಲವು ನಿಲ್ದಾಣಗಳ ಪುನಶ್ಚೇತನ ಕಾಮಗಾರಿಗಳ ಯೋಜನೆಯನ್ನು ನಿಲ್ಲಿಸಲಾಗಿದೆ. ಫ್ಲೋರಿಡಾದ ಓರ್ಲ್ಯಾಂಡೊ ನಿಲ್ದಾಣದಲ್ಲಿ ನಡೆಸಲುದ್ದೇಶಿಸಿದ ಟರ್ಮಿನಲ್‌ ರಿಪೇರಿ, ಸ್ಯಾನ್‌ಫ್ರಾನ್ಸಿಸ್ಕೋ ನಿಲ್ದಾಣದಲ್ಲಿ 7 ಸಾವಿರ ಕೋಟಿ ವೆಚ್ಚದಲ್ಲಿ ನಡೆಯಬೇಕಿದ್ದ ಕೆಲಸಗಳಿಗೆ ಗ್ರಹಣ ಬಡಿದಿದೆ. ಹಾಗೆಯೇ, ನ್ಯೂಜಿಲೆಂಡ್‌ನ‌ ಅಕ್ಲಾಂಡ್‌ ವಿಮಾನ ನಿಲ್ದಾಣ, ಮೆಕ್ಸಿಕೋದಲ್ಲಿನ ವಿಮಾನ ನಿಲ್ದಾಣ, ಸಿಡ್ನಿ ವಿಮಾನ ನಿಲ್ದಾಣ, ಜರ್ಮನಿಯ ಫ್ರಾಂಕ್‌ಫ‌ರ್ಟ್‌ ವಿಮಾನ ನಿಲ್ದಾಣದ ಕೆಲಸಗಳಿಗೂ ತಡೆ ಉಂಟಾಗಿದೆ.

ಸದ್ಯದ ಪರಿಸ್ಥಿತಿ ಪ್ರಕಾರ, ವಿಮಾನ ಯಾನ ಬೇಡಿಕೆ ಪಡೆಯಬೇಕಾದರೆ 2023ರವರೆಗೆ ಕಾಯಬೇಕಾಗಬಹುದು ಎಂದು ಹೇಳಲಾಗಿದೆ.
ಸಿಇಪಿಎ- ಸೆಂಟರ್‌ ಫಾರ್‌ ಏವಿಯೇಷನ್‌ ಪ್ರಕಾರ, 1.48 ಲಕ್ಷ ಕೋಟಿ ರೂ. ಗಳಿಗೆ ಮಿಕ್ಕಿ ಮೊತ್ತದ ಪುನಶ್ಚೇತನ ಕಾಮಗಾರಿಗಳು ಈ ವರ್ಷ ವಿಶ್ವದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಪೂರ್ಣಗೊಳ್ಳಬೇಕಿದೆ. ಆದರೆ ಇಷ್ಟೊಂದು ವೆಚ್ಚ ಮಾಡಿದ್ದು ಮತ್ತೆ ಗಳಿಸಲು ಸಾಧ್ಯವಾಗಬಹುದೇ ಎಂಬುದರ ಬಗ್ಗೆ ಅನಿಶ್ಚಿತತೆ ಕಾಡಿದೆ. ವಿಮಾನ ನಿಲ್ದಾಣ ಪುನಶ್ಚೇತನ ಕಾಮಗಾರಿ ಸುದೀರ್ಘ‌ ಅವಧಿಯದ್ದು. ಸೂಕ್ತ ರೀತಿಯ ಪ್ಲ್ರಾನಿಂಗ್‌, ಅದರ ಕೆಲಸಗಳು, ಅಂತಿಮ ಹಂತದ ಕೆಲಸಗಳಿಗೆ ಬಹಳಷ್ಟು ಸಮಯ ತಗಲುತ್ತದೆ. ಆದ್ದರಿಂದ ಕೋವಿಡ್‌ ಮುಗಿದು ಪರಿಸ್ಥಿತಿ ತಿಳಿಯಾಗಬಹುದು ಎಂಬ ಆಶಾವಾದವೂ ಇದೆ ಎಂದು ಏವಿಯೇಷನ್‌ ಅಧಿಕಾರಿಯೊಬ್ಬರು ಹೇಳಿತ್ತಾರೆ.

