Explained: ಏನಿದು ಫೆಮಾ ಆ್ಯಕ್ಟ್? ಕ್ಸಿಯೋಮಿ ವಿರುದ್ಧದ ಕೇಸ್ ಏನು?
ವಿದೇಶಾಂಗ ವಿನಿಮಯ ಕಾಯ್ದೆ ಮತ್ತು ಆರ್ ಬಿಐ ನಿಯಮಗಳ ಸ್ಪಷ್ಟ ಉಲ್ಲಂಘನೆ.
Team Udayavani, May 2, 2022, 10:50 AM IST
ಗಾಲ್ವಾನ್ ಘರ್ಷಣೆ ಬಳಿಕ ಕೇಂದ್ರ ಸರ್ಕಾರ ಚೀನಾ ಜತೆಗಿನ ವ್ಯವಹಾರಗಳನ್ನು ತಗ್ಗಿಸಿಕೊಂಡಿ ರುವುದು ಸರಿಯಷ್ಟೇ. ಈಗ ಚೀನಾಗೆ, ವಿದೇಶಿ ವಿನಿಮಯ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಕ್ಸಿಯೋಮಿ ಹಣ ಕಳುಹಿಸುತ್ತಿದ್ದದ್ದು ಗೊತ್ತಾಗಿ, ಜಾರಿ ನಿರ್ದೇಶನಾಲಯವು ಅದರ 5,551.27 ಕೋಟಿ ರೂ.ಗಳನ್ನು ಜಪ್ತಿ ಮಾಡಿದೆ. ಹಾಗಾದರೆ, ಏನಿದು ಫೆಮಾ ಆ್ಯಕ್ಟ್? ಕ್ಸಿಯೋಮಿ ಮಾಡಿದ್ದಾದರೂ ಏನು? ಇಲ್ಲಿಂದೆ ಒಂದು ಸಂಕ್ಷಿಪ್ತ ನೋಟ.
ಕ್ಸಿಯೋಮಿ ವಿರುದ್ಧದಕೇಸ್ ಏನು?
ಏಪ್ರಿಲ್ ತಿಂಗಳ ಆರಂಭದಲ್ಲಿ ಜಾರಿ ನಿರ್ದೇಶನಾಲಯವು, ಕಂಪನಿಯ ಗ್ಲೋಬಲ್ ವೈಸ್ ಪ್ರೆಸಿ ಡೆಂಟ್ ಮನು ಕುಮಾರ್ ಜೈನ್ ಅವರನ್ನು ಕರೆಸಿಕೊಂಡು ವಿಚಾರಣೆ ನಡೆಸಿತ್ತು. ಅಂದರೆ, ಕ್ಸಿಯೋಮಿ ಕಂಪನಿಯು ಮೂರನೇ ದೇಶದ ಚಾನೆಲ್ ಮೂಲಕ ಚೀನಾಗೆ ಇಲ್ಲಿಂದ ಹಣ ಕಳುಹಿಸುತ್ತಿತ್ತು. ಇದು ವಿದೇಶಾಂಗ ವಿನಿಮಯ ಕಾಯ್ದೆ ಮತ್ತು ಆರ್ ಬಿಐ ನಿಯಮಗಳ ಸ್ಪಷ್ಟ ಉಲ್ಲಂಘನೆ. ಅಷ್ಟೇ ಅಲ್ಲ, 3 ವರ್ಷದ ಹಿಂದೆ ಕ್ಸಿಯೋಮಿ ಕಂಪನಿಯೇ ಚೀನಾಗೆ 3 ಸಾವಿರ ಕೋಟಿ ರೂ. ಹಣ ಕಳುಹಿಸಿತ್ತು.
ಇ.ಡಿ.ಯಿಂದ ಹಣ ಜಪ್ತಿ
ಶನಿವಾರವಷ್ಟೇ ಜಾರಿ ನಿರ್ದೇಶನಾಲಯ( ಇ.ಡಿ.)ವು ಕ್ಸಿಯೋಮಿ ಕಂಪನಿಯ 5,551.27 ಕೋಟಿ ರೂ.ಗ ಳನ್ನು ಜಪ್ತಿ ಮಾಡಿದೆ. ವಿದೇಶಿ ವಿನಿಮಯ ಕಾಯ್ದೆಯನ್ನು ಕ್ಸಿಯೋಮಿ ಉಲ್ಲಂಘಿಸಿದೆ ಎಂಬುದು ಇ.ಡಿ. ಆರೋಪ. ಈ ಕಂಪನಿಯ ಬ್ಯಾಂಕ್ ಅಕೌಂಟ್ನಲ್ಲಿದ್ದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆ ಸಂದರ್ಭದಲ್ಲೇ ಕಂಪನಿಯ ಷೇರುದಾರರು, ಹಣದ ಮೂಲ ಮತ್ತು ವ್ಯಾಪಾರಿಗಳ ಜತೆಗಿನ ಒಪ್ಪಂದದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿತ್ತು.
ಮೂರು ಕಂಪನಿಗಳಿಗೆ ಹಣ ವರ್ಗಾವಣೆ
ಜಾರಿ ನಿರ್ದೇಶನಾಲಯದ ಪ್ರಕಾರ, ಕ್ಸಿಯೋಮಿ ಕಂಪನಿಯು 3 ಕಂಪನಿಗಳಿಗೆ ರಾಯಲ್ಟಿ ರೂಪದಲ್ಲಿ ಭಾರೀ ಪ್ರಮಾಣದ ಹಣವನ್ನು ಇಲ್ಲಿಂದ ಕಳುಹಿಸಲಾಗಿತ್ತು.
ಅಂದರೆ, ಚೀನಾದಲ್ಲಿರುವ ಮೂಲ ಕಂಪನಿಯ ಆದೇಶದಿಂದ ಈ ಮೂರು ಕಂಪನಿಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಅಲ್ಲದೆ, ಭಾರತಕ್ಕೂ, ಕ್ಸಿಯೋಮಿಯಿಂದ ಹಣ ಸ್ವೀಕರಿಸಿದ ಮೂರು ಕಂಪನಿಗಳಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿಯೇ ಹಣ ಮುಟ್ಟು ಗೋಲು ಹಾಕಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Inheritance Tax: ಸ್ಯಾಮ್ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್
Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