ಗೌರಿಗಾಗಿ ಮೈಸೂರಿಂದ ಬಂದ ಯದುನಂದನ

ಏಕಾಂಗಿಯಾಗಿದ್ದ ಗೌರಿ ಜಿರಾಫೆಗೆ ಹೊಸ ಸಂಗಾತಿ, ಪ್ರಾಣಿ ಪ್ರಿಯರು ಫ‌ುಲ್‌ ಖುಷ್‌

Team Udayavani, Apr 25, 2020, 10:43 AM IST

ಗೌರಿಗಾಗಿ ಮೈಸೂರಿಂದ ಬಂದ ಯದುನಂದನ

ಆನೇಕಲ್‌: ಕಳೆದ ಎರಡು ವರ್ಷಗಳಿಂದ ಏಕಾಂಗಿಯಾಗಿದ್ದ ಗೌರಿ ಜಿರಾಫೆಗೆ ಈಗ ಹೊಸ ಗೆಳೆಯ ಯದುನಂದನ ಸಿಕ್ಕಿದ್ದು, ಆತ್ಮೀಯವಾಗಿ ಬರಮಾಡಿಕೊಂಡಿದ್ದಾಳೆ. ಅಲ್ಲದೆ
ಪ್ರವಾಸಿಗರಿಗೂ ಕೂಡ ಎರಡು ಜಿರಾಫೆಗಳನ್ನು ಕಣ್ತುಂಬಿಕೊಳ್ಳುವ ಭಾಗ್ಯ ಸಿಗಲಿದೆ. ಬನ್ನೇರುಘಟ್ಟ ಉದ್ಯಾನವನಕ್ಕೆ ಗಂಡು ಜಿರಾಫೆ ತರಿಸಿಕೊಳ್ಳಬೇಕೆಂಬ ಯತ್ನ ಹಲವು ವರ್ಷಗಳ ಬಳಿಕ ಯಶಸ್ವಿಯಾಗಿದೆ. ಮೈಸೂರು ಜಯಚಾಮರಾಜೇಂದ್ರ ಮೃಗಾಲಯದಲ್ಲಿನ ಕೃಷ್ಣರಾಜ ಮತ್ತು ಬಬ್ಲಿ ಜೋಡಿಗೆ ಜನಿಸಿದ, ಒಂದು ವರ್ಷ, ಐದು ತಿಂಗಳ ಗಂಡು ಜಿರಾಫೆ ಯದುನಂದನ, ಈಗ ಉದ್ಯಾನವನದ ಹೆಣ್ಣು ಜಿರಾಫೆ ಗೌರಿಗೆ ಸಾಥ್‌ ನೀಡಲಿದೆ.

ಜಿರಾಫೆ ಬಂದಿದ್ದು ಹೇಗೆ?: ಜಿರಾಫೆಯನ್ನು ಸಾಗಿಸುವುದೇ ಸಾಹಸದ ಕೆಲಸ. ಬನ್ನೇರುಘಟ್ಟ ಉದ್ಯಾನವನಕ್ಕೆ ಸಾಗಿಸುವ ಮೊದಲು ಜಿರಾಫೆ ವಿಶೇಷ ಕೇಜ್‌ ಅನ್ನು ಮೈಸೂರು ಮೃಗಾಲಯಲ್ಲಿನ ಜಿರಾಫೆ ಆವರಣದಲ್ಲಿ ಇಟ್ಟು, ಯದುನಂದನನಿಗೆ ಒಳಗೆ ಹೋಗಿ ಬರುವ ಅಭ್ಯಾಸ ಮಾಡಿಸಲಾಯಿತು. ಬಳಿಕ 24 ಚಕ್ರಗಳಿರುವ ಲಾರಿ ತರಿಸಿಕೊಂಡು, 15 ಅಡಿಎತ್ತರವಿರುವ ಕೇಜ್‌ನೊಳಗೆ ಜಿರಾಫೆ ಹಾಕಿ, ಕ್ರೇನ್‌ ಸಹಾಯದಿಂದ ಕೇಜ್‌ಅನ್ನು ಟ್ರಕ್‌ನಲ್ಲಿಟ್ಟು ಸಾಗಿಸಲಾಯಿತು. ಜತೆಗೆ ವಿದ್ಯುತ್‌ ಇಲಾಖೆ ಸಹಕಾರವನ್ನೂ ಕೋರಲಾಯಿತು.