ಕೆಲವು ವಿಮಾನ ನಿಲ್ದಾಣಗಳು ಈಗ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ವಿಮಾನ ನಿಲ್ದಾಣ ಸಿಬಂದಿಯ ವೇತನ ನೀಡಲೂ ಅವುಗಳ ಬಳಿ ಹಣವಿಲ್ಲ. ಇನ್ನು ಬಾಡಿಗೆ, ನಿರ್ವಹಣೆಗೂ ಹಣ ಬರುತ್ತಿಲ್ಲ. ಪ್ರಯಾಣಿಕರ ಸಂಖ್ಯೆಯಲ್ಲಿ ಕಳೆದೆರಡು ತಿಂಗಳು ಶೇ.50ರಷ್ಟು ಕಡಿಮೆಯಾಗಿದ್ದು, ಭವಿಷ್ಯದಲ್ಲೂ ಕಡಿಮೆ ಇರಬಹುದು ಎಂದು ಹೇಳಲಾಗಿದೆ. ಅಲ್ಲದೇ ವಿಮಾನ ನಿಲ್ದಾಣಗಳ ಆದಾಯದಲ್ಲಿ ಶೇ.56ರಷ್ಟು ಕುಸಿತ ಕಂಡುಬಂದಿದೆ ಎಂದು ಅಂ.ರಾ. ಏರ್‌ಪೋರ್ಟ್‌ ಕೌನ್ಸಿಲ್‌ ಅಸೋಸಿಯೇಷನ್‌ ಹೇಳಿದೆ. ಮತ್ತೆ ವಿಮಾನ ಯಾನ ಶುರುವಾದರೆ ವಿಮಾನ ನಿಲ್ದಾಣಗಳು ಚೇತರಿಸಿಕೊಳ್ಳುತ್ತವೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಅದನ್ನು ನಿರೀಕ್ಷಿಸುವುದೂ ಕಷ್ಟವಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಪ್ರತಿ ಪ್ರಯಾಣಿಕನ ಟಿಕೆಟ್‌ನಿಂದ ಪಡೆಯುವ ವಿಮಾನ ನಿಲ್ದಾಣ ಫೀಸು, ಪಾರ್ಕಿಂಗ್‌ ಚಾರ್ಜು, ಬಾಡಿಗೆ ಪಡೆಯುವುದು ವಿಮಾನ ನಿಲ್ದಾಣಗಳ ಆದಾಯದ ಮೂಲ. ಕೆಲವೇ ಕೆಲವು ಪ್ರಯಾಣಿಕರು ಬಂದರೆ ವಿಮಾನ ನಿಲ್ದಾಣಗಳಿಗೆ ಪ್ರಯೋಜನವಿಲ್ಲ. ಅಲ್ಲಿ ನಿರಂತರ ಜನರ ಓಡಾಟವಿದ್ದಾಗಲೇ ಪ್ರಯೋಜನಕಾರಿ. ಸದ್ಯ ವಿಶ್ವದ ಅತಿ ದೊಡ್ಡ ವಿಮಾನ ನಿಲ್ದಾಣಗಳಲ್ಲೇ ವಿಮಾನ ಟ್ರಾಫಿಕ್‌ ಶೇ.90ರಷ್ಟು ಕುಸಿತ ಕಂಡಿದೆ. ಇದರಿಂದ ವಿಮಾನ ನಿಲ್ದಾಣಗಳ ಆದಾಯಕ್ಕೆ ಇನ್ನಿಲ್ಲದಂತೆ ಪೆಟ್ಟು ಬಿದ್ದಿದೆ. ಇದನ್ನು ಸರಿಪಡಿಸಲು ಬಹಳಷ್ಟು ಸಮಯ ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಲಿವೆ ಎಂದು ಹೇಳಲಾಗಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.