ವಿಶ್ವಕಪ್ ವೈಭವ: ಕೆರಿಬಿಯನ್ನರಿಗೆ ಮೊದಲ ಕಪ್‌


Team Udayavani, May 17, 2019, 9:25 AM IST

winers-1975

ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಕ್ರಾಂತಿಯ ಹೆಜ್ಜೆ ಮೂಡಿದ್ದು 1973ರ ಜುಲೈ 25ರಂದು. ಲಂಡನ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಅಧಿವೇಶನದಲ್ಲಿ mಇಂಗ್ಲೆಂಡಿನ “ಟೆಸ್ಟ್‌ ಆ್ಯಂಡ್‌ ಕೌಂಟಿ ಕ್ರಿಕೆಟ್‌ ಬೋರ್ಡ್‌’ ಮಹತ್ವದ ಪ್ರಸ್ತಾವವೊಂದನ್ನು ಮುಂದಿಟ್ಟಿತು. ಟೆಸ್ಟ್‌ ಮಾನ್ಯತೆ ಪಡೆದಿರುವ ರಾಷ್ಟ್ರಗಳ ನಡುವೆ ಏಕದಿನ ಪಂದ್ಯಾವಳಿಯೊಂದನ್ನು ಆಯೋಜಿಸಬಾರದೇಕೆ ಎಂಬ ಈ ಪ್ರಸ್ತಾವ ಕ್ರಿಕೆಟ್‌ ರಾಷ್ಟ್ರಗಳಲ್ಲಿ ಭಾರೀ ಸಂಚಲನ ಮೂಡಿಸಿತು. ಐಸಿಸಿ ಇದಕ್ಕೆ ಕೂಡಲೇ ಸಮ್ಮತಿಸಿತು.

ಆದರೆ ಪಂದ್ಯಾವಳಿಯನ್ನು ಯಾವ ರೀತಿ ನಡೆಸಬೇಕೆಂಬ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಟೆಸ್ಟ್‌ ಮಾನ್ಯತೆ ಪಡೆದಿರುವ 6 ದೇಶಗಳ ಜತೆಗೆ ಐಸಿಸಿ ಸದಸ್ಯತ್ವ ಹೊಂದಿರುವ 2 ರಾಷ್ಟ್ರಗಳನ್ನು ಸೇರಿಸಿ ಕೂಟವನ್ನು ನಡೆಸಲು ನಿರ್ಧರಿಸಲಾಯಿತು. ಹೆಚ್ಚುವರಿ ತಂಡಗಳ ಅದೃಷ್ಟ ಶ್ರೀಲಂಕಾ ಮತ್ತು ಪೂರ್ವ ಆಫ್ರಿಕಾ ಪಾಲಾಯಿತು. ಕ್ರಿಕೆಟ್‌ ಜನಕರ ನಾಡಾದ ಇಂಗ್ಲೆಂಡಿನಲ್ಲೇ ಇದನ್ನು ನಡೆಸಲು ಯಾರ ವಿರೋಧವೂ ವ್ಯಕ್ತವಾಗಲಿಲ್ಲ. “ಜಿಲೆಟ್‌ ಕಪ್‌’ ಮಾದರಿಯಲ್ಲಿ ತಲಾ 60 ಓವರ್‌ಗಳ ಪಂದ್ಯಗಳನ್ನು ನಡೆಸಲು ತೀರ್ಮಾನಿಸಲಾಯಿತು.

ಆಗಲೇ 1972ರಲ್ಲಿ ಇಂಗ್ಲೆಂಡ್‌-ಆಸ್ಟ್ರೇಲಿಯ ನಡುವಿನ 3 ಪಂದ್ಯಗಳ ಏಕದಿನ ಸರಣಿಗೆ “ಪ್ರುಡೆನ್ಶಿಯಲ್‌ ಕಂಪೆನಿ’ ಪ್ರಾಯೋಜನೆ ಮಾಡಿದ್ದರಿಂದ ವಿಶ್ವಕಪ್‌ ಸ್ಪಾನ್ಸರ್‌ ಕೂಡ ಈ ಕಂಪೆನಿ ಪಾಲಾಯಿತು.

