ಮುಂಬೈ ಇಂಡಿಯನ್ಸ್‌ ಗೆಲುವು ಕಸಿದ ಲಲಿತ್‌-ಅಕ್ಷರ್‌


Team Udayavani, Mar 27, 2022, 11:44 PM IST

ಮುಂಬೈ ಇಂಡಿಯನ್ಸ್‌ ಗೆಲುವು ಕಸಿದ ಲಲಿತ್‌-ಅಕ್ಷರ್‌

ಮುಂಬಯಿ: ಲಲಿತ್‌ ಯಾದವ್‌ ಮತ್ತು ಅಕ್ಷರ್‌ ಪಟೇಲ್‌ ಜೋಡಿಯ ಅಸಾಮಾನ್ಯ ಬ್ಯಾಟಿಂಗ್‌ ಪರಾಕ್ರಮದಿಂದ ಮುಂಬೈ ಇಂಡಿಯನ್ಸ್‌ ವಿರುದ್ಧ ಸೋಲಿನ ದವಡೆಯಿಂದ ಪಾರಾಗಿ ಬಂದ ಡೆಲ್ಲಿ ಕ್ಯಾಪಿಟಲ್ಸ್‌ 4 ವಿಕೆಟ್‌ಗಳ ರೋಚಕ ಜಯ ಗಳಿಸಿದೆ.

ರವಿವಾರದ ಮೊದಲ ಐಪಿಎಲ್‌ ಮುಖಾಮುಖಿಯಲ್ಲಿಆತಿಥೇಯ ಮುಂಬೈ 5 ವಿಕೆಟಿಗೆ 177 ರನ್‌ ಗಳಿಸಿ ಸವಾಲೊಡ್ಡಿತು. ಇದನ್ನು ಬೆನ್ನಟ್ಟುವ ಹಾದಿಯಲ್ಲಿ ಡೆಲ್ಲಿ ತೀವ್ರ ಕುಸಿತಕ್ಕೆ ಸಿಲುಕಿತು. 10 ಓವರ್‌ ಒಳಗೆ 72 ರನ್ನಿಗೆ 5 ವಿಕೆಟ್‌ ಕಳೆದುಕೊಂಡಾಗ ಡೆಲ್ಲಿಯ ಸೋಲು ಖಾತ್ರಿಯಾಗಿತ್ತು. 104ಕ್ಕೆ 6 ವಿಕೆಟ್‌ ಬಿತ್ತು. ಅಂತಿಮವಾಗಿ 18.2 ಓವರ್‌ಗಳಲ್ಲಿ 6 ವಿಕೆಟಿಗೆ 179 ರನ್‌ ಬಾರಿಸಿ ಮುಂಬೈ ಮೇಲೆ ಸವಾರಿ ಮಾಡಿಯೇ ಬಿಟ್ಟಿತು!

ಪಂದ್ಯಕ್ಕೆ ತಿರುವು ಒದಗಿಸಿದವರೆಂದರೆ, 7ನೇ ವಿಕೆಟಿಗೆ ಜತೆಗೂಡಿದ ಲಲಿತ್‌ ಯಾದವ್‌ ಮತ್ತು ಅಕ್ಷರ್‌ ಪಟೇಲ್‌. ಇವರು ಕೇವಲ 30 ಎಸೆತಗಳಿಂದ 75 ರನ್‌ ಜತೆಯಾಟ ನಡೆಸಿ ಮುಂಬೈಯ ಗೆಲುವಿನ ಕನಸನ್ನು ಛಿದ್ರಗೊಳಿಸಿದರು. ಯಾದವ್‌ 38 ಎಸೆತಗಳಿಂದ ಅಜೇಯ 48 ರನ್‌ (4 ಫೋರ್‌, 2 ಸಿಕ್ಸರ್‌), ಪಟೇಲ್‌ 17 ಎಸೆತಗಳಿಂದ ಅಜೇಯ 38 ರನ್‌ (2 ಬೌಂಡರಿ, 3 ಸಿಕ್ಸರ್‌) ಬಾರಿಸಿ ಡೆಲ್ಲಿಯ ಗೆಲುವಿನ ರೂವಾರಿಗಳೆನಿಸಿದರು.

ಆರಂಭಿಕರಾದ ಪೃಥ್ವಿ ಶಾ (28)-ಟಿಮ್‌ ಸೀಫ‌ರ್ಟ್‌ (21) ಬಿರುಸಿನ ಆರಂಭ ಒದಗಿಸಿದ್ದರು. ಬಳಿಕ ಮುರುಗನ್‌ ಅಶ್ವಿ‌ನ್‌ ಮತ್ತು ಬಾಸಿಲ್‌ ಥಂಪಿ ಘಾತಕ ಸ್ಪೆಲ್‌ ನಡೆಸಿ ಮುಂಬೈಗೆ ಮೇಲುಗೈ ಒದಗಿಸಿದರು. ಕೊನೆಯಲ್ಲಿ ರೋಹಿತ್‌ ಪಡೆಯ ಬೌಲಿಂಗ್‌ ಮ್ಯಾಜಿಕ್‌ ನಡೆಯಲೇ ಇಲ್ಲ.

