ವನಿತಾ ವಿಶ್ವಕಪ್‌ ಅಭ್ಯಾಸ ಪಂದ್ಯ: ವಿಂಡೀಸ್‌ಗೆ ಸೋಲುಣಿಸಿದ ಭಾರತ


Team Udayavani, Mar 1, 2022, 9:45 PM IST

ವನಿತಾ ವಿಶ್ವಕಪ್‌ ಅಭ್ಯಾಸ ಪಂದ್ಯ: ವಿಂಡೀಸ್‌ಗೆ ಸೋಲುಣಿಸಿದ ಭಾರತ

ರಂಗಿಯೋರ (ನ್ಯೂಜಿಲ್ಯಾಂಡ್‌): ತನ್ನ ದ್ವಿತೀಯ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಭಾರತ 81 ರನ್ನುಗಳ ಭಾರೀ ಅಂತರದಿಂದ ವೆಸ್ಟ್‌ ಇಂಡೀಸ್‌ಗೆ ಸೋಲುಣಿಸಿದೆ. ಇದರೊಂದಿಗೆ ಎರಡೂ ವಾರ್ಮ್ಅಪ್‌ ಮ್ಯಾಚ್‌ ಗೆದ್ದ ಸಾಧನೆಗೈದಿದೆ.

ಮೊದಲ ಮುಖಾಮುಖಿಯಲ್ಲಿ ಮಿಥಾಲಿ ಪಡೆ ದಕ್ಷಿಣ ಆಫ್ರಿಕಾವನ್ನು 2 ರನ್ನುಗಳಿಂದ ರೋಚಕವಾಗಿ ಮಣಿಸಿತ್ತು.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಸರಿಯಾಗಿ 50 ಓವರ್‌ಗಳಲ್ಲಿ 258ಕ್ಕೆ ಆಲೌಟ್‌ ಆಯಿತು. ವೆಸ್ಟ್‌ ಇಂಡೀಸ್‌ 9ಕ್ಕೆ 177 ರನ್‌ ಮಾಡಿ ಶರಣಾಯಿತು.

ಮಂಧನಾ-ದೀಪ್ತಿ ಫಿಫ್ಟಿ
ಸ್ಮೃತಿ ಮಂಧನಾ ಮತ್ತು ದೀಪ್ತಿ ಶರ್ಮ ಅವರ ಅರ್ಧ ಶತಕ, ಯಾಸ್ತಿಕಾ ಭಾಟಿಯಾ ಅವರ 42 ರನ್‌ ಕೊಡುಗೆ ಭಾರತದ ಸರದಿಯ ಆಕರ್ಷಣೆ ಆಗಿತ್ತು. ಮೊದಲ ಅಭ್ಯಾಸ ಪಂದ್ಯ ವೇಳೆ ತಲೆಗೆ ಚೆಂಡಿನೇಟು ತಿಂದಿದ್ದ ಮಂಧನಾ, ಇಲ್ಲಿ ಯಾವುದೇ ಸಮಸ್ಯೆಗೆ ಸಿಲುಕದೆ 66 ರನ್‌ ಬಾರಿಸಿದರು (67 ಎಸೆತ, 7 ಬೌಂಡರಿ). ಎಚ್ಚರಿಕೆಯ ಆಟವಾಡಿದ ದೀಪ್ತಿ ಶರ್ಮ 64 ಎಸೆತ ಎದುರಿಸಿ 51 ರನ್‌ ಹೊಡೆದರು. ಇದರಲ್ಲಿ ಕೇವಲ ಒಂದು ಬೌಂಡರಿ ಸೇರಿತ್ತು. ನಾಯಕಿ ಮಿಥಾಲಿ ರಾಜ್‌ 30 ರನ್‌ ಕೊಡುಗೆ ಸಲ್ಲಿಸಿದರು.

ಶಫಾಲಿ ವರ್ಮ ಮೊದಲ ಓವರ್‌ನಲ್ಲೇ ಖಾತೆ ತೆರೆಯದೆ ವಾಪಸಾದ ಬಳಿಕ ಜತೆಗೂಡಿದ ಮಂಧನಾ-ದೀಪ್ತಿ 117 ರನ್‌ ಜತೆಯಾಟ ನಿಭಾಯಿಸಿದರು.

ಇದನ್ನೂ ಓದಿ:ನೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಲಿ: ಗಾವಸ್ಕರ್ ಹಾರೈಕೆ

ಭಾರತದ ಬಿಗಿ ದಾಳಿ
ಚೇಸಿಂಗ್‌ ವೇಳೆ ಭಾರತದ ಬೌಲಿಂಗ್‌ ದಾಳಿಗೆ ಪರದಾಡಿದ ವಿಂಡೀಸಿಗೆ ಯಾವ ಹಂತದಲ್ಲೂ ಮೇಲುಗೈ ಸಾಧ್ಯವಾಗಲಿಲ್ಲ. ಭಾರತದ ಬೌಲರ್ ಒಟ್ಟು 6 ಮೇಡನ್‌ ಓವರ್‌ ಎಸೆದರು. ಸ್ಟ್ರೈಕ್‌ ಬೌಲರ್‌ಗಳಾದ ಮೇಘನಾ ಸಿಂಗ್‌ 3, ಜೂಲನ್‌ 2 ಮೇಡನ್‌ ಎಸೆದು ಕೆರಿಬಿಯನ್ನರಿಗೆ ಆರಂಭದಲ್ಲೇ ಕಡಿವಾಣ ಹಾಕಿದರು.

ಜೂಲನ್‌ ವಿಕೆಟ್‌ ಗಳಿಸದೇ ಹೋದರೂ 8 ಓವರ್‌ಗಳಿಂದ ಕೇವಲ 14 ರನ್‌ ನೀಡಿ ಗಮನ ಸೆಳೆದರು. ಪೂಜಾ ವಸ್ತ್ರಾಕರ್‌ 3, ಮೇಘನಾ, ರಾಜೇಶ್ವರಿ ಗಾಯಕ್ವಾಡ್‌ ಮತ್ತು ದೀಪ್ತಿ ಶರ್ಮ ತಲಾ 2 ವಿಕೆಟ್‌ ಕೆಡವಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ-50 ಓವರ್‌ಗಳಲ್ಲಿ 258 (ಮಂಧನಾ 66, ದೀಪ್ತಿ 51, ಯಾಸ್ತಿಕಾ 42, ಮಿಥಾಲಿ 30, ಫ್ರೇಸರ್‌ 24ಕ್ಕೆ 2, ಹ್ಯಾಲಿ 47ಕ್ಕೆ 2). ವೆಸ್ಟ್‌ ಇಂಡೀಸ್‌-50 ಓವರ್‌ಗಳಲ್ಲಿ 9 ವಿಕೆಟಿಗೆ 177 (ಕ್ಯಾಂಬೆಲ್‌ 63, ಹ್ಯಾಲಿ 44, ಪೂಜಾ 21ಕ್ಕೆ 3, ಮೇಘನಾ 30ಕ್ಕೆ 2, ದೀಪ್ತಿ 31ಕ್ಕೆ 2, ರಾಜೇಶ್ವರಿ 39ಕ್ಕೆ 2).

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.