ವನ್ಯಜೀವಿ, ಪರಿಸರ ಪ್ರಿಯರ ನೆಚ್ಚಿನ ತಾಣ: ಕೊಂಡುಕುರಿ ಅಭಯಾರಣ್ಯ

ದಶಕದ ಅವಧಿಯಲ್ಲಿ ಹೆಚ್ಚಿದ ಜೀವವೈವಿಧ್ಯ ಸಂಪತ್ತು

Team Udayavani, Jan 5, 2022, 7:52 PM IST

1-dsaad

ದಾವಣಗೆರೆ: ಇದು ಕೇವಲ ಜೀವವೈವಿಧ್ಯದ ತಾಣವಷ್ಟೇ ಅಲ್ಲ, ಅಪರೂಪದ ಜೀವವೈವಿಧ್ಯದ ಕಣಜ ಎಂಬಂತಿರುವ ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆಯ (ಗುರುಸಿದ್ದಾಪುರ) ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯವು ದಶಕದ ಅವಧಿಯಲ್ಲಿ ತನ್ನೊಡಲೊಳಗಿನ ಜೀವವೈವಿಧ್ಯವನ್ನು ಇಮ್ಮಡಿಸಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯದಲ್ಲಿ ಅಪರೂಪದ ವನ್ಯಜೀವಿ ಕೊಂಡುಕುರಿ ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಗಳು, ಸಸ್ಯ ಸಂಕುಲಕ್ಕೆ ಆಶ್ರಯತಾಣವಾಗಿದೆ. ಈ ಅರಣ್ಯ ಪ್ರದೇಶ ಅಭಯಾರಣ್ಯ ಎಂದು ಘೋಷಣೆಯಾದ ಬಳಿ ಮಾನವನ ಹಸ್ತಕ್ಷೇಪಕ್ಕೆ ಸಂಪೂರ್ಣ ಕಡಿವಾಣ ಬಿದ್ದಿದ್ದು, ದಶಕದ ಅವಧಿಯಲ್ಲಿ ಇಲ್ಲಿರುವ ಪ್ರಾಣಿಗಳು, ಪಕ್ಷಿಗಳು, ವಿವಿಧ ಕೀಟಗಳು, ಸಸ್ಯ ಪ್ರಭೇದಗಳು ಇನ್ನಷ್ಟು ಸಮೃದ್ಧವಾಗಿದೆ. ರಂಗಯ್ಯನದುರ್ಗ ಕೊಂಡುಕುರಿ ಅಭ ಯಾರಣ್ಯ ದೇಶದ ಅಪರೂಪದ ಜೀವವೈವಿಧ್ಯ ತಾಣಗಳಲ್ಲಿ ಒಂದು. 1904ರಲ್ಲಿ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ. ಇದು 7723.63 ಹೆಕ್ಟೇರ್‌ ಅರಣ್ಯ ಪ್ರದೇಶ ಹೊಂದಿದೆ. ವಿಶ್ವದಲ್ಲಿ ವಿನಾಶದಂಚಿನಲ್ಲಿರುವ ಕೊಂಡುಕುರಿಗಳು ಇಲ್ಲಿ ಕಂಡು ಬಂದಿದ್ದರಿಂದ ರಾಜ್ಯ ಸರ್ಕಾರ ಅವುಗಳ ಸಂರಕ್ಷಣೆಗಾಗಿ ಈ ಅರಣ್ಯ ಪ್ರದೇಶವನ್ನು 2011ರಲ್ಲಿ “ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯ’ ಎಂದು ಘೋಷಿಸಿದೆ.

ಸಮೃದ್ಧ ಜೀವವೈವಿಧ್ಯ
ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯವು ಒಣ ಕುರುಚಲು ಅರಣ್ಯ ಪ್ರದೇಶ ಹೊಂದಿದೆ. ಕೊಂಡುಕುರಿ, ಚಿರತೆ, ಕಾಡುಹಂದಿ, ಕಿರುಬ, ಚಿಪ್ಪುಹಂದಿ, ನರಿ, ತೋಳ, ಮೊಲ ಹೀಗೆ ವಿವಿಧ ಪ್ರಾಣಿಗಳು ಅರಣ್ಯದಲ್ಲಿವೆ. ಅಳಿವಿನಂಚಿನಲ್ಲಿರುವ ಅಪರೂಪದ ಹುಲ್ಲೆ ಜಾತಿಗೆ ಸೇರಿದ ವನ್ಯಜೀವಿ ಚಿಂಕಾರ ಅಥವಾ ಸಣ್ಣಹುಲ್ಲೆ ಎಂದು ಕರೆಯಲ್ಪಡುವ ವನ್ಯಜೀವಿ ಸಹ ಇಲ್ಲಿ ಮೊದಲ ಬಾರಿ ಕ್ಯಾಮರಾ ಟ್ರ್ಯಾಪ್‌ನಲ್ಲಿ ದಾಖಲಾಗಿದೆ. ಇದು ಅತಿ ವಿರಳಜೀವಿಯಾಗಿದ್ದು, ಇದರ ವೈಜ್ಞಾನಿಕ ಹೆಸರು “ಗೆಜೆಲ್ಲಾ ಬೆನ್ನೆಟ್ಟಿ’. ನವಿಲು, ಮರಕುಟಿಕ ಸೇರಿದಂತೆ ಹತ್ತು ಹಲವು ಪಕ್ಷಿ ಪ್ರಬೇಧವೂ ಇಲ್ಲಿದೆ ಇನ್ನು ದಿಂಡುಗ, ಕಮರ, ಹೊನ್ನೆ, ಉದಯ, ತಾರೆ, ಆಲ, ಅರಳಿ, ಸೋಮೆ, ಜಾನಿ ಸೇರಿದಂತೆ ನಾನಾ ಜಾತಿಯ ಗಿಡ-ಮರಗಳು ಸಹ ಇಲ್ಲಿವೆ. ಅಮೃತಬಳ್ಳಿ, ಶತಾವರಿ, ಕಾಡುತುಳಸಿ, ನನ್ನಾರಿಯಂಥ ಔಷಧೀಯ ಸಸ್ಯಗಳೂ ಸಹ ಇಲ್ಲಿ ಕಂಡು ಬರುತ್ತವೆ.