ಮಿಂಚಿದ ಇಶಾನ್‌ ಕಿಶನ್‌
ಮೆಗಾ ಹರಾಜಿನಲ್ಲಿ ಸರ್ವಾಧಿಕ 15.25 ಕೋಟಿ ರೂ. ಮೊತ್ತಕ್ಕೆ ಖರೀದಿಯಾದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ಮುಂಬೈ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಆರಂಭಿಕನಾಗಿ ಬಂದು ಕೊನೆಯ ತನಕವೂ ಬ್ಯಾಟಿಂಗ್‌ ವಿಸ್ತರಿಸಿದ ಅವರು ಕೇವಲ 48 ಎಸೆತಗಳಿಂದ 81 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಈ ಬಿರುಸಿನ ಬ್ಯಾಟಿಂಗ್‌ ವೇಳೆ 11 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿದರು.

ನಾಯಕ ರೋಹಿತ್‌ ಶರ್ಮ ಮತ್ತು ಇಶಾನ್‌ ಕಿಶನ್‌ ಸೇರಿಕೊಂಡು ಮುಂಬೈಗೆ ಭರ್ಜರಿ ಆರಂಭ ಒದಗಿಸಿದರು. 8.2 ಓವರ್‌ಗಳಿಂದ 67 ರನ್‌ ಹರಿದು ಬಂತು. ಇದರಲ್ಲಿ ರೋಹಿತ್‌ ಪಾಲು 32 ಎಸೆತಗಳಿಂದ 41 ರನ್‌. 4 ಫೋರ್‌, 2 ಸಿಕ್ಸರ್‌ಗಳನ್ನು ಇದು ಒಳಗೊಂಡಿತ್ತು.

ಇಶಾನ್‌ ಕಿಶನ್‌ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದರಿಂದ ಮುಂಬೈ ಮೊತ್ತ ಬೆಳೆಯುತ್ತ ಹೋಯಿತು. ರೋಹಿತ್‌ ನಿರ್ಗಮನದ ಬಳಿಕ ಅವರಿಗೆ ಇನ್ನೊಂದು ತುದಿಯಿಂದ ಹೆಚ್ಚಿನ ಬೆಂಬಲ ಲಭಿಸಲಿಲ್ಲ. ಅನ್ಮೋಲ್‌ಪ್ರೀತ್‌ ಸಿಂಗ್‌ ಎಂಟೇ ರನ್ನಿಗೆ ಔಟಾದರು. ತಿಲಕ್‌ ವರ್ಮ 22 ರನ್‌ ಮಾಡಿದರು.

ಮುಂಬೈಯ ಮಧ್ಯಮ ಕ್ರಮಾಂಕದ ಮೇಲೆ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಮತ್ತು ಎಡಗೈ ಮಧ್ಯಮ ವೇಗಿ ಖಲೀಲ್‌ ಅಹ್ಮದ್‌ ಘಾತಕವಾಗಿ ಎರಗಿದರು. ಕುಲದೀಪ್‌ ಅತ್ಯಂತ ಬಿಗಿಯಾದ ದಾಳಿ ಸಂಘಟಿಸಿ 18 ರನ್‌ ವೆಚ್ಚದಲ್ಲಿ 3 ವಿಕೆಟ್‌ ಕಿತ್ತರು. ಖಲೀಲ್‌ ಸಾಧನೆ 27ಕ್ಕೆ 2 ವಿಕೆಟ್‌.

ರೋಹಿತ್‌ ಶರ್ಮಗೆ
12 ಲಕ್ಷ ರೂ. ದಂಡ
ಮುಂಬಯಿ, ಮಾ. 27: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ದಾಳಿ ನಡೆಸಿದ ಕಾರಣಕ್ಕೆ ಮುಂಬೈ ತಂಡದ ನಾಯಕ ರೋಹಿತ್‌ ಶರ್ಮ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ಪೊವೆಲ್‌ ಬಿ ಕುಲದೀಪ್‌ 41
ಇಶಾನ್‌ ಕಿಶನ್‌ ಔಟಾಗದೆ 81
ಅನ್ಮೋಲ್‌ಪ್ರೀತ್‌ ಸಿಂಗ್‌ ಸಿ ಲಲಿತ್‌ ಬಿ ಕುಲದೀಪ್‌ 8
ತಿಲಕ್‌ ವರ್ಮ ಸಿ ಶಾ ಬಿ ಖಲೀಲ್‌ 22
ಕೈರನ್‌ ಪೊಲಾರ್ಡ್‌ ಸಿ ಸೀಫ‌ರ್ಟ್‌ ಬಿ ಕುಲದೀಪ್‌ 3
ಟಿಮ್‌ ಡೇವಿಡ್‌ ಸಿ ಮನ್‌ದೀಪ್‌ ಬಿ ಖಲೀಲ್‌ 12
ಡೇನಿಯಲ್‌ ಸ್ಯಾಮ್ಸ್‌ ಔಟಾಗದೆ 7
ಇತರ 3
ಒಟ್ಟು (5 ವಿಕೆಟಿಗೆ) 177
ವಿಕೆಟ್‌ ಪತನ: 1-67, 2-83, 3-117, 4-122, 5-159.
ಬೌಲಿಂಗ್‌:
ಶಾರ್ದೂಲ್ ಠಾಕೂರ್ 4-0-47-0
ಖಲೀಲ್‌ ಅಹ್ಮದ್‌ 4-0-27-2
ಅಕ್ಷರ್‌ ಪಟೇಲ್‌ 4-0-40-0
ಕಮಲೇಶ್‌ ನಾಗರಕೋಟಿ 2-0-29-0
ಕುಲದೀಪ್‌ ಯಾದವ್‌ 4-0-18-3
ಲಲಿತ್‌ ಯಾದವ್‌ 2-0-15-0

