ಪಥ್ಯದ ಪಾಲನೆ ಜತೆಗಿರಲಿ


Team Udayavani, Jun 21, 2020, 10:48 AM IST

ಪಥ್ಯದ ಪಾಲನೆ ಜತೆಗಿರಲಿ

ಆಯುರ್ವೇದ, ಯೋಗ ಒಂದು ಸಮಾನಾಂತರ ವಿಜ್ಞಾನ ಎನ್ನಬಹುದು. ಶರೀರ, ಮನಸ್ಸು ಮತ್ತು ಆತ್ಮ. ಈ ಮೂರೂ ಸೇರಿದಾಗ ಪರಿಪೂರ್ಣ ಮನುಷ್ಯನಾಗಲು ಸಾಧ್ಯ ಎಂಬುದು ಆಯುರ್ವೇದದ ಮೂಲಸಾರ. ಯೋಗವೂ ಇದನ್ನೇ ಪ್ರತಿಪಾದಿಸುತ್ತದೆ. ಆರೋಗ್ಯದ ದೃಷ್ಟಿ ಯಿಂದ ಹೇಳುವುದಾದಲ್ಲಿ ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥವೇ ಆಯುರ್ವೇದ ಮತ್ತು ಯೋಗದ ತಿರುಳು. ಮಾನವ ಜೀವನದ ಪರಮೋ ದ್ದೇಶವಾಗಿರುವ ಮೋಕ್ಷವೇ ಇವೆರಡರ ಗುರಿ.

ಆಹಾರ ಪದ್ಧತಿಗಿದೆ ಸಾಮ್ಯತೆ
ಆಯುರ್ವೇದ ಮತ್ತು ಯೋಗ ವಿಜ್ಞಾನದಲ್ಲಿ ಆಹಾರ ಪದ್ಧತಿ ಒಂದೇ. ಆಯುರ್ವೇದದಲ್ಲಿ ಯಾವ ಆಹಾರಗಳು ವರ್ಜ್ಯ ಎಂದು ಹೇಳಲಾಗುತ್ತದೆಯೋ ಯೋಗಾಭ್ಯಾಸಿಗಳು ಅವುಗಳಿಂದ ದೂರವಿರಬೇಕು. ಚಿಕಿತ್ಸಾ ವ್ಯವಸ್ಥೆಯಲ್ಲಿಯೂ ಇವೆರಡರಲ್ಲೂ ಸಾಮ್ಯತೆ ಇದೆ. ಆಯುರ್ವೇದದಲ್ಲಿ ದಿನಚರ್ಯ, ಋತುಚರ್ಯ ಮತ್ತು ಸದ್ವಿತರ್ಯಗಳೆಂದು ಮೂರು ವಿಭಾಗಗಳಿವೆ. ದಿನಚರ್ಯದಲ್ಲಿ ಆಹಾರ ಸಹಿತ ದಿನಚರಿ ಬಗೆಗೆ ತಿಳಿಸಿದರೆ, ಋತುಚರ್ಯದಲ್ಲಿ ಯಾವ್ಯಾವ ಋತುಗಳಿಗೆ ಯಾವ ಆಹಾರ ಸೇವನೆ ಸೂಕ್ತ ಎಂದು ವಿವರಿಸಲಾಗಿದೆ. ಸದ್ವಿತcರ್ಯದಲ್ಲಿ ಮನುಷ್ಯನ ಆಚಾರ- ವಿಚಾರ, ಸಾಮಾಜಿಕ ಆರೋಗ್ಯದ ಬಗೆಗೆ ತಿಳಿಸಲಾಗಿದೆ.

ಯೋಗಾಸನ ಮತ್ತು ಪಥ್ಯ
ಇಡೀ ವಿಶ್ವವೇ ಕೋವಿಡ್ ವೈರಸ್‌ನಿಂದ ಕಂಗೆಟ್ಟಿರುವಾಗ ಜನರು ತಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಈನಿಟ್ಟಿನಲ್ಲಿ ಆಯುರ್ವೇದ ಔಷಧ ಕ್ರಮವನ್ನು ಪಾಲಿಸುತ್ತಿದ್ದಾರೆ.

ಇದರ ಜತೆ ಯಾವ್ಯಾವ ಆಸನ, ಭಂಗಿ, ಮುದ್ರೆಗಳಿಂದ ತಮ್ಮ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂದು ಗೂಗಲ್‌ನಲ್ಲಿ ಜಾಲಾಡತೊಡಗಿದ್ದಾರೆ.

ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾದ ಯೋಗಾಸನಗಳನ್ನು ಅಭ್ಯಸಿಸುವ ಜತೆಯಲ್ಲಿ ನಾವು ಸೇವಿಸುವ ಆಹಾರದತ್ತಲೂ ಕೊಂಚ ಗಮನಹರಿಸಬೇಕು. “ಎಷ್ಟೋ ದಿನಗಳಿಂದ ಯೋಗಾಸನ, ಮುದ್ರೆ, ಧ್ಯಾನಗಳನ್ನು ಮಾಡುತ್ತಲೇ ಬಂದರೂ ಪ್ರತಿನಿತ್ಯ ಶೀತ, ಕೆಮ್ಮು, ಜ್ವರ ಕಾಡುತ್ತಿದೆ’ ಎಂದು ಅಳಲು ತೋಡಿಕೊಳ್ಳುವ ಅಧಿಕ ಮಂದಿ ನಮ್ಮ ನಡುವಿದ್ದಾರೆ. ಇದಕ್ಕೆ ಕಾರಣ ಅವರ ಆಹಾರ ಪದ್ಧತಿ ಸರಿ ಇಲ್ಲದಿರುವುದು ಮತ್ತು ಕೆಲವು ಪಥ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು.
ನಿಮ್ಮ ಯಾವುದೇ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆ ಸಂಬಂಧ ಆಯುರ್ವೇದ ಚಿಕಿತ್ಸೆ ಅಥವಾ ಯೋಗಾಸನದ ಮೊರೆ ಹೋಗಿದ್ದೀರಿ ಎಂದಾದರೆ ಅಲ್ಲಿ “ಪಥ್ಯ’ಕ್ಕೆ ಮಹತ್ವ ನೀಡಬೇಕು.

