ಅವನತಿಯ ಅಂಚಿನಲ್ಲಿರುವ ನೇಕಾರ


Team Udayavani, Jan 6, 2022, 12:20 PM IST

13weavers

ದೋಟಿಹಾಳ: ಬಟ್ಟೆ ನೇಯುವ ನೇಕಾರನಿಗೆ, ಗೇಣುದ್ದ ಬಟ್ಟೆ ಇಲ್ಲ ಎಂಬ ಮಾತು ಇದೆ, ಈ ಮಾತು ಗ್ರಾಮದ ಕೈಮಗ್ಗದ ಪ್ರಸಿದ್ದ ಇಲಕಲ್ ಸೀರೆ ನೇಯುವ ನೇಕಾರರ ಸ್ಥಿತಿಯಾಗಿದೆ.

ಗ್ರಾಮದ ಕೈಮಗ್ಗ ನೇಕಾರ ಉತ್ಪಾದನಾ ಮತ್ತು ಮಾರಾಟ ಸಂಘದ ನೇಕಾರರ ಬದುಕು ಇಂದು ಮೂರಾಬಟ್ಟೆಯಾಗಿದೆ ಕಾರಣ ಸುಮಾರು ಹದಿನೈದು ವರ್ಷಗಳಿಂದ ಕೂಡಿಟ್ಟ ಮಿತವ್ಯಯ ನಿಧಿಯನ್ನು ಸಹ ವಾಪಸ್ಸು ಪಡೆಯಲು ನೇಕಾರಿಗೆ ಆಗುತ್ತಿಲ್ಲ. ಕಾರಣ ಸರ್ಕಾರ ನಾಲ್ಕೈದು ವರ್ಷಗಳ ಹಿಂದೆ ಮಾಡಿದ ಖಜಾನೆ ಇಲಾಖೆಯನ್ನು ಡಿಜಟಿಲಕರಣ ಮಾಡಿದ ನಂತರ ನೇಕಾರರ ಮಿತವ್ಯಯ ನಿಧಿ ಇನ್ನು ನೇಕಾರರಕೈ ಸೇರುತ್ತಿಲ್ಲ. ಮೂರ್ನಾಲ್ಕು ವರ್ಷದಿಂದ ನೇಕಾರರು ಮಿತವ್ಯಯ ನಿಧಿಗಾಗಿ ನೌಕರರು ಹಾಗೂ ಸಂಘದ ಆಡಳಿತ ಮಂಡಳಿಯವರು ಅಲೆದಾಡುವಂತಾಗಿದೆ. ಇದರ ಬಗ್ಗೆ ಸರಕಾರ ನೇಕಾರರ ನೆರವಿಗೆ ಬರಬೇಕೆಂದು ನೇಕಾರರು ಆಗ್ರಹಿಸಿದ್ದಾರೆ.

ಸುಮಾರು ಇಪ್ಪತ್ತು ಮೂವತ್ತು ವರ್ಷಗಳ ಒಂದು ಕಾಲವಿತ್ತು, ಕೈಮಗ್ಗದಲ್ಲಿ ನೇಯ್ದ ಇಲಕಲ್ ಸೀರೆಗಳಿಗೆ ಭಾರಿ ಬೇಡಿಕೆ ಇತ್ತು. ಆ ದಿನಗಳಲ್ಲಿ ಕೈಮಗ್ಗಗಳದೆ ಕಾರುಬಾರು ಆಗಿದ್ದರಿಂದ ಕರ್ನಾಟಕ ರಾಜ್ಯದ ಮಟ್ಟಿಗೆ ನೇಕಾರಿಕೆಯೂ ಸಹ ಜನರ ಪ್ರಮುಖ ಉದ್ಯೋಗವಾಗಿತ್ತು. ಆದರೆ ಕಾಲ ಬದಲಾದಂತೆ ಕೈಮಗ್ಗಗಳ ಬದಲಿ ಈಗ ಯಂತ್ರಗಳು ಆವರಿಸಿವೆ. ಬೆಲೆ ಹೆಚ್ಚಳದಿಂದಾಗಿ ಇಲಕಲ್ ಸೀರೆಗಳನ್ನು ಉಟ್ಟುಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದೆ. ಇಲಕಲ್ ಸೀರೆ ಈಗ ಕೇವಲ ಫ್ಯಾಶನ್ ಗೆ ಮಾತ್ರ ಸೀಮಿತವಾಗಿದೆ. ಇದರಿಂದಾಗಿ ಇಲಕಲ್ ಸೀರೆ ನೇಯುಯವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳದ ನೇಕಾರರ ಸಹಕಾರ ಸಂಘದಲ್ಲಿ ನೇಕಾರರ ಸಂಖ್ಯೆ ಕಡಿಮೆಯಾಗಿದೆ. 1955 ರಲ್ಲಿ ಸ್ಥಾಪನೆಯಾಗಿರುವ ದೋಟಿಹಾಳದ ನೇಕಾರರ ಸಹಕಾರ ಸಂಘದಲ್ಲಿ ಈ ಹಿಂದೆ 600 ಕ್ಕೂ ಅಧಿಕ ಜನ ನೇಕಾರರು ಇದ್ದರು. ಈ ಸಂಘಕ್ಕೆ 1993-94 ರಲ್ಲಿ ಕೇಂದ್ರ ಸರಕಾರದಿಂದ ರಾಷ್ಟ್ರೀಯ ಪುರಸ್ಕಾರ ಸಿಕ್ಕಿತ್ತು. ರಾಜ್ಯ ಸರಕಾರವು ಸಹ ಪುರಸ್ಕಾರ ನೀಡಿತ್ತು. ಆದರೆ ಈಗ ನೇಕಾರರಿಗೆ ಪ್ರೋತ್ಸಾಹವಿಲ್ಲದೆ ಇರುವದರಿಂದ ದೋಟಿಹಾಳದಲ್ಲಿ ನೇಕಾರರ ಸಂಖ್ಯೆ ಕೇವಲ 60 ಕ್ಕೆ ಇಳಿಕೆಯಾಗಿದೆ.

