ಕೊಲ್ಲಮೊಗ್ರು, ಅಭ್ಯತ್ ಮಂಗಲ: ಮಿತಿ ಮೀರಿದ ಕಾಡಾನೆ ಹಾವಳಿ
Team Udayavani, Feb 28, 2022, 6:05 AM IST
ಸುಬ್ರಹ್ಮಣ್ಯ/ಮಡಿಕೇರಿ: ಸುಬ್ರಹ್ಮಣ್ಯ ಸಮೀಪದ ಕೊಲ್ಲಮೊಗ್ರು ಪರಿಸರದಲ್ಲಿ ಕಾಡಾನೆ ಕೃಷಿತೋಟಕ್ಕೆ ಲಗ್ಗೆ ಇಟ್ಟು ಅಪಾರ ಕೃಷಿ ನಾಶ ಮಾಡಿದೆ.
ಚಾಳೆಪ್ಪಾಡಿ, ದೋಲನ ಮನೆ ಮೊದಲಾದ ಕಡೆ ಕಾಡಾನೆ ಹಲವು ದಿನಗಳಿಂದ ದಾಳಿ ಮಾಡುತ್ತಿದ್ದು. ಅಡಿಕೆ ಗಿಡ, ಬಾಳೆಗಿಡಗಳನ್ನು ಧ್ವಂಸ ಮಾಡಿ ಅಪಾರ ನಷ್ಟವಾಗಿದೆ.
ಅತ್ತ ಕೊಡಗು ಜಿಲ್ಲೆಯ ಅಭ್ಯತ್ ಮಂಗಲ ವ್ಯಾಪ್ತಿಯಲ್ಲೂ ಕಾಡಾನೆ ಹಾವಳಿ ಮಿತಿ ಮೀರಿದೆ. ತೋಟ, ಗದ್ದೆಗಳಿಗೆ ನುಗ್ಗಿರುವ ಆನೆಗಳ ಹಿಂಡು ಸಾಕಷ್ಟು ಹಾನಿ ಉಂಟುಮಾಡಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಅಂಚೆಮನೆ ಸುಧಾಕರ ಅವರು ಹುಲ್ಲಿಗಾಗಿ ಬೆಳೆದ 2ನೇ ಬೆಳೆ ಕಾಡಾನೆ ಪಾಲಾಗಿದೆ. ಸುಮಾರು 100ಕ್ಕೂ ಅಧಿಕ ಅಡಿಕೆ ಗಿಡಗಳು ನಾಶವಾಗಿವೆ. ಅಕ್ಕಪಕ್ಕದ ತೋಟಗಳಿಗೂ ಆನೆಗಳು ಲಗ್ಗೆ ಇಟ್ಟಿವೆ. ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.