ಮಂಡೋದರಿ ಏಕೆ ಪ್ರಾತಃಸ್ಮರಣೀಯಳು?


Team Udayavani, May 20, 2020, 5:01 AM IST

speaking-stri

ಪ್ರಕೃತಿಮಾತೆಯ ಎಲ್ಲ ಲಕ್ಷಣಗಳನ್ನೂ ಹೊತ್ತು ಸ್ತ್ರೀ, ಸತಿ ಎಂದು ಕರೆಯಲ್ಪಡುವ ಪಂಚಕನ್ಯೆಯರ ಸ್ಮರಣಮಾತ್ರ ದಿಂದಲೇ, ಪಾಪ ನಾಶವಾಗುವುದು ಎಂಬ ನಂಬಿಕೆ ಇದೆ. ಪ್ರಾತಃಸ್ಮರಣೀಯ ಪಂಚಕನ್ಯೆ ಯರಲ್ಲಿ, ಮಂಡೋದರಿಯೂ  ಒಬ್ಬಳು. ಮಂಡೋದರಿ, ದೈತ್ಯಶಿಲ್ಪಿ ಮಯನ ಮಗಳು. ಆಕೆಯನ್ನು ಒತ್ತಾಯವಾಗಿ ಎಳೆದು ತಂದು, ರಾವಣ ಮದುವೆಯಾದ. ಅವನೋ, ಯಾರೂ ಇದಿರಿಲ್ಲದವನು. ತನ್ನ ಪಾಪಕರ್ಮ ಗಳಿಂದಲೇ ತನ್ನ  ನಾಶವನ್ನು ಬರ ಮಾಡಿಕೊಂಡವನು.

ಇಂಥವನ ಪತ್ನಿಯಾಗಿದ್ದ ಮಂಡೋದರಿ, ಸುಗುಣ ಸಂಪನ್ನೆ. ರಾವಣ, ಪರಮಪಾವನೆ, ಪತಿವ್ರತೆ, ಸದ್ಧರ್ಮಚಾರಿಣಿಯಾದ, ಸೀತೆಯನ್ನು ಹೇಡಿಯಂತೆ ಅಪಹರಿಸುವ ಯೋಜನೆ ಕೈಗೊಂಡ.  ಇದನ್ನರಿತ ಮಂಡೋದರಿ- “ಅದು ಅಧರ್ಮ. ಹಾಗೆ ಮಾಡಿದಲ್ಲಿ ನಿಮ್ಮ ಕುಲವೇ ನಾಶವಾಗುವುದು’ ಎಂದು ಗಂಡನಿಗೆ ಬುದ್ಧಿ ಹೇಳಿದಳು. ಆದರೆ, ಆತ ಆ ಮಾತನ್ನು ಪರಿಗಣಿಸದೆ ಸೀತಾಪಹರಣ ಮಾಡಿ, ತನ್ನ ಅಂತ್ಯವನ್ನು ತಾನೇ  ಸ್ವಾಗತಿಸಿದ.

ರಾಮ- ರಾವಣರ ಯುದ್ಧದಲ್ಲಿ, ಮಕ್ಕಳು ಸಾಯುತ್ತಾ ಬಂದ ಸನ್ನಿವೇಶವನ್ನು ಕೂಡಾ, ಮಂಡೋದರಿ ನಿರ್ವಿಕಾರ ಭಾವದಿಂದಲೇ ಸ್ವೀಕರಿಸುತ್ತಾಳೆ. ಗಂಡ ಕಡೆಯ ಬಾರಿಗೆ ಯುದ್ಧಕ್ಕೆ ಹೊರಟಾಗಲೂ, ಬುದ್ಧಿ ಮಾತುಗಳಿಂದ ಅವನ ಮನ ಪರಿವರ್ತನೆಗೆ ಯತ್ನಿಸುತ್ತಾಳೆ. ಅದಾವುದನ್ನೂ ಕೇಳದ ರಾವಣ ಯುದ್ಧದಲ್ಲಿ ಸತ್ತಾಗ,  ರಣರಂಗಕ್ಕೆ ಬಂದು ಗೋಳಾಡಿ, ರಾಮನಲ್ಲಿ ಶರಣಾಗಿ, ಯಾರ ಮಾತಿಗೂ ಬಗ್ಗದೇ ಚಿತೆಯನ್ನು ಏರುತ್ತಾಳೆ.

ವಿಭೀಷಣನನ್ನು ಅಭಿನಂದಿಸುತ್ತಾಳೆ, ಆಶೀರ್ವದಿಸುತ್ತಾಳೆ. ಸತೀ ಧರ್ಮವನ್ನು ಅರಿತಿದ್ದ ಮಂಡೋದರಿ, ಅದನ್ನು ಜೀವನವಿಡೀ ಪಾಲಿಸಿದಳು. ಅವಳದು ತ್ಯಾಗಮಯ ಜೀವನ. ಶ್ರೀರಂಗ ಮಹಾಗುರುಗಳ ಮಾತಿನಂತೆ- “ಸ್ತ್ರೀಯರು  ಸದ್ವಸ್ತುವನ್ನು, ಪುರುಷ ಸ್ವರೂಪವನ್ನು ಅರಿತ ಜ್ಞಾನಿಗಳಾಗಿದ್ದರೆ, ಅವರನ್ನು ಪುರುಷರೆಂದೇ, ಜ್ಞಾನಿಗಳು ಕರೆಯುತ್ತಾರೆ. ಪುರುಷ ಶರೀರವಿದ್ದರೂ, ಅದರ ಸ್ವರೂಪದ ಅರಿವಿಲ್ಲದ ಪ್ರಾಕೃತರನ್ನು, ಸ್ತ್ರೀಯರೆಂದೇ ಕರೆಯುತ್ತಾರೆ’.

ಮಂಡೋದರಿ ಈ ದೃಷ್ಟಿಯಲ್ಲಿ, ಸದ್ವಸ್ತುವನ್ನರಿತ   ಜ್ಞಾನಿಯೇ ಆಗಿದ್ದಾಳೆ. ಪತಿ ಅಧರ್ಮದ ಹಾದಿಯಲ್ಲಿ ಸಾಗುತ್ತಿದ್ದಾಗ, ಅದನ್ನು ಒಪ್ಪದೇ, ಆತನನ್ನು ಧರ್ಮದ ಹಾದಿ ಯಲ್ಲಿ ಕರೆದೊಯ್ಯಲು ಯತ್ನಿಸುವುದು; ಪತಿಯ ಪಾಪಕೃತ್ಯಕ್ಕೆ ಸಹಕರಿಸದೇ, ಧರ್ಮ ಪಾಲನೆಯೊಂದಿಗೆ  ಬದುಕುವುದು ಸತಿ ಧರ್ಮ. ಈ ಸೂಕ್ಷ್ಮವನ್ನು ಅರಿತು ಬದುಕಿ, ಜಗಕ್ಕೆ ಪ್ರಾತಃ ಸ್ಮರಣೀಯಳಾದಳು ಮಂಡೋದರಿ.

* ಚಂಪಕಾ ನರಸಿಂಹಭಟ್, ಸಂಸ್ಕೃತಿ ಚಿಂತಕಿ ಅಷ್ಟಾಂಗಯೋಗ ವಿಜ್ಞಾನಮಂದಿರಂ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.