ಗಾಂಧೀ ಟೋಪಿಗೆ ಆ ಹೆಸರೇಕೆ…


Team Udayavani, Jun 30, 2020, 5:00 AM IST

fredom politi

1940-70ರ ದಶಕಗಳಲ್ಲಿ ಭಾರತದ ರಾಜಕಾರಣಿಗಳಲ್ಲಿ ಎದ್ದು ಕಾಣುತ್ತಿದ್ದ ಒಂದು ಸಾಮ್ಯ ಎಂದರೆ ಅವರೆಲ್ಲರ ತಲೆಯಲ್ಲೂ ಗಾಂಧೀ ಟೋಪಿ ರಾರಾಜಿಸುತ್ತಿತ್ತು- ಎಂಬುದು. ಆಗ ಏನು ಈಗಲೂ, ರಾಜಕಾರಣಿಗಳು ತಾವು ಗಾಂಧೀವಾದಿಗಳು ಎಂದು ತೋರಿಸಿಕೊಳ್ಳಬೇಕಾದಾಗೆಲ್ಲ ಟೋಪಿ ಧರಿಸುತ್ತಾರೆ. ಸ್ವಾರಸ್ಯವೆಂದರೆ, ಗಾಂಧಿಯ ಹೆಸರಲ್ಲಿರುವ ಈ ಟೋಪಿಯನ್ನು ಸ್ವತಃ ಗಾಂಧಿ ಧರಿಸಿದ್ದನ್ನು ಯಾರೂ ನೋಡಿಲ್ಲ!

ಹಾಗಿದ್ದರೂ ಗಾಂಧಿ ಟೋಪಿ ಎಂಬ  ಹೆಸರೇ ನಿಂತಿರುವುದು ಏಕೆ? ಇದರ ಹಿಂದೊಂದು ಕಥೆ ಇದೆ. 1919ರಲ್ಲಿ ಗಾಂಧೀಜಿ, ಉತ್ತರಪ್ರದೇಶದ ರಾಮ್‌ಪುರ ಎಂಬ ಸಂಸ್ಥಾನದ ಸಯ್ಯದ್‌ ಹಮೀದ್‌ ಅಲಿ ಖಾನ್‌ ಬಹದ್ದೂರ್‌ ಎಂಬ ನವಾಬನನ್ನು ಭೇಟಿಯಾಗಲು ಹೋದರು. ನವಾಬನನ್ನು ಭೇಟಿಯಾಗುವ ಯಾರೇ ಆಗಲಿ, ತಲೆಯ ಮೇಲೊಂದು ವಸ್ತ್ರವನ್ನು ಕಟ್ಟಿಕೊಳ್ಳುವು ದು ಕಡ್ಡಾಯವಾಗಿತ್ತು. ಗಾಂಧಿಯ ತಲೆಯ ಮೇಲೊಂದು ವಸ್ತ್ರದ ತುಣುಕನ್ನು ಇಡಬೇಕೆಂದು ಅವರ ಅನುಯಾಯಿಗಳು ಪೇಟೆಯೆಲ್ಲ  ಟೊಪ್ಪಿಗೆಗಾಗಿ ಸುತ್ತಾಡಿದರು.

ಆದರೆ ಯಾವುದೂ ಅವರಿಗೆ ಇಷ್ಟವಾಗಲಿಲ್ಲ. ಆಗ, ಖೀಲಾಫ‌ತ್‌ ಚಳವಳಿಯ ನಾಯಕರಾಗಿ ಪ್ರಸಿದ್ಧ ರಾದ ಮೊಹಮ್ಮದ್‌ ಅಲಿ ಮತ್ತು ಶೌಕತ್‌ ಅಲಿ ಯವರ ತಾಯಿ ಅಬಾದಿ ಬೇಗಮ್,  ತಾನೇ ಒಂದು ಟೊಪ್ಪಿಯನ್ನು ಹೊಲಿದುಕೊಟ್ಟರು. ಅದನ್ನು ಧರಿಸಿ ಗಾಂಧೀಜಿ ನವಾಬನನ್ನು ಭೇಟಿಯಾದರು. ಇದೇ ಗಾಂಧೀಟೋಪಿ ಹುಟ್ಟಿದ ಬಗೆಯೆಂದು, ಈ ಕಥೆ ಹಲವು ಕೃತಿಗಳಲ್ಲಿ ಪ್ರಕಟವಾಗಿದೆ. ಆದರೆ ಇದಕ್ಕೂ ಒಂದು ವರ್ಷ ಮೊದಲೇ  ಗಾಂಧಿಯವರು ಟೋಪಿ ಧರಿಸಲು ತೊಡಗಿದ್ದರು ಎಂದು ಹೇಳುತ್ತವೆ ಕೆಲವು ಆಕರಗಳು.