ಸಾತ್ವಿಕ ಆಹಾರ
ಅದು ಆಯುರ್ವೇದ ಇರಲಿ, ಯೋಗ ಇರಲಿ ಸಾತ್ವಿಕ ಆಹಾರ ಸೇವನೆ ಕಡ್ಡಾಯ. ಮಾಂಸಾ ಹಾರದಿಂದ ದೂರವಿದ್ದರೆ ಒಳ್ಳೆಯದು.  ವೈದ್ಯರು, ತಜ್ಞರು ಹೇಳುವ ಪಥ್ಯವನ್ನು ಪಾಲಿಸಲು ಸಾಧ್ಯ ವಿಲ್ಲ ಎಂದಾದರೆ ಈ ಚಿಕಿತ್ಸೆ ಅಥವಾ ಅಭ್ಯಾಸಗಳು ನಿಮಗೆ ನಿರೀಕ್ಷಿತ ಫ‌ಲ ಕೊಡಲಾರವು. ಕೇವಲ ದೇಹ ದಂಡನೆಯಿಂದ ಪರಿಪೂರ್ಣ ಆರೋಗ್ಯ ಸಾಧ್ಯವಿಲ್ಲ. ದೈಹಿಕ, ಮಾನಸಿಕವಾಗಿ ಸ್ವಸ್ಥವಾಗಿರಲು ಸೊಪ್ಪು, ಹಸಿ ತರಕಾರಿಗಳು, ಹಣ್ಣುಗಳು, ನೆನೆ ಹಾಕಿದ ಕಾಳುಗಳು, ಹಾಲು, ಶುಂಠಿ, ಅರಿಶಿನ, ತುಳಸಿ, ಕರಿಮೆಣಸು, ಕೊತ್ತಂಬರಿ ಮತ್ತಿತರ ಪದಾರ್ಥಗಳ ಸೇವನೆ ಹಿತಕಾರಿ. ಕಫ‌ ವರ್ಧನೆಗೆ ಪೂರಕವಾದ ಮೊಸರು, ಉದ್ದು ಮತ್ತು ಸುಲಭವಾಗಿ ಜೀರ್ಣವಾಗದ ಕರಿದ ತಿಂಡಿಗಳು, ಮಸಾಲೆ ಪದಾರ್ಥಗಳು, ಫಾಸ್ಟ್‌ ಫ‌ುಡ್‌ ಸೇವನೆಯಿಂದ ದೂರ ಇದ್ದಷ್ಟೂ ಒಳಿತು.

ನೀವು ಯಾವ ಉದ್ದೇಶದಿಂದ ಯೋಗಾಸನದ ಮೊರೆ ಹೋಗಿದ್ದೀರಿ ಎಂಬುದನ್ನು ಅವಲಂಬಿಸಿ ಪಥ್ಯಗಳಿರು ತ್ತವೆ. ಯೋಗ ಗುರುಗಳ ಸಲಹೆಯಂತೆ ಪಥ್ಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದಲ್ಲಿ ಬೇಗ ಪರಿಹಾರ ಸಾಧ್ಯ.

– ಡಾ| ಸತ್ಯನಾರಾಯಣ ಬಿ., ಪ್ರಾಂಶುಪಾಲರು, ಮುನಿಯಾಲು ಆಯುರ್ವೇದ ಕಾಲೇಜು, ಮಣಿಪಾಲ.

ಟಾಪ್ ನ್ಯೂಸ್

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

1-qeqewqe

Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kovid-yoga

ಕೋವಿಡ್‌ ವಿರುದ್ಧ ನಗರದಲ್ಲಿ ಯೋಗಾಯೋಗ

rogaa mukata

ಯೋಗ ಮಾಡಿ ರೋಗ ಮುಕ್ತರಾಗಿ

ಮಾಸ್ಕ್ ಧರಿಸಿ ಮನೆಯಲ್ಲಿಯೇ ಯೋಗ ಆಚರಣೆ

ಮಾಸ್ಕ್ ಧರಿಸಿ ಮನೆಯಲ್ಲಿಯೇ ಯೋಗ ಆಚರಣೆ

ಪೇಜಾವರ, ಪಲಿಮಾರು ಶ್ರೀಗಳಿಂದ ಯೋಗಾಸನ

ಪೇಜಾವರ, ಪಲಿಮಾರು ಶ್ರೀಗಳಿಂದ ಯೋಗಾಸನ

ಯೋಗ ಜನಜೀವನದ ಅವಿಭಾಜ್ಯ ಅಂಗವಾಗಲಿ : ಡಿವಿಎಸ್ 

ಯೋಗ ಜನಜೀವನದ ಅವಿಭಾಜ್ಯ ಅಂಗವಾಗಲಿ : ಡಿವಿಎಸ್ 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

12-fusion

UV Fusion: ಆಕೆಗೂ ಒಂದು ಮನಸ್ಸಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.