ಜಿರಾಫೆ ಬರುವ ಹಿನ್ನೆಲೆ: ರಾಜ್ಯದಲ್ಲಿ ಈವರೆಗೂ ಮೈಸೂರು ಮೃಗಾಲಯದಲ್ಲಿ ಮಾತ್ರ ಜಿರಾಫೆಗಳಿದ್ದವು. ಹೀಗಾಗಿ ರಾಜಧಾನಿಯ ಬನ್ನೇರುಘಟ್ಟ ಉದ್ಯಾನವನಕ್ಕೆ ವಿದೇಶಿ ಪ್ರವಾಸಿಗರು, ಜಿರಾಫೆ ಕಾಣುವ ಕುತೂಹಲ ವ್ಯಕ್ತಪಡಿಸಿದ್ದರಿಂದ ಅಧಿಕಾರಿಗಳು ಕಾರ್ಯಪ್ರವೃತ್ತರಾದರು. ಸತತ 4 ವರ್ಷಗಳ ಯತ್ನದ ಬಳಿಕ 2018 ರ ಏಪ್ರಿಲ್‌ 3ರಂದು ಉದ್ಯಾನವನಕ್ಕೆ ಹೆಣ್ಣು ಜಿರಾಫೆ ಬಂದಿತ್ತು. ಆದರೆ ಜೊತೆಗಾರ ಸಿಕ್ಕಿರಲಿಲ್ಲ. ಹೀಗಾಗಿ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರ ವಿಶೇಷ ಕಾಳಜಿಯಿಂದ ಮೈಸೂರು ಮೃಗಾಲಯದಿಂದಲೇ ಮತ್ತೂಂದು ಗಂಡು
ಜಿರಾಫೆ ತರಿಸಿಕೊಳ್ಳಲಾಗಿದೆ. ಎರಡೂ ಜಿರಾಫೆಗಳು ಆತ್ಮೀಯವಾಗಿದ್ದವು. ಆದರೆ ಸದ್ಯ ಜಿರಾಫೆಗಳನ್ನು ಬೇರೆ ಬೇರೆಯಾಗಿಟ್ಟು, ಕೆಲದಿನಗಳ ಬಳಿಕ ಒಟ್ಟಿಗೆ ಇರಿಸಲಾಗುವುದು. ಉದ್ಯಾನವನಕ್ಕೆ ಗಂಡು ಜಿರಾಫೆ ಬರಲು ಕಾರಣರಾದ ಮೃಗಾಲಯ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ, ಮೈಸೂರು ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಅವರಿಗೆ ಅಭಿನಂದನೆಗಳು ಎಂದು ವನಶ್ರೀ ತಿಳಿಸಿದರು.

ಮೈಸೂರು ಮೃಗಾಲಯದಲ್ಲಿ 7 ಜಿರಾಫೆಗಳಿದ್ದು, ಅದರಲ್ಲಿ ಒಂದು ಜಿರಾಫೆಯನ್ನು ಬನ್ನೇರುಘಟ್ಟಕ್ಕೆ ಕಳುಹಿಸಲಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿಗಳ ನಿಯಮಗಳಂತೆ ಜಿರಾಫೆ ತರಿಸಿಕೊಳ್ಳಲಾಗಿದೆ.
●ವನಶ್ರೀ ವಿಪಿನ್‌ಸಿಂಗ್‌, ಉದ್ಯಾನ ವನದ ಕಾರ್ಯನಿರ್ವಾಹಕ ನಿರ್ದೇಶಕಿ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.