ಅರಣ್ಯದ ರಕ್ಕಸಘಟ್ಟವನ್ನು ಏರುವ ವೇಳೆ ಹಸಿರು ಗಿಡ-ಮರಗಳು ಕಣ್ತುಂಬಿ ತಂಪು ಅನುಭವ ನೀಡಿದರೆ, ಕಲ್ಲಿನ ಬಂಡೆಗಳು ಬೆವರಿಳಿಸುತ್ತವೆ. ದಾರಿ ಮಧ್ಯೆ ಕಾಡುಬಿಕ್ಕೆ, ಕವಳಿ, ನಗಾರಿ, ಬೇಲ, ಮುರುಕಿ, ಕಾರೆ, ಹತ್ತಿಯಂಥ ಕಾಡಿನ ಹಣ್ಣಿನ ಗಿಡಲು ಬಾಯಲ್ಲಿ ನೀರೂರಿಸುತ್ತವೆ. ಇಲ್ಲಿಯ ಅಪಾರ ಜೀವ ವೈವಿಧ್ಯ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಲು ಅಲ್ಲಲ್ಲಿ ವೀಕ್ಷಣಾ ಗೋಪುರ ವ್ಯವಸ್ಥೆಯಿದ್ದು ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ. ಆಕರ್ಷಕ ಯೋಜನೆ: ಕೊಂಡುಕುರಿ ಅಭಯಾರಣ್ಯವನ್ನು ಇನ್ನಷ್ಟು ಆಕರ್ಷಣೀಯವನ್ನಾಗಿ ಮಾಡಲು ಇಲಾಖೆ ಯೋಜನೆ ಹಾಕಿಕೊಂಡಿದೆ. ಇಲ್ಲೊಂದು ಥೀಮ್‌ ಪಾರ್ಕ್‌, ಮಕ್ಕಳ ಪಾರ್ಕ್‌, ಪ್ರಾಣಿ ಪಕ್ಷಿಗಳ ಶಿಲ್ಪ ಕಲಾಕೃತಿ, ವೀಕ್ಷಣಾ ಕೇಂದ್ರಗಳು, ಔಷಧಿ ಸಸ್ಯ ವನ, ಜೀವವೈವಿಧ್ಯದ ಕುರಿತು ಮಾಹಿತಿ ನೀಡುವ ಗ್ರಂಥಾಲಯ, ಕ್ಯಾಂಟೀನ್‌ ಹೀಗೆ ಹತ್ತು ಹಲವು ಸೌಲಭ್ಯಗಳನ್ನು ಕಲ್ಪಿಸಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆ ಇದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿ.ಒಟ್ಟಾರೆ ಬಲು ಅಪರೂಪದ ಈ ಜೀವವೈವಿಧ್ಯ ತಾಣವನ್ನು ಸಂರಕ್ಷಿಸುವಲ್ಲಿ ಅರಣ್ಯ ಇಲಾಖೆ ವಿಶೇಷ ಗಮನಹರಿಸಿದೆ. ಪರಿಸರ ಪ್ರೇಮಿಗಳು ಇಲ್ಲಿಗೆ ಭೇಟಿ ನೀಡಿ ಅಪರೂಪದ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.

ಮಾರ್ಗಸೂಚಿ-ಸೌಲಭ್ಯ

ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯ ಜಿಲ್ಲಾ ಕೇಂದ್ರ ದಾವಣಗೆರೆಯಿಂದ 28 ಕಿಮೀ (ಪಲ್ಲಾಗಟ್ಟೆ ಮಾರ್ಗ), ತಾಲೂಕು ಕೇಂದ್ರ ಜಗಳೂರಿನಿಂದ 22 ಕಿಮೀ ಅಂತರದಲ್ಲಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಅಭಯಾರಣ್ಯವಿರುವ ಗುರುಸಿದ್ದಾಪುರ ಗ್ರಾಮದಲ್ಲಿಯೇ ರಂಗಯ್ಯದುರ್ಗ ಅರಣ್ಯ ವಿಶ್ರಾಂತಿ ಗೃಹ, ಶ್ರೀ ಚೌಡೇಶ್ವರಿ ವಿಶ್ರಾಂತಿ ಗೃಹಗಳಿವೆ. ಹತ್ತಿರದಲ್ಲಿಯೇ ಇರುವ ಜಗಳೂರು ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಲಾಡ್ಜ್ಗಳಿವೆ.

ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮದ್ ಅಮಾನತು

ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು

1-dvg

Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.