ಸ್ಕೋರ್‌ ಎಷ್ಟಾಯ್ತು?


Team Udayavani, May 25, 2020, 5:27 AM IST

score-yesht

ಹೆಚ್ಚಿನ ಗ್ರಾಹಕರು, ಕ್ರೆಡಿಟ್‌ ಸ್ಕೋರ್‌ ಕಡೆಗೆ ಗಮನವನ್ನೇ ನೀಡುವುದಿಲ್ಲ. ಕ್ರೆಡಿಟ್‌ ಸ್ಕೋರ್‌ ನಿರ್ಲಕ್ಷ್ಯದಿಂದ ಎದುರಾಗುವ ಸಮಸ್ಯೆಗಳನ್ನು ಇಲ್ಲಿ ನೀಡಲಾಗಿದೆ. 

ಬ್ಯಾಂಕ್‌ ಗ್ರಾಹಕನೊಬ್ಬನ, ಸಾಲ ತೀರಿಸುವ ಸಾಮರ್ಥ್ಯ ಅಳೆಯುವ ಮಾನದಂಡವೇ “ಕ್ರೆಡಿಟ್‌ ಸ್ಕೋರ್‌’. ಅದನ್ನು “ಸಿಬಿಲ್‌ ಸ್ಕೋರ್‌’ ಎಂದೂ ಕರೆಯಲಾಗುತ್ತದೆ. ಗ್ರಾಹಕನ, ಹಿಂದಿನ 6 ತಿಂಗಳ ಬ್ಯಾಂಕ್‌ ಚಟುವಟಿಕೆಗಳು, ಕ್ರೆಡಿಟ್‌  ಕಾರ್ಡ್‌ ಅರ್ಜಿಗಳು, ಹಳೆಯ ಸಾಲದ ಕಂತು ಕಟ್ಟಿದ ದಿನಾಂಕಗಳು ಸೇರಿದಂತೆ, ಹಲವು ಸಂಗತಿಗಳನ್ನು ಆಧರಿಸಿ, ಕ್ರೆಡಿಟ್‌ ಸ್ಕೋರ್‌ ನಿಗದಿಯಾಗುತ್ತದೆ. ಅದನ್ನು ಲೆಕ್ಕ ಹಾಕಲು, ಖಾಸಗಿ ಥರ್ಡ್‌ ಪಾರ್ಟಿ ಸಂಸ್ಥೆಗಳೇ ಇವೆ.

ಬ್ಯಾಂಕ್‌ಗಳು    ಇವುಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತವೆ. ಈ ಥರ್ಡ್‌ ಪಾರ್ಟಿ ಸಂಸ್ಥೆಗಳು, ಬ್ಯೂರೋಗಳು, ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ, ಬ್ಯಾಂಕ್‌ ಗ್ರಾಹಕರ ಕ್ರೆಡಿಟ್‌ ಸ್ಕೋರನ್ನು ಲೆಕ್ಕ ಹಾಕುತ್ತವೆ. ನಂತರ, ಆ  ಮಾಹಿತಿಯನ್ನು ಬ್ಯಾಂಕ್‌ಗೆ ನೀಡುತ್ತವೆ. ಸಾಲ ನೀಡುವ ಸಮಯದಲ್ಲಿ, ಬ್ಯಾಂಕು ಈ ಕ್ರೆಡಿಟ್‌ ರೇಟನ್ನು ಪರಿಶೀಲಿಸಿ, ಅದರ ಆಧಾರದಲ್ಲಿ ಸಾಲ ಸ್ಯಾಂಕ್ಷನ್‌ ಮಾಡುತ್ತದೆ. 740 ಕ್ರೆಡಿಟ್‌ ಸ್ಕೋರ್‌ ಪರೀಕ್ಷೆಯ ಡಿಸ್ಟಿಂಕ್ಷನ್ನಿಗೆ ಸಮ. ಅದರಿಂದ  ಬಹುತೇಕ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು.

ಅದೇ ರೀತಿ ಯಾವನೇ ವ್ಯಕ್ತಿ ಪಡೆಯಬಹುದಾದ ಗರಿಷ್ಟ ಕ್ರೆಡಿಟ್‌ ಸ್ಕೋರ್‌ 850. ಹೆಚ್ಚಿನ ಗ್ರಾಹಕರು, ಕ್ರೆಡಿಟ್‌ ಸ್ಕೋರ್‌ ಕಡೆಗೆ ಗಮನವನ್ನೇ ನೀಡುವುದಿಲ್ಲ. ಕ್ರೆಡಿಟ್‌ ಸ್ಕೋರ್‌  ನಿರ್ಲಕ್ಷ್ಯದಿಂದ ಎದುರಾಗುವ  ಸಮಸ್ಯೆಗಳನ್ನು ಇಲ್ಲಿ ನೀಡಲಾಗಿದೆ. ಸಾಲಕ್ಕೆ ಹೆಚ್ಚಿನ ಬಡ್ಡಿ ದರ ಕ್ರೆಡಿಟ್‌ ಸ್ಕೋರ್‌ 700 ಅಥವಾ 725ಕ್ಕಿಂತ ಕಡಿಮೆ ಇದ್ದರೆ, ಸಾಲದ ಅರ್ಜಿ ಅಪೂ›ವ್‌ ಆಗುವುದು ಕಷ್ಟ. ಒಂದು ವೇಳೆ ಬ್ಯಾಂಕ್‌ ನವರು  ಅರ್ಜಿಯನ್ನು ಅಪೂ›ವ್‌ ಮಾಡಿದರೂ, ಆ ಸಾಲಕ್ಕೆ ಹೆಚ್ಚಿನ ಬಡ್ಡಿ ವಿಧಿಸುವ ಸಾಧ್ಯತೆಯಿರುತ್ತದೆ.