ಒಂದು ಸೀರೆ ನೇಯಲು ನೇಕಾರನ ಕುಟುಂಬದಲ್ಲಿ ಎಲ್ಲರು ಕೆಲಸ ಮಾಡಿದರೆ ಎರಡು ದಿನ ಬೇಕಾಗುತ್ತದೆ. ಒಂದು ಸೀರೆಗೆ 400-500 ರೂಪಾಯಿ ಮಾತ್ರ ದರ ಸಿಗುತ್ತಿದೆ. ಈ ಮಧ್ಯೆ ಇತ್ತೀಚಿಗೆ ಸೀರೆ ತಯಾರಿಕೆಯ ಕಚ್ಚಾ ಸಾಮಗ್ರಿಗಳ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಏರಿಕೆಯಾದ ಕಚ್ಚಾ ಸಾಮಗ್ರಿಯಿಂದ ಸೀರೆ ತಯಾರಿಸಿ ಕೊಟ್ಟರೂ ಸರಿಯಾದ ದರ ಸಿಗುತ್ತಿಲ್ಲ. ಇದರಿಂದಾಗಿ ನೇಕಾರ ನೇಯ್ಗೆಯ ಉದ್ಯೋಗ ಬಿಟ್ಟು ಬೇರೆ ಉದ್ಯೋಗದತ್ತ ಹೋಗಿದ್ದಾನೆ ಇದರಿಂದಾಗಿ ಬರುವ ದಿನಗಳಲ್ಲಿ ಕೈಮಗ್ಗ ನೇಕಾರರ ಸಂಪೂರ್ಣವಾಗಿ ಇಲ್ಲವಾಗುವ ಸಾಧ್ಯತೆ ಇದೆ.

ಕೊಪ್ಪಳ ಜಿಲ್ಲೆಯಲ್ಲಿ ಈ ಮೊದಲು ನೇಕಾರಿಕೆ ಮಾಡುವ ಹಲವಾರು ಕುಟುಂಬಗಳಿದ್ದವು. ಹಿಂದೆ ನೇಕಾರರ 11 ಕೈಮಗ್ಗ ನೇಕಾರರ ಸಹಕಾರ ಸಂಘಗಳಿದ್ದವು. ಈಗ ಉಳಿದಿದ್ದು ಕೇವಲ 5. ಅದರಲ್ಲಿ ಈಗ ಚಾಲ್ತಿಯಲ್ಲಿರುವವು ಕೇವಲ 3. ಇನ್ನೂ ನೇಕಾರರು ತಾವು ನೇಯ್ದ ಸೀರೆಯನ್ನು ಬೇರೆ ವ್ಯಾಪಾರಿಗಳಿಗೂ ಮಾರಾಟ ಮಾಡುತ್ತಾರೆ. ಅಲ್ಲಿಯೂ ಸರಿಯಾದ ದರ ಸಿಗುತ್ತಿಲ್ಲ. ಸಹಕಾರ ಸಂಘಗಳಲ್ಲಿ ಮಾರಾಟ ಮಾಡಿದರೆ ಸರಕಾರದಿಂದ ಶೇ 20 ರಿಯಾಯಿತಿ ಹಣವು ನೇಕಾರನಿಗೆ ಸಿಗುತ್ತದೆ. ರಿಯಾಯಿತಿಯನ್ನು ಹೆಚ್ಚಿಸಬೇಕು. ಕಚ್ಚಾ ಸಾಮಗ್ರಿ ಖರೀದಿಸಲು ಸರಕಾರ ಸಹಾಯ ಮಾಡಬೇಕು. ಇಲ್ಲವೇ ಇನ್ನಷ್ಟು ಉತ್ತೇಜನ ನೀಡಿದರೆ ಮಾತ್ರ ನೇಕಾರ ಉಳಿಯಲು ಸಾಧ್ಯವೆಂದು ನೇಕಾರರು ಹೇಳಿದ್ದಾರೆ.