ಬಹುಮಾನ 4 ಸಾವಿರ ಪೌಂಡ್‌
1975ರ ಜೂನ್‌ನಲ್ಲಿ 8 ತಂಡಗಳ ನಡುವೆ ವಿಶ್ವಕಪ್‌ ಹಣಾಹಣಿ ಮೊದಲ್ಗೊಂಡಿತು. 4 ತಂಡಗಳನ್ನು 2 ವಿಭಾಗಗಳನ್ನಾಗಿ ವಿಂಗಡಿಸಲಾಯಿತು. ಒಂದೇ ಸುತ್ತಿನ ಸ್ಪರ್ಧೆ ಇದಾಗಿತ್ತು. “ಎ’ ವಿಭಾಗದಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ಮೊದಲೆರಡು ಸ್ಥಾನ ಪಡೆದು ಸೆಮಿಫೈನಲ್‌ ಪ್ರವೇಶಿಸಿದವು. ಮೂರರಲ್ಲಿ ಒಂದು ಪಂದ್ಯ ಗೆದ್ದ ಭಾರತ ಮತ್ತು ಮೂರನ್ನೂ ಸೋತ ಪೂರ್ವ ಆಫ್ರಿಕಾ ಹೊರಬಿದ್ದವು. “ಬಿ’ ವಿಭಾಗದಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಆಸ್ಟ್ರೇಲಿಯ ಸೆಮಿಗೆ ಲಗ್ಗೆಯಿಟ್ಟವು. ಪಾಕಿಸ್ಥಾನ, ಶ್ರೀಲಂಕಾ ನಿರ್ಗಮಿಸಿದವು. ಸಣ್ಣ ಮೊತ್ತದ ಮೊದಲ ಸೆಮಿ ಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡನ್ನು ಆಸ್ಟ್ರೇಲಿಯ ಪರಾಭವಗೊಳಿಸಿತು. ಇನ್ನೊಂದರಲ್ಲಿ ವಿಂಡೀಸ್‌ ಕಿವೀಸ್‌ಗೆ ಆಘಾತವಿಕ್ಕಿತು. ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು 17 ರನ್ನುಗಳಿಂದ ಕೆಡವಿದ ವೆಸ್ಟ್‌ ಇಂಡೀಸ್‌ ಚಾಂಪಿಯನ್‌ ಆಗಿ ಮೂಡಿಬಂತು. ಅಂದು ಚಾಂಪಿಯನ್‌ ತಂಡಕ್ಕೆ ಲಭಿಸಿದ ಬಹುಮಾನದ ಮೊತ್ತ ಕೇವಲ 4 ಸಾವಿರ ಪೌಂಡ್‌!