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ಇಶಾನ್‌ ಬಿ ಥಂಪಿ 38
ಟಿಮ್‌ ಸೀಫ‌ರ್ಟ್‌ ಬಿ ಎಂ. ಅಶ್ವಿ‌ನ್‌ 21
ಮನ್‌ದೀಪ್‌ ಸಿಂಗ್‌ ಸಿ ತಿಲಕ್‌ ಬಿ ಎಂ. ಅಶ್ವಿ‌ನ್‌ 0
ರಿಷಭ್‌ ಪಂತ್‌ ಸಿ ಡೇವಿಡ್‌ ಬಿ ಮಿಲ್ಸ್‌ 1
ಲಲಿತ್‌ ಯಾದವ್‌ ಔಟಾಗದೆ 48
ಪೊವೆಲ್‌ ಸಿ ಸ್ಯಾಮ್ಸ್‌ ಬಿ ಥಂಪಿ 0
ಶಾರ್ದೂಲ್ ಠಾಕೂರ್ ಸಿ ರೋಹಿತ್‌ ಬಿ ಥಂಪಿ 22
ಅಕ್ಷರ್‌ ಪಟೇಲ್‌ ಔಟಾಗದೆ 38
ಇತರ 11
ಒಟ್ಟು (18.2 ಓವರ್‌ಗಳಲ್ಲಿ 6 ವಿಕೆಟಿಗೆ) 179
ವಿಕೆಟ್‌ ಪತನ: 1-30, 2-30, 3-32, 4-72, 5-72, 6-104.
ಬೌಲಿಂಗ್‌:
ಡೇನಿಯಲ್‌ ಸ್ಯಾಮ್ಸ್‌ 4-0-57-0
ಜಸ್‌ಪ್ರೀತ್‌ ಬುಮ್ರಾ 3.2-0-43-0
ಬಾಸಿಲ್‌ ಥಂಪಿ 4-0-35-3
ಮುರುಗನ್‌ ಅಶ್ವಿ‌ನ್‌ 4-0-14-2
ಟೈಮಲ್‌ ಮಿಲ್ಸ್‌ 3-0-26-1
ಪಂದ್ಯಶ್ರೇಷ್ಠ: ಕುಲದೀಪ್‌ ಯಾದವ್‌

 

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್‌ ಟೈಟಾನ್ಸ್‌ ರೋಡ್‌ ಶೋ; ಐಪಿಎಲ್‌ ಬೆಸ್ಟ್‌ ಇಲೆವೆನ್‌

ಗುಜರಾತ್‌ ಟೈಟಾನ್ಸ್‌ ರೋಡ್‌ ಶೋ; ಐಪಿಎಲ್‌ ಬೆಸ್ಟ್‌ ಇಲೆವೆನ್‌

1-wtwtw

ಆರೆಂಜ್ ಕ್ಯಾಪ್ ವಿಜೇತ ಜೋಸ್ ಬಟ್ಲರ್ ಗೆ ತೀವ್ರ ನಿರಾಸೆ ತಂದಿಟ್ಟ ಫೈನಲ್ ಸೋಲು

ರಣವೀರ್‌-ರೆಹಮಾನ್‌ ಕಾಂಬಿನೇಶನ್‌ ಐಪಿಎಲ್‌ ಜೈ ಹೋ

ರಣವೀರ್‌-ರೆಹಮಾನ್‌ ಕಾಂಬಿನೇಶನ್‌ ಐಪಿಎಲ್‌ ಜೈ ಹೋ

ಐಪಿಎಲ್‌ T20 ಫೈನಲ್ : ಗುಜರಾತ್‌ ಟೈಟಾನ್ಸ್‌ ಗೆ ಚಾಂಪಿಯನ್‌ ಪಟ್ಟ

ಐಪಿಎಲ್‌ T20 ಫೈನಲ್ : ಗುಜರಾತ್‌ ಟೈಟಾನ್ಸ್‌ ಗೆ ಚಾಂಪಿಯನ್‌ ಪಟ್ಟ

1-sad-dad

ಐಪಿಎಲ್‌ ಫೈನಲ್‌: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್‌ ರಾಯಲ್ಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.