ಈ ಮಧ್ಯೆ ನೇಕಾರರ ಭದ್ರತೆಗಾಗಿ ಮಿತವ್ಯಯ ನಿಧಿಯನ್ನು ಸಹಕಾರ ಸಂಘಗಳು ನೇಕಾರರಿಂದ ಪಡೆದು ಜವಳಿ ಇಲಾಖೆಯ ಖಜಾನೆಗೆ ಜಮಾ ಮಾಡುತ್ತಾರೆ. ಪ್ರತಿ ಸೀರೆಗೆ 28 ರೂಪಾಯಿ. 28 ರೂಪಾಯಿ ಇಲಾಖೆಯಿಂದ ನೇಕಾರರ ಖಾತೆಗೆ ಜಮಾ ಆಗುತ್ತದೆ. ಈ ಹಣವನ್ನು 15 ವರ್ಷಗಳ ನಂತರ ನೇಕಾರ ತನಗೆ ಅವಶ್ಯವಿರುವಾಗ ಮರಳಿ ಪಡೆಯಬಹುದು. ಆದರೆ ಕಳೆದ ಮೂರು ವರ್ಷಗಳಿಂದ ಮಿತವ್ಯಯ ನಿಧಿಯನ್ನು ನೇಕಾರ ತೆಗೆದುಕೊಳ್ಳಲು ಆಗುತ್ತಿಲ್ಲ. ಕಾರಣ ಇಲಾಖೆಯಿಂದ ಖಜಾನೆ 1 ರಲ್ಲಿದ್ದ ಹಣವನ್ನು ಖಜಾನೆ 2 ಗೆ ವರ್ಗಾಯಿಸಬೇಕು. ಆದರೆ ಇದು ವಿಳಂಭವಾಗಿರುವುದರಿಂದ ಇಡೀ ರಾಜ್ಯದಲ್ಲಿಯೇ ನೇಕಾರರ ಪಾವತಿಸಿದ ಮಿತವ್ಯಯ ಹಣವನ್ನು ವಾಪಸ್ಸು ಪಡೆಯಲು ಆಗುವುದಿಲ್ಲ. ಕಷ್ಟ ಕಾಲದಲ್ಲಿ ಸಹಾಯವಾಗುವ ಮಿತವ್ಯಯ ಹಣ ಪಡೆಯಲು ನೇಕಾರರು ಪರದಾಡಬೇಕಾಗಿದೆ. ಕೆ1 ನಿಂದ ಕೆ2 ಗೆ ನೇಕಾರರ ಮಿತವ್ಯಯ ಹಣ ವರ್ಗಾವಣೆಗೆ ಇಲಾಖೆಯು ಇನ್ನೂ ಹಲವಾರು ಫಾರ್ಮೆಟ್ ಗಳನ್ನು ತಯಾರಿಸಿದ್ದರಿಂದ ಈಗ ಹಣ ಪಡೆಯಲು ಆಗುತ್ತಿಲ್ಲ. ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ನೇಕಾರರು ಆಗ್ರಹಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ನೇಕಾರರಿಂದ ಸುಮಾರು 21 ಲಕ್ಷ ರೂಪಾಯಿಯು ಮಿತವ್ಯಯ ಹಣ ಖಜಾನೆಯಲ್ಲಿದೆ, ಅದು ನೇಕಾರರ ಕೈಗೆ ಸೇರುತ್ತಿಲ್ಲ. ಈ ಕುರಿತ ಸರಕಾರ ಬೇಗನೆ ಕ್ರಮ ಕೈಗೊಳ್ಳಬೇಕು ನೇಕಾರರ ನೆರವಿಗೆ ಸರಕಾರ ಬರಬೇಕೆಂದು ಆಗ್ರಹಿಸಿದ್ದಾರೆ.

– ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

Parameshwar

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.