ಸ್ಕೋರ್ ಕಾರ್ಡ್; 21 ಜೂನ್‌, 1975

ವೆಸ್ಟ್‌ ಇಂಡೀಸ್‌
ರಾಯ್‌ ಫ್ರೆಡ್ರಿಕ್ಸ್‌ ಹಿಟ್‌ ವಿಕೆಟ್‌ ಲಿಲ್ಲಿ 7
ಗಾರ್ಡನ್‌ ಗ್ರೀನಿಜ್‌ ಸಿ ಮಾರ್ಷ್‌ ಬಿ ಥಾಮ್ಸನ್‌ 13
ಅಲ್ವಿನ್‌ ಕಾಳೀಚರಣ್‌ ಸಿ ಮಾರ್ಷ್‌ ಬಿ ಗಿಲ್ಮೋರ್‌ 12
ರೋಹನ್‌ ಕನ್ಹಾಯ್‌ ಬಿ ಗಿಲ್ಮೋರ್‌ 55
ಕ್ಲೈವ್‌ ಲಾಯ್ಡ ಸಿ ಮಾರ್ಷ್‌ ಬಿ ಗಿಲ್ಮೋರ್‌ 102
ವಿವಿಯನ್‌ ರಿಚರ್ಡ್ಸ್‌ ಬಿ ಗಿಲ್ಮೋರ್‌ 5
ಕೀತ್‌ ಬಾಯ್ಸ ಸಿ ಜಿ.ಚಾಪೆಲ್‌ ಬಿ ಥಾಮ್ಸನ್‌ 34
ಬೆಮಾರ್ಡ್‌ ಜೂಲಿಯನ್‌ ಔಟಾಗದೆ 26
ಡೆರಿಕ್‌ ಮರ್ರೆ ಸಿ ಮತ್ತು ಬಿ ಗಿಲ್ಮೋರ್‌ 14
ವಾನ್‌ಬರ್ನ್ ಹೋಲ್ಡರ್‌ ಔಟಾಗದೆ 6
ಇತರ 17
ಒಟ್ಟು (60 ಓವರ್‌ಗಳಲ್ಲಿ 8 ವಿಕೆಟಿಗೆ) 291
ವಿಕೆಟ್‌ ಪತನ: 1-12, 2-27, 3-50, 4-199, 5-206, 6-209, 7-261, 8-285.
ಬೌಲಿಂಗ್‌:
ಡೆನ್ನಿಸ್‌ ಲಿಲ್ಲಿ 12-1-55-1
ಗ್ಯಾರಿ ಗಿಲ್ಮೋರ್‌ 12-2-48-5
ಜೆಫ್ ಥಾಮ್ಸನ್‌ 12-1-44-2
ಮ್ಯಾಕ್ಸ್‌ ವಾಕರ್‌ 12-1-71-0
ಗ್ರೆಗ್‌ ಚಾಪೆಲ್‌ 7-0-33-0
ಡಗ್‌ ವಾಲ್ಟರ್ 5-0-23-0

ಆಸ್ಟ್ರೇಲಿಯ
ಅಲನ್‌ ಟರ್ನರ್‌ ರನೌಟ್‌ 40
ರಿಕ್‌ ಮೆಕಾಸ್ಕರ್‌ ಸಿ ಕಾಳೀಚರಣ್‌ ಬಿ ಬಾಯ್ಸ 7
ಇಯಾನ್‌ ಚಾಪೆಲ್‌ ರನೌಟ್‌ 62
ಗ್ರೆಗ್‌ ಚಾಪೆಲ್‌ ರನೌಟ್‌ 15
ಡಗ್‌ ವಾಲ್ಟರ್ ಬಿ ಲಾಯ್ಡ 35
ರಾಡ್ನಿ ಮಾರ್ಷ್‌ ಬಿ ಬಾಯ್ಸ 11
ರಾಸ್‌ ಎಡ್ವರ್ಡ್ಸ್‌ ಸಿ ಫ್ರೆಡ್ರಿಕ್ಸ್‌ ಬಿ ಬಾಯ್ಸ 28
ಗ್ಯಾರಿ ಗಿಲ್ಮೋರ್‌ ಸಿ ರೋಹನ್‌ ಬಿ ಬಾಯ್ಸ 14
ಮ್ಯಾಕ್ಸ್‌ ವಾಕರ್‌ ರನೌಟ್‌ 7
ಜೆಫ್ ಥಾಮ್ಸನ್‌ ರನೌಟ್‌ 21
ಡೆನ್ನಿಸ್‌ ಲಿಲ್ಲಿ ಔಟಾಗದೆ 16
ಇತರ 18
ಒಟ್ಟು (58.4 ಓವರ್‌ಗಳಲ್ಲಿ ಆಲೌಟ್‌) 274
ವಿಕೆಟ್‌ ಪತನ: 1-25, 2-81, 3-115, 4-162, 5-170, 6-195, 7-221, 8-231, 9-233.
ಬೌಲಿಂಗ್‌: ಬೆಮಾರ್ಡ್‌ ಜೂಲಿಯನ್‌ 12-0-58-0
ಆ್ಯಂಡಿ ರಾಬರ್ಟ್ಸ್ 11-1-45-0
ಕೀತ್‌ ಬಾಯ್ಸ 12-0-50-4
ವಾನ್‌ಬರ್ನ್ ಹೋಲ್ಡರ್‌ 11.4-1-65-0
ಕ್ಲೈವ್‌ ಲಾಯ್ಡ 12-1-38-1

ಪಂದ್ಯಶ್ರೇಷ್ಠ: ಕ್ಲೈವ್‌ ಲಾಯ್ಡ

ಟಾಪ್ ನ್ಯೂಸ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.