* ಕ್ರೆಡಿಟ್‌ ಕಾರ್ಡ್‌ ಸಿಗುವುದು ಕಷ್ಟ ಕ್ರೆಡಿಟ್‌ ಕಾರ್ಡುಗಳನ್ನು ನೀಡುವಾಗಲೂ, ಕ್ರೆಡಿಟ್‌ ಸ್ಕೋರು ಸಹಾಯಕ್ಕೆ ಬರುತ್ತದೆ. ಕಡಿಮೆ ಕ್ರೆಡಿಟ್‌ ಸ್ಕೋರ್‌ ಹೊಂದಿದವರ ಕ್ರೆಡಿಟ್‌ ಕಾರ್ಡ್‌ ಅರ್ಜಿ, ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಂದಹಾಗೆ,  ಕ್ರೆಡಿಟ್‌ ಕಾರ್ಡುಗಳಿಂದ, ತಕ್ಷಣದ ಸಾಲವನ್ನು ಮಾತ್ರವಲ್ಲ; ವಸ್ತುಗಳನ್ನು ಖರೀದಿಸುವಾಗ ರಿವಾರ್ಡ್‌ ಪಾಯಿಂಟುಗಳ ಆಧಾರದಲ್ಲಿ ಡಿಸ್ಕೌಂಟನ್ನೂ, ಕ್ಯಾಷ್‌ ಬ್ಯಾಕ್‌, ಉಚಿತ ಉಡುಗೊರೆ, ಕೂಪನ್‌ಗಳನ್ನೂ ಪಡೆದುಕೊಳ್ಳಬಹುದು.

* ಹೆಚ್ಚಿನ ಪ್ರೊಸೆಸಿಂಗ್‌ ಶುಲ್ಕ ಬಡ್ಡಿ ದರವನ್ನು ಕ್ರೆಡಿಟ್‌ ಸ್ಕೋರ್‌ ಆಧಾರದಲ್ಲಿ ನಿಗದಿ ಪಡಿಸುವಂತೆಯೇ, ಬ್ಯಾಂಕುಗಳು ತನ್ನ ಪ್ರೊಸೆಸಿಂಗ್‌ ಶುಲ್ಕವನ್ನು, ಕ್ರೆಡಿಟ್‌ ಸ್ಕೋರಿನ ಆಧಾರದಲ್ಲಿ ಕಡಿಮೆ ಮಾಡ ಬಹುದು ಅಥವಾ ಮಾμ ಮಾಡ  ಬಹುದು. ಸಾಲದ ಮೊತ್ತ ಹೆಚ್ಚಿದ್ದಲ್ಲಿ ಪ್ರೊಸೆಸಿಂಗ್‌ ಶುಲ್ಕವೂ ಹೆಚ್ಚಿರುತ್ತದೆ. ಉತ್ತಮ ಕ್ರೆಡಿಟ್‌ ಸ್ಕೋರ್‌ ಕಾಪಾಡಿ ಕೊಂಡರೆ, ಗಣನೀಯ ಮೊತ್ತವನ್ನು ಉಳಿಸಬಹುದು.

* ಉದ್ಯೋಗ ಸ್ಥಳದಲ್ಲಿ ಕೆಟ್ಟ ಹೆಸರು ಕಾರ್ಪೊರೆಟ್‌ ಕ್ಷೇತ್ರದಲ್ಲಿ, ಕೆಲ ಕಂಪನಿ ಗಳು ಉದ್ಯೋಗಿಗಳ ಕ್ರೆಡಿಟ್‌ ಸ್ಕೋರ್‌ ಪರಿಶೀಲಿಸುವ ಪರಿಪಾಠ ಇಟ್ಟುಕೊಂಡಿವೆ. ಕಡಿಮೆ ಸ್ಕೋರು ಹೊಂದಿದ್ದರೆ, ಆ ವ್ಯಕ್ತಿ ಆರ್ಥಿಕ ಶಿಸ್ತು ಹೊಂದಿಲ್ಲ  ಎಂದು ಅರ್ಥೈಸ ಲಾಗುತ್ತದೆ. ಇದರಿಂದ ಮೇಲಧಿಕಾರಿಗಳು, ಆ ವ್ಯಕ್ತಿಯ ಕಾರ್ಯನಿಷ್ಠೆ, ವಿಶ್ವಾಸಾರ್ಹತೆ ಯನ್ನೇ ಅನುಮಾನದ ದೃಷ್ಟಿಯಿಂದ ನೋಡಬಹುದು. ಹೀಗಾಗಿ, ಕ್ರೆಡಿಟ್‌ ಸ್ಕೋರನ್ನು ಕಾಪಾಡಿಕೊಳ್ಳುವುದರಿಂದ, ಹಲವು ಬಗೆಯ ಪ್ರಯೋಜನಗಳು ಉಂಟು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.