1918ರಲ್ಲಿ ಗಾಂಧೀಜಿ ಗುಜರಾತ್‌ನಲ್ಲಿದ್ದಾಗ ಉದ್ದದ ದೋತರ, ಪಾಣಿಪಂಚೆ, ತಲೆಗೆ ಕಾಠೇವಾಡಿ ಪಗಡಿ ಧರಿಸುತ್ತಿದ್ದರು. ಪಗಡಿ ಗುಜರಾತಿಗಳ  ನಿತ್ಯದಿರಿಸು. ಪಗಡಿ ಧರಿಸುತ್ತಿದ್ದ ಗಾಂಧೀಜಿಯ ಚಿತ್ರಗಳು ಬಹುಸಂಖ್ಯೆಯಲ್ಲಿ ಸಿಗುತ್ತವೆ. ಅದೊಂದು ದಿನ ಅಹಮದಾಬಾದ್‌ನಲ್ಲಿ ಬಟ್ಟೆಯ ಗಿರಣಿಗಳಲ್ಲಿ ಕಾರ್ಮಿಕರಿಗೂ, ಮಾಲಿಕರಿಗೂ ಜಗಳ ಹತ್ತಿತು. ಕಾರ್ಮಿಕರು ಹರತಾಳ  ಶುರುಹಚ್ಚಿಕೊಂಡರು. ಪ್ರತಿಯಾಗಿ ಮಾಲೀಕರು, ಗಿರಣಿಗಳನ್ನೇ ಅನಿರ್ದಿಷ್ಟಾವಧಿಗೆ ಮುಚ್ಚಿಬಿಟ್ಟರು. ಕಾರ್ಮಿಕರ ವೇತನ ನಿಂತಿತು. ಅವರ ಪರಿಸ್ಥಿತಿ ನಿಜಕ್ಕೂ ಗಂಭೀರವಾಯಿತು.

ಹೊಟ್ಟೆಬಟ್ಟೆಗೆ ಪರದಾಡಬೇಕಾದ ಸ್ಥಿತಿ ಬಂತು. ಗಿರಣಿ ಕಾರ್ಮಿಕರ ಯೋಗಕ್ಷೇಮ ನೋಡಿಕೊಳ್ಳುವ ಕೆಲಸವನ್ನು ಗಾಂಧೀಜಿ ವಹಿಸಿಕೊಂಡರು. ಅದೊಂದು ದಿನ ಕಾರ್ಮಿಕರಿಗೆ ಬೇಕಿದ್ದ ಎಲ್ಲ ಅಗತ್ಯ ವಸ್ತುಗಳನ್ನು ಒದಗಿಸಿಕೊಟ್ಟು, ಸಾಬರ್‌ಮತಿ ಆಶ್ರಮಕ್ಕೆ ಮರಳುತ್ತಿದ್ದಾಗ ಗಾಂಧೀಜಿಗೆ  ಒಂದು ಯೋಚನೆ ಬಂತು. ನನ್ನ ಒಂದು ಪಗಡಿಯಿಂದಲೇ ಹತ್ತಾರು ಮಂದಿ ತಲೆ ಮುಚ್ಚಿಕೊಳ್ಳುವುದು ಸಾಧ್ಯವಿರುವಾಗ, ನಾನ್ಯಾಕೆ ಅಷ್ಟೊಂದು ಬಟ್ಟೆ ಬಳಸಬೇಕು?ಹೀಗೆ ಯೋಚಿಸಿದ ಅವರು, ತಕ್ಷಣ ತನ್ನ ಯೋಚನೆಯನ್ನು  ಕಾರ್ಯರೂಪಕ್ಕಿಳಿಸಿದರು. ಪಗಡಿ ಕಳಚಿದರು.

ಅದರಿಂದ ಟೋಪಿ ತಯಾರಿಸಿ ಹಂಚಿದರು. ಸ್ವತಃ ತಾನೇ ಅಂಥದೊಂದು ಟೋಪಿ ಧರಿಸಿದರು. ಗಾಂಧಿ ರೂಪಿಸಿದ ಟೋಪಿ, ಕ್ರಮೇಣ ಕಾರ್ಮಿಕರ ಸಮುದಾಯ ದಲ್ಲಿ ಜನಪ್ರಿಯವಾಯಿತು.  ಹರತಾಳ ನಡೆಸುತ್ತಿದ್ದವರ ಸಂಕೇತವಾಯಿತದು. ಟೋ ಪಿಯ ಜನಪ್ರಿಯತೆ ಎಷ್ಟು ಹೆಚ್ಚಿತೆಂದರೆ, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದವರೆಲ್ಲರೂ ಅದನ್ನು ಪರಂಗಿಗಳ ವಿರುದ್ಧ ತಮ್ಮ ಪ್ರತಿಭ ಟನೆಯ ಸಂಕೇತ ಎಂಬಂತೆ  ಬಳಸತೊಡಗಿದರು. ಬ್ರಿಟಿಷ್‌  ಸರಕಾರ 1920- 21ರ ಅವಧಿಯಲ್ಲಿ ಗಾಂಧೀಟೋಪಿಯನ್ನು ನಿಷೇಧಿಸುವ ಬಗ್ಗೆಯೂ ಯೋಚಿಸಬೇಕಾಯಿತು!

ಗಾಂಧಿಟೋಪಿ ಮುಂದೆ ಭಾರತೀಯತೆಯ ಸಂಕೇತವಾಗಿ ರಾಷ್ಟ್ರಾದ್ಯಂತ ಹರಡಿದರೂ, ಹಲವು ದಶಕಗಳವ ರೆಗೆ ತನ್ನ  ಜನಪ್ರಿಯತೆ ಕಾಯ್ದುಕೊಂಡರೂ, ಸ್ವತಃ ಗಾಂಧೀಜಿ ಅದನ್ನು ಬಳಸಿದ್ದು ಹೆಚ್ಚೆಂದರೆ ಮೂರು ವರ್ಷ (1918-21) ಮಾತ್ರವೇ!